ಅರಣ್ಯ ಇಲಾಖೆ ಇರಿಸಿದ್ದ ಕೆಮರಾದಲ್ಲಿ ಸಿಕ್ಕಿ ಬಿದ್ದ ಬೇಟೆಗಾರರು
Team Udayavani, Dec 22, 2018, 11:37 AM IST
ಸಿದ್ದಾಪುರ: ಕಳ್ಳ ಬೇಟೆಯಾಡಲು ಹೋದವರು ಅರಣ್ಯ ಇಲಾಖೆ ಇಟ್ಟಿದ್ದ ಕೆಮರಾ ಮೂಲಕ ಸಿಕ್ಕಿ ಬಿದ್ದಿರುವ ಘಟನೆ ಕಿಳಂದೂರು ಅರಣ. ವ್ಯಾಪ್ತಿಯಲ್ಲಿ ಸಂಭವಿಸಿದೆ. ಕೆಮರಾದಲ್ಲಿ ಬೇಟೆಗಾರರು ಕಂಡು ಬಂದ ಕೂಡಲೇ ಕಾರ್ಯಪ್ರವೃತ್ತವಾದ ಇಲಾಖೆ ಸಿಬಂದಿ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುದುರೆಮುಖ ವನ್ಯಜೀವಿ ವಿಭಾಗದ ಕಿಳಂದೂರು ಅರಣ್ಯ ವ್ಯಾಪ್ತಿಯಲ್ಲಿ ಮೂಗ್ಮನೆ ಬಳಿ ಅಳವಡಿಸಿದ ಕೆಮರಾ ಟ್ರಾಪ್ನಲ್ಲಿ ಇಬ್ಬರು ಕೋವಿ ಹಿಡಿದು ಅಭಯಾರಣ್ಯ ಪ್ರವೇಶಿಸುವುದು ಕಂಡಿದ್ದು, ಕೂಡಲೇ ಸಿದ್ದಾಪುರ ವನ್ಯಜೀವಿ ವಲಯದವರು ತತ್ ಕ್ಷಣ ಕಾರ್ಯಾಚರಣೆ ನಡೆಸಿ ಹೊಸನಗರ ತಾಲೂಕಿನ ಹಲಸಿನ ಹಳ್ಳಿಯ ಕರಿಮನೆ ಗ್ರಾಮದ ಈರಪ್ಪ ಗೌಡನನ್ನು ಬಂಧಿಸಿದರು. ಜತೆಗಿದ್ದ ಹೊಸನಗರ ತಾಲೂಕು ಜಯನಗರದ ರಾಮಪ್ಪ ಗೌಡ ಪರಾರಿಯಾಗಿದ್ದಾನೆ. ಬಂಧಿತನನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ಭಟ್ ಮಾರ್ಗದರ್ಶನದಲ್ಲಿ ಸಿದ್ದಾಪುರ ವನ್ಯಜೀವಿ ವಲಯದ ಸಹಾ ಯಕ ಅರಣ್ಯ ಸಂರಕ್ಷಣಾಧಿಕಾರಿ ಭಗವಾನ್ದಾಸ್, ವಲಯ ಅರಣ್ಯಾಧಿಕಾರಿಗಳಾದ ಸವಿತಾ ಆರ್. ದೇವಾಡಿಗ, ವಾಣಿಶ್ರೀ ಹೆಗ್ಡೆ, ಉಪ ವಲಯ ಅರಣ್ಯಾಧಿಕಾರಿಗಳಾದ ಪೂರ್ಣಾ ನಂದ, ಮಂಜುನಾಥ ಎಸ್., ಅರಣ್ಯ ರಕ್ಷಕರಾದ ಕೇಶವ, ರಾಮಚಂದ್ರ, ಪ್ರಜ್ವಲ್, ರವಿ ಕುಮಾರ್, ವಾಹನ ಚಾಲಕ ಶಶಿಧರ ಶೆಟ್ಟಿ ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕೆಮರಾ ಟ್ರಾಪ್ ಕುರಿತು
ಇವು ಅರಣ್ಯ ಇಲಾಖೆಯು ಪ್ರಾಣಿಗಳ ಚಲನವಲನ, ಅವುಗಳ ಗಣತಿ ಹಾಗೂ ಕಳ್ಳರ ಬಗ್ಗೆ ಮಾಹಿತಿ ಸಂಗ್ರಹಿಸಲು ಕಾಡಿನಲ್ಲಿ ಅಳವಡಿಸಿರುವ ಕೆಮರಾಗಳು. ಇವು ತನ್ನೆದುರು ಹಾದುಹೋಗುವ ವಸ್ತುವಿನ ಚಲನೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ವನ ವ್ಯಾಪ್ತಿಯ ವಿವಿಧೆಡೆ ಕೆಮರಾ ಅಳ ವಡಿಸಲಾಗಿದ್ದು, ಅರಣ್ಯ ಸಂರಕ್ಷಣೆ ದೃಷ್ಟಿಯಿಂದ ಉತ್ತಮವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!
MUST WATCH
ಹೊಸ ಸೇರ್ಪಡೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು