ಚಂಡಮಾರುತ: ಮೀನುಗಾರಿಕೆ ಬಲಾತ್ಕಾರದ ಸ್ಥಾಗಿತ್ಯ
Team Udayavani, May 22, 2018, 10:15 AM IST
ಉಡುಪಿ: ನಾಲ್ಕೈದು ದಿನಗಳ ಹಿಂದೆ ಒಂದು, ಈಗ ಮತ್ತೂಂದು ಚಂಡಮಾರುತ ಭೀತಿ ಕರ್ನಾಟಕದ ಕರಾವಳಿಯನ್ನು ಬಲಾತ್ಕಾರದ ಮೀನುಗಾರಿಕೆ ಸ್ಥಾಗಿತ್ಯಕ್ಕೆ ಒಡ್ಡಿದೆ. ಹೀಗಾಗಿ ಸಾಮಾನ್ಯವಾಗಿ ಜೂ. 1ರಿಂದ ಜು. 31ರ ವರೆಗೆ ಒಟ್ಟು 61 ದಿನಗಳ ಇರುವ ಮೀನುಗಾರಿಕೆ ನಿಷೇಧದ ಅವಧಿ ಮತ್ತೂ ಸುಮಾರು 15 ದಿನಗಳಿಗೆ ವಿಸ್ತರಣೆಯಾದಂತಾಗಿದೆ.
ಮೀನುಗಾರಿಕಾ ಉತ್ಪನ್ನವನ್ನು ಲೆಕ್ಕ ಹಾಕುವ ವಾರ್ಷಿಕ ಅವಧಿ ಆಗಸ್ಟ್ 1ರಿಂದ ಮೇ 31. 2017-18ನೆಯ ಈ ಸಾಲಿನಲ್ಲಿ 1.4 ಲ.ಮೆ. ಟನ್ ವಾರ್ಷಿಕ ಉತ್ಪಾದನೆಯ ಗುರಿ ಇದೆ. ಮಾರ್ಚ್ ಕೊನೆಯ ವರೆಗೆ 1.28 ಲ.ಮೆ. ಟನ್ ಉತ್ಪಾದನೆಯಾಗಿದ್ದು, ಮೇ ಕೊನೆಯೊಳಗೆ ಗುರಿಗಿಂತ ಸ್ವಲ್ಪ ಕಡಿಮೆ ಉತ್ಪಾದನೆಯಾಗಬಹುದು ಎಂದು ಇಲಾಖೆ ಅಂದಾಜಿಸಿದೆ. ಹೋದ ವರ್ಷವೂ 1.3 ಲ.ಮೆ. ಟನ್ ವಾರ್ಷಿಕ ಗುರಿ ಇರಿಸಿಕೊಳ್ಳಲಾಗಿತ್ತು. ಉತ್ಪಾದನೆಯೂ ಇದಕ್ಕೆ ಸರಿಯಾಗಿ ಆಗಿತ್ತು.
ಎಚ್ಚರಿಕೆ ಕೊಟ್ಟರೂ ಮೀನುಗಾರರಿಗೆ ತೂಫಾನಿನ ಒಳಗುಟ್ಟು ಗೊತ್ತಿರುತ್ತದೆ. ಹೀಗಾಗಿ ದೊಡ್ಡ ಬೋಟುಗಳು ಮೀನುಗಾರಿಕೆಗೆ ತೆರಳುವುದೇ ಹೆಚ್ಚು. ಸಮಸ್ಯೆ ತಿಳಿಯುತ್ತಿದ್ದಂತೆ ಹೊನ್ನಾವರ, ಗೋವಾ ಇತ್ಯಾದಿ ಬಂದರುಗಳಿಗೆ ಹೋಗಿ ರಕ್ಷಣೆ ಪಡೆಯುತ್ತಾರೆ. ಈ ಬಾರಿಯೂ ಬೋಟುಗಳು ಮೀನುಗಾರಿಕೆಗೆ ತೆರಳಿವೆ.
ಅದೃಷ್ಟದ ಸಾಧ್ಯತೆ!
ಈ ವರ್ಷ ಇತ್ತೀಚೆಗೆ 15 ದಿನಗಳ ಹಿಂದಿನ ವರೆಗೂ ಮೀನುಗಾರಿಕೆ ನಷ್ಟದಲ್ಲಿತ್ತು. ಕೆಲವು ಬಾರಿ ಚಂಡಮಾರುತ ಬಂದು ಕಡಲಿನಲ್ಲಿ ನೀರು ಮೇಲೆ ಕೆಳಗೆ ಆಗುವಾಗ ಮೀನು ಹೆಚ್ಚು ಸಿಗುವ ಸಾಧ್ಯತೆಯೂ ಇರುತ್ತದೆ ಎಂದು ಮೀನುಗಾರ ಮುಖಂಡರು ಅಭಿಪ್ರಾಯಪಡುತ್ತಾರೆ.
ಆಗಸ್ಟ್, ಸೆಪ್ಟಂಬರ್, ಮೇಯಲ್ಲಿ ನೈಸರ್ಗಿಕ ಅಡೆ ತಡೆ ಬರುತ್ತದೆ. ಮೀನುಗಾರಿಕೆ ಉತ್ಪಾದನೆ ಮೇಲೆ ದೊಡ್ಡ ಪರಿಣಾಮ ಇಲ್ಲ. ಬೋಟುಗಳ ಸಂಖ್ಯೆ ಏರಿಕೆ ಯಾಗುತ್ತದೆ. ಬೆಲೆ ಲೆಕ್ಕಾಚಾರದ ಮೇಲೆ ಡೀಸೆಲ್ ದರ ಹೆಚ್ಚಳವೂ ಪರಿಣಾಮ ಬೀರುತ್ತವೆ. ಮೀನು ಗಾರಿಕೆ ವೆಚ್ಚ ಹೆಚ್ಚಳವಾಗುವುದರಿಂದ ಲಾಭದ ಮೇಲೂ ಪರಿಣಾಮ ಇದೆ.
– ಪಾರ್ಶ್ವನಾಥ ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ