ಜಲಕೃಷಿ: ಹೈನುಗಾರರ ಆಶಾಕಿರಣ 


Team Udayavani, Jun 11, 2018, 6:10 AM IST

grass3.jpg

ಉಡುಪಿ: ಇರುವುದು  ಸ್ವಲ್ಪ ಜಾಗ, ಹೈನುಗಾರಿಕೆ ಮಾಡಬೇಕೆಂಬ ಉತ್ಕಟ ಆಸೆ ಇದ್ದರೂ ಜಾಗದ ಕೊರತೆ, ಮೇವಿನ ಕೊರತೆ, ಈ ಎಲ್ಲ ಸಮಸ್ಯೆಗಳಿಂದ ಹೈರಾಣಾದವರು ಹೈನುಗಾರಿಕೆ ಸಹವಾಸವೇ ಬೇಡ ಎಂದುಕೊಂಡಿದ್ದವರಿಗೆ ಜಲ ಕೃಷಿಯಲ್ಲಿ  ಪರಿಹಾರ ಸಿಕ್ಕಿದೆ. 45 ಸಾವಿರ ರೂ. ಆರಂಭಿಕ ಹೂಡಿಕೆಯಿಂದ, ಪ್ರತಿ ವಾರ ಸುಮಾರು 100 ಚದರ ಅಡಿ ಪ್ರದೇಶದಲ್ಲಿ 100 ಕೆ.ಜಿ. ಮೇವು ಉತ್ಪಾದಿಸಬಹುದು ಈ ಜಲ ಕೃಷಿ ವಿಧಾನದಲ್ಲಿ. 

ಏನಿದು ಜಲ ಕೃಷಿ!
ಮಣ್ಣಿನ ಬಳಕೆಯಿಲ್ಲದೆ ಸಸ್ಯಗಳನ್ನು ಬೆಳೆಸುವ ವಿಧಾನವಾಗಿದ್ದು, ಸಸ್ಯಗಳಿಗೆ ತೇವಾಂಶ ಮತ್ತು ಪೋಷಕಾಂಶಗಳನ್ನು ಮಾತ್ರ ಒದಗಿಸಲಾಗುತ್ತದೆ. ಇದನ್ನು ಹೈಡ್ರೋಫೋನಿಕ್‌ ವಿಧಾನವೆಂದು ಕರೆಯಲಾಗುತ್ತದೆ.ಈ ವಿಧಾನದಲ್ಲಿ ವರ್ಷದ 365 ದಿನವೂ ನಿರ್ದಿಷ್ಟ  ಪ್ರಮಾಣದ ಹಸುರು ಮೇವು ಲಭ್ಯವಾಗಲಿದ್ದು, ಹೈನುಗಾರಿಕೆಗೆ ಬಳಸುವ ಇತರ ಪೌಷ್ಟಿಕಾಹಾರಗಳನ್ನು ಕೂಡ ನಿಯಂತ್ರಿಸಬಹುದು.
 
ರಾಸುಗಳಿಗೆ ಬೇಕಾದ ಮೇವನ್ನು ಹಸುರು ಮನೆಯಲ್ಲಿ ಕೇವಲ ನೀರನ್ನು ಬಳಸಿ ಬೆಳೆಸುವ ವಿಧಾನವಾಗಿದ್ದು, ಇದಕ್ಕೆ ಕೇವಲ 100 ಚದರ ಅಡಿ ಸ್ಥಳಾವಕಾಶವಿದ್ದರೆ ಸಾಕು. ಮೆಕ್ಕೆ ಜೋಳ ಅಥವಾ ಬೇರೆ ಯಾವುದೇ ಬೀಜಗಳನ್ನು  24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಮಾರನೇ ದಿನ ಅದನ್ನು ಹಸಿ ಗೋಣಿ ಚೀಲದಲ್ಲಿ ಬಿಗಿಯಾಗಿ ಕಟ್ಟಬೇಕು. ಅದಕ್ಕೆ ಪ್ರತಿ 2 ಗಂಟೆಗಳಿಗೊಮ್ಮೆ ನೀರು 2- 3 ಲೀಟರ್‌ ಹಾಕಬೇಕು.  ಮೂರನೇ ದಿನಕ್ಕೆ  ಮೊಳಕೆ ಬಂದ ಬೀಜಗಳು ಜಲಕೃಷಿ ಟ್ರೇ ನಲ್ಲಿ ಹಾಕಿ ಘಟಕದ ಒಳಗೆ ಇಡಬೇಕು. ನಾಲ್ಕನೇ ದಿನದಿಂದ 9ನೇ ದಿನದ ವರೆಗೆ ನಿರಂತರವಾಗಿ ತುಂತುರು ನೀರಾವರಿ ಟೈಮ್‌ ಸೆನ್ಸಾರ್‌ ನೀಡಬೇಕಾಗುತ್ತದೆ. 9ನೇ ದಿನ ಈ ಮೇವನ್ನು  ರಾಸುಗಳಿಗೆ ನೀಡಬಹುದು. ಪ್ರತಿ ನಿತ್ಯ ಎಷ್ಟು ಮೇವು ಬೇಕಾಗುತ್ತದೆ ಎನ್ನುವ ಆಧಾರದ ಮೇಲೆ ಯೋಜನೆ ಮಾಡಿಕೊಂಡು ಬೆಳೆಸಬೇಕಾಗುತ್ತದೆ. ಪ್ರತಿ ಕೆ.ಜಿ. ಮೇವು ಉತ್ಪಾದನೆಗೆ 2.50 ರೂ. ಖರ್ಚು ಬೀಳುತ್ತದೆ. ಇದರಿಂದ ವರ್ಷದ 365 ದಿನವೂ ರಾಸುಗಳಿಗೆ ಪೋಷಕಾಂಶಯುಕ್ತ ಹಸುರು ಹುಲ್ಲು ಸಿಗಲಿದೆ. 

ಹೈನುಗಾರರಿಗೆ ವರದಾನ
ಬೀಜಗಳ ಆಯ್ಕೆ ಮಾಡುವಾಗ ಆರೋಗ್ಯವಂತ ಬೀಜಗಳನ್ನು ಆಯ್ಕೆ ಮಾಡಬೇಕು ಮತ್ತು ಹಸುರು ಮನೆಯಲ್ಲಿ ಉಷ್ಣಾಂಶ 25ರಿಂದ 27 ಡಿಗ್ರಿಯಷ್ಟು ಇರುವ ಹಾಗೆ ನೋಡಿಕೊಳ್ಳಬೇಕು. ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ, ಪೋಷಕಾಂಶಯುಕ್ತ ಮೇವು ಉತ್ಪಾದಿಸುವ ಈ ವಿಧಾನವೆನ್ನುವುದು ಹೈನುಗಾರರಿಗೆ ವರದಾನವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದದಲ್ಲಿ  ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ದೂ.ಸಂ. 0820- 2563923 ಅನ್ನು ಸಂಪರ್ಕಿಸಬಹುದು. 

ಬೇಕಾಗಿರುವುದು
– 100 ಚದರ ಅಡಿ ಸ್ಥಳ 
–  ಶೇ. 50: 50ರ ಅನುಪಾತದ ಹಸುರು ಪರದೆ ಮನೆ
- ತುಂತುರು ನೀರಾವರಿ ವ್ಯವಸ್ಥೆ
- ಅರ್ಧ ಅಥವಾ ಒಂದು ಎಚ್‌.ಪಿ. ನೀರಿನ ಮೋಟಾರ್‌
- ನೀರಿನ ಟ್ಯಾಂಕ್‌
- ಟೈಮ್‌ ಸೆನ್ಸಾರ್‌
- ಜಲಕೃಷಿ  ಘಟಕ

– ಹರೀಶ್‌ ಕಿರಣ್‌ ತುಂಗ,ಸಾಸ್ತಾನ 

ಟಾಪ್ ನ್ಯೂಸ್

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Gangolli: ರಿಕ್ಷಾ-ಕಾರು ಢಿಕ್ಕಿ

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.