ಎಚ್ಚೆತ್ತು, ಜಾಗೃತರಾದರೆ ನೀರಿಗೆ ಬರವಿಲ್ಲ: ಶ್ರೀನಿವಾಸ


Team Udayavani, May 17, 2019, 6:20 AM IST

srinivasa

ಉಡುಪಿ: ಕೃಷಿಯಿಂದ ವಿಮುಖರಾಗಿ ಆಧುನಿಕತೆ, ಅಲಂಕಾರಗಳ ಭರದಲ್ಲಿ ಇಂಟರ್‌ಲಾಕ್‌ ಹಾಕಿದ ಮನೆಯಂಗಳ-ಕಟ್ಟಡ ವಠಾರ, ಎಲ್ಲೆಡೆ
ಕಾಂಕ್ರೀಟ್‌ ಹಾಕಿದ ಚರಂಡಿ ವ್ಯವಸ್ಥೆ, ಹಡೀಲು ಬಿಟ್ಟ ಕೃಷಿ ಭೂಮಿ, ಕಾಡು-ವನ ನಾಶ, ಮೂಲ ನೀರಿನ ಸೆಲೆಗಳನ್ನು ಮುಚ್ಚಿ ಸೈಟ್‌ ನಿರ್ಮಾಣ, ಕಟ್ಟ ಹಾಕದ ತೋಡುಗಳು ನೀರನ್ನು ಎಂದೂ ಇಂಗಿಸಿ ಹಿಡಿದಿಟ್ಟು ಕೊಳ್ಳಲಾರವು. ಇವುಗಳನ್ನು ನಾವೇ ನಾಶ ಮಾಡಿ ಈಗ ನೀರಿನ ಬರಕ್ಕೆ ಹಳ್ಳಿ ಹಳ್ಳಿಗಳಲ್ಲೂ ಹಾಹಾಕಾರ ಎಬ್ಬಿಸುತ್ತಿದ್ದೇವೆ. ಇನ್ನಾದರೂ ನಾವೆಲ್ಲ ಎಚ್ಚೆತ್ತು
ಕೊಳ್ಳಬೇಕಾಗಿದೆ ಎಂದು ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್‌ ಮಲ್ಲಂಪಳ್ಳಿ ಅಭಿಪ್ರಾಯಪಟ್ಟರು.

ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿಯಿಂದ ಪೆರಂಪಳ್ಳಿ ಶ್ರೀ ಬೊಬ್ಬರ್ಯ ಕಟ್ಟೆ ವಠಾರದಲ್ಲಿ ಆಯೋಜಿಸಲಾದ ಕೃಷಿ ವಿಚಾರಧಾರೆ, ವಾರ್ಷಿಕ ಹಬ್ಬ “ಸಿರಿತುಪ್ಪೆ-2019′ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎರ್ಮಾಳು ಬಡಾ ಸರಕಾರಿ ಕಾಲೇಜು
ಪ್ರಾಂಶುಪಾಲೆ ಜ್ಯೋತಿ ಚೇಳಾÂರ್‌ ಮಾತನಾಡಿ, ಅನಾದಿ ಕಾಲದಿಂದಲೂ ಕೃಷಿಯ ಮೂಲ ಕಾರಣಕರ್ತಳೇ ಸಿರಿ (ಸ್ತ್ರೀ). ಅತ್ತ ಪುರುಷರು ಮೃಗ ಭೇಟೆಗೆ ಹೊರಟರೆ, ಇತ್ತ ಪ್ರಾಣಿ-ಪಕ್ಷಿಗಳು ತಿನ್ನುವ-ತಿನ್ನದ ಸಸ್ಯ-ಪ್ರಾಣಿಜನ್ಯ ಆಹಾರ ವಸ್ತುಗಳನ್ನು ಸ್ತ್ರೀ ಗಮನಿಸುತ್ತಾ ಕೃಷಿ-ಸಾಕು ಪ್ರಾಣಿಗಳ ಪಾಲನೆ ಆರಂಭಿಸಿದಳು. ಈಗ ಭೂಮಿ ತಾಯಿಯೊಂದಿಗೆ ನಮ್ಮ ಶ್ರಮ ಸಂಸ್ಕೃತಿ ಮರೆಯಾಗಿ ವ್ಯವಹಾರ ಸಂಸ್ಕೃತಿ ಹುಟ್ಟಿಕೊಂಡಿರುವುದೇ ಇಂದಿನ ದುರಂತ, ದುಸ್ತಿತಿಗಳಿಗೆ ಕಾರಣ ಎಂದರು.

ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಕಾರ್ಯಕ್ರಮ ಉದ್ಘಾಟಿಸಿದರು. ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶ್ರೀಯಾನ್‌ ಅಧ್ಯಕ್ಷತೆ ವಹಿಸಿದ್ದರು. ಕೃಷಿಕರ ಅಭಿವೃದ್ಧಿಗೆ ಸ‌ಮಗ್ರ ಕೃಷಿ ಕುರಿತು ಜಿಲ್ಲಾ ಕೃಷಿಕ ಸಂಘದ ಪ್ರ.ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್‌ ಮಾಹಿತಿ ನೀಡಿದರು. ಪೆರಂಪಳ್ಳಿ ಫಾತಿಮಾ ಚರ್ಚ್‌ ಧರ್ಮಗುರು ರೆ|ಫಾ| ಅನಿಲ್‌ ಡಿ’ಸೋಜಾ ಆಶೀರ್ವಚನ ನೀಡಿದರು.

ಪೆರಂಪಳ್ಳಿಯ ಹಿರಿಯ ಕೃಷಿಕ ಅಂತಪ್ಪ ಪೂಜಾರಿ, ಚೇರ್ಕಾಡಿ ಸಮೃದ್ಧಿ ಮಹಿಳಾ ಮಂಡಳಿಯ ಪ್ರಸನ್ನಾ ಪಿ. ಭಟ್‌, ಸಿರಿತುಳು ಚಾವಡಿ ಅಧ್ಯಕ್ಷ ಈಶ್ವರ್‌ ಚಿಟಾ³ಡಿ, ಉಡುಪಿ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್‌, ಪೆರಂಪಳ್ಳಿ ಬೊಬ್ಬರ್ಯ ದೈವಸ್ಥಾನದ ಧರ್ಮದರ್ಶಿ ಶಶಿಧರ ರಾವ್‌, ಹೆಲೆನ್‌ ಪಿಂಟೋ, ಪ್ರೇಮಾ ಪೂಜಾರಿ, ರಾಫಾಯಿಲ್‌ ಡಿ’ಸೋಜಾ,
ಶಂಕರ ಕೋಟ್ಯಾನ್‌, ಪೀಟರ್‌ ಡಿ’ಸೋಜಾ, ಬೆನೆಡಿಕ್ಟ್ ಪೆರಂಪಳ್ಳಿ, ರವೀಂದ್ರ ಗುಜ್ಜರಬೆಟ್ಟು ಉಪಸ್ಥಿತರಿದ್ದರು.

ಪೆರಂಪಳ್ಳಿ ವಲಯದ ಪ್ರಗತಿಪರ ಕೃಷಿಕ ದುಗ್ಗಪ್ಪ ಪೂಜಾರಿ ಶೀಂಬ್ರ, ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಿದ ಕಾಳು ನಾಯ್ಕ ಅವರನ್ನು ಸಮ್ಮಾನಿಸಲಾಯಿತು. ಸಿರಿ ತುಳು ಚಾವಡಿ ತಂಡ, ಸ್ಥಳೀಯರಿಂದ ನೃತ್ಯ ವೈವಿಧ್ಯ, ಅಂಗಣದ ಐಸಿರಿ- ತುಳು ಜಾನಪದ ನಲಿಕೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀಕಾಂತ ಶೆಟ್ಟಿ ಕಾರ್ಕಳ ನಿರ್ವಹಿಸಿದರು. ರವೀಂದ್ರ ಪೂಜಾರಿ ಶೀಂಬ್ರ ನಿರೂಪಿಸಿ, ರಾಜೇಶ್‌ ಪೆರಂಪಳ್ಳಿ ವಂದಿಸಿದರು.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.