ಅಕ್ರಮ ಮನೆ ಕೆಡವಿದ ಪ್ರಕರಣ: ಸಚಿವೆ ಜಯಮಾಲಾ ಪರಿಶೀಲನೆ
Team Udayavani, Mar 3, 2019, 12:30 AM IST
ಬೆಳ್ಮಣ್: ಜಂತ್ರದ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದರೆಂಬ ಆರೋಪದಲ್ಲಿ ಪಂಚಾಯತ್ ಆಡಳಿತ ಮನೆಗಳನ್ನು ಕೆಡವಿದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರೆನ್ನಲಾದವರ ಜತೆ ಮಾತುಕತೆ ನಡೆಸಿದರು. ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ದೊರಕಿಸುವುದಾಗಿ ಸಚಿವೆ ಭರವಸೆ ನೀಡಿದರು.
ಅಕ್ರವಾಗಿ ಕಟ್ಟಿದ್ದರೆನ್ನಲಾದ 5 ಮನೆಗಳನ್ನು ಎರಡು ದಿನಗಳ ಹಿಂದೆ ಬೆಳ್ಮಣ್ ಪಂಚಾಯತ್ನ ನಿರ್ಣಯದಂತೆ ಪಿಡಿಒ ಪ್ರಕಾಶ್ ಅವರು ಪೊಲೀಸ್ ಬಂದೋಬಸ್ತ್ನಲ್ಲಿ ಕೆಡವಿದ್ದರು. ಈ ಬಗ್ಗೆ ಜನರಲ್ಲಿ ಪರ – ವಿರೋಧ ನಿಲುವುಗಳು ವ್ಯಕ್ತವಾಗಿದ್ದು 5 ಕುಟುಂಬಗಳು ಬೀದಿಪಾಲಾದ ಬಗ್ಗೆ ಅನುಕಂಪದ ಅಲೆ ವ್ಯಕ್ತವಾಗಿತ್ತು. ಆದರೆ ಪಂಚಾಯತ್ ಆಡಳಿತ ಕಾನೂನಾತ್ಮಕವಾಗಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದೆ.
ಕಾಂಗ್ರೆಸ್ ಪಕ್ಷದ ನಾಯಕ ಜಿ.ಎ. ಬಾವಾ, ವಿಘ್ನೇಶ್ ಕಿಣಿ, ಉಮೇಶ್ ಕಲ್ಲೊಟ್ಟೆ, ಬೆಳ್ಮಣ್ ಪಂಚಾಯತ್ ಸದಸ್ಯ ಜನಾರ್ದನ ತಂತ್ರಿ ಸಚಿವರ ಭೇಟಿ ವೇಳೆ ಉಪಸ್ಥಿತರಿದ್ದರು.
ಗ್ರಾಮಸ್ಥರಿಂದ ತರಾಟೆ
ಪ್ರಕರಣದ ಬಗ್ಗೆ ತಿಳಿಯಲು ಬಂದಿದ್ದ ಸಚಿವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.ಮನೆ ನಿರ್ಮಿಸಿದವರು ಅಕ್ರಮವಾಗಿಯೇ ವ್ಯವಹರಿಸಿದ್ದು ಸರಕಾರಿ ಜಮೀನು ಕಬಳಿಕೆಯ ವಿರುದ್ಧ ತಮ್ಮ ಹೋರಾಟ ನಡೆಯಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ