ಅಕ್ರಮ ಮರಳು ಮಾಫಿಯಾ: ಬೆರಗಾದ ಜಿಲ್ಲೆಯ ಜನತೆ


Team Udayavani, Apr 6, 2017, 2:06 PM IST

06-REPORTER-10.jpg

ಕುಂದಾಪುರ: ಕಳೆದ ಒಂದು ವರ್ಷದಿಂದ ಅಕ್ರಮ ಮರಳುಗಾರಿಕೆಯ ದಂಧೆಗೆ ತತ್ತರಿಸಿ ಹೋದ  ತಾಲೂಕು ಪ್ರಸಕ್ತವಾಗಿ ಎರಡು ದಿನಗಳ ಕಾಲ ಈ ದಂಧೆಗೆ ಬ್ರೇಕ್‌  ದೊರಕಿದ್ದರೂ ಅದೇ ಅಡ್ಡೆಗಳಲ್ಲಿ  ಪುನಃ ಸಣ್ಣ ಪ್ರಮಾಣದಲ್ಲಿ  ಅಕ್ರಮ ಮರಳುಗಾರಿಕೆಗಳು ಆರಂಭವಾಗಿದೆ ಎನ್ನುವ ಸುದ್ದಿಗಳು ಕೇಳಿಬಂದಿವೆ.

ಕಂಡೂರಿನಲ್ಲಿ  ರವಿವಾರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳ ಮೇಲೆ  ನಡೆದ ಹಲ್ಲೆಯ ಘಟನೆಯ ಅನಂತರ ಮರಳು ಅಡ್ಡೆೆಗಳಲ್ಲಿ ಯಾವುದೇ ಚಟುವಟಕೆಗಳು ಕಂಡು ಬರದಿದ್ದರೂ ಒಳನಾಡಿಗ ಕೆಲವು ಕಡೆಗಳಲ್ಲಿ ಸಣ್ಣಪ್ರಮಾಣದಲ್ಲಿ  ಕದ್ದು ಮುಚ್ಚಿ ಮತ್ತೆ ಈ ದಂಧೆ ಆರಂಭವಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.  ಆದರೆ ಹೆಚ್ಚಿನ ಎಲ್ಲ ದಕ್ಕೆಗಳಲ್ಲೂ  ಮೇಲ್ನೊಟಕ್ಕೆ ಯಾವುದೇ ಮರಳುಗಾರಿಕೆ ಕಂಡು ಬಂದಿಲ್ಲ. ಕಂಡೂರು ಹಾಗೂ ಹಳ್ನಾಡು ಮರಳುಗಾರಿಕಾ ಪ್ರದೇಶದಲ್ಲಿ ಪೊಲೀಸ್‌ ಕಣ್ಗಾವಲನ್ನು ಒದಗಿಲಾಗಿದೆ.  ರವಿವಾರದ ಘಟನೆಯ ಅನಂತರ ಎರಡು ದಿನಗಳ ಕಾಲ ಯಾವುದೇ ಮರಳುಗಾರಿಕೆ  ಚಟುವಟಿಕೆಗಳು ನಡೆಯದಿದ್ದರೂ ಮೊಳಹಳ್ಳಿ, ಹಟ್ಟಿಯಂಗಡಿಗಳಲ್ಲಿ ಸಣ್ಣ ಪ್ರಮಾಣದ ಮರಳುಗಾರಿಕೆ ಪುನಃ ಆರಂಭವಾಗಿದೆ ಎನ್ನುವ ಅಂಶ ತಿಳಿದು ಬಂದಿದೆ.   ಆದರೆ ಕಂಡೂರು, ಹಳ್ನಾಡು, ಬಳ್ಕೂರು, ಜಪ್ತಿ, ಗುಲ್ವಾಡಿ ಭಾಗಗಳಲ್ಲಿ ಸಂಪೂರ್ಣ ಮರಳುಗಾರಿಕೆ ನಿಂತಿದೆ.

ಸಾಂಪ್ರದಾಯಿಕ ಮರಳುಗಾರಿಕೆಗೆ ಒತ್ತು  ನೀಡಲು ಆಗ್ರಹ 
ಸಾಂಪ್ರದಾಯಿಕ ಮರಳುಗಾರಿಕೆಗೆ ಒತ್ತು ನೀಡದೇ ಹಾಗೂ ಕರಾವಳಿಗೆ ಪ್ರತ್ಯೇಕ ನೀತಿಯನ್ನು ಅಳವಡಿಸುವಲ್ಲಿ ವೈಫಲ್ಯ ಕಂಡುಕೊಂಡಿರುವುದೇ ಅಕ್ರಮ ಮರಳುಗಾರಿಕೆಗೆ ಕಾರಣವಾಗಿದೆ ಎನ್ನುವುದು ಕೆಲವರ ವಾದವಾಗಿದೆ.  ಸರಕಾರ ಏಕ ರೂಪದ ಮರಳು ನೀತಿಯನ್ನು ಜಾರಿಗೆ ತಂದು ಮರಳು ಏಕರೂಪದ ನೀತಿಯಡಿ ಟೆಂಡರ್‌ ಮೂಲಕ ಮರಳು ವಿಕ್ರಯವಾದಾಗ ಮರಳು ಅಭಾವವಾಗಲು  ಒಂದು ಕಾರಣವಾದರೆ,  ಇನ್ನೊಂದೆಡೆ ಸಾಂಪ್ರದಾಯಿಕ  ಪದ್ಧತಿಯಲ್ಲಿ ಮರಳು ತೆಗೆಯುವ ಪ್ರಕ್ರಿಯೆ ನಿಂತಿರುವುದು ಇನ್ನೊಂದು ಕಾರಣವಾಗಿದೆ ಎನ್ನಲಾಗಿದೆ.  ಪ್ರತಿ ವರ್ಷ ತಮ್ಮ ತಮ್ಮ ಪರಿಸರದಲ್ಲಿ ತಮಗೆ ಕೈಗೆಟಕುವ ಮರಳನ್ನು ಸ್ವತಃ ತೆಗೆದು ಸಂಪ್ರದಾಯಬದ್ಧವಾಗಿ ಮರಳು ತೆಗೆ‌ಯುತ್ತಿದ್ದ  ಜನರಿಗೆ ಸರಕಾರದ ಈ ಹೊಸ ನೀತಿಯಿಂದ ಮರಳು ತೆಗೆಯಲು ಅವಕಾಶ ದೊರೆಯದೇ ಅವರು ಕೆಲಸ ಕಳೆದುಕೊಂಡು ಕೈ ಚೆಲ್ಲಿ ಕುಳಿತರು. ಈ ಹಂತದಲ್ಲೇ ಅಕ್ರಮ ಮರಳುಗಾರಿಕೆ ಹುಟ್ಟಿಕೊಳ್ಳಲು ಕಾರಣವಾಯಿತು ಎಂಬುದು ಹಲವರ ಅಭಿಪ್ರಾಯ.

ಸರಕಾರದ ನೀತಿ: ಅನ್ಯ ರಾಜ್ಯಕ್ಕೆ ಮರಳು 
ಸರಕಾರ ಲೋಕೋಪಯೋಗಿ ಇಲಾಖೆಯ ಟೆಂಡರ್‌ ಮೂಲಕ ಮರಳುಗಾರಿಕೆಯ ಪರವಾನಿಗೆಯನ್ನು ಕೊಡಲು ಆರಂಭಿಸಿತು. ಆದರೆ ಇಲ್ಲಿ ಪರವಾನಿಗೆ ಹೊಂದಿದವರು ಭಟ್ಕಳ, ಶಿವಮೊಗ್ಗ, ಬೆಂಗಳೂರು ಹೀಗೆ ಅನ್ಯ ರಾಜ್ಯಗಳಿಗೆ  ಮರಳನ್ನು ಕಳುಹಿಸುತ್ತಿದ್ದಾರೆ ಎನ್ನುವ ದೂರು ಗಳು ಕಂಡು ಬಂದಾಗ ಜಿಲ್ಲಾಡಳಿತ ಸೂಕ್ತ ಸ್ಥಳದಲ್ಲಿ ಚೆಕ್‌ ಪೋಸ್ಟ್‌ನ್ನು ಸ್ಥಾಪಿಸಿತ್ತಾದರೂ  ಚೆಕ್‌ ಪೋಸ್ಟ್‌ಗಳ ಮೂಲಕ ನುಸುಳಿಕೊಂಡು ಇವುಗಳು ವಹಿವಾಟು ನಡೆಸುತ್ತಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿತ್ತು.  

ಉದಯ ಆಚಾರ್‌ ಸಾಸ್ತಾನ

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.