ಯೋಗಿಗಿಂತ ನಾನು ಯೋಗ್ಯ ಹಿಂದೂ: ಸಿದ್ದು
Team Udayavani, Jan 9, 2018, 6:00 AM IST
ಕಾಪು: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗಿಂತ ನಾನು ಉತ್ತಮ ಮತ್ತು ಯೋಗ್ಯ ಹಿಂದೂ. ನನಗೆ ಮನುಷ್ಯತ್ವವಿದೆ. ಮನುಷ್ಯತ್ವ ಪ್ರಕಟಿಸಲು ಹೋದ ಕಾರಣ ನಾನು ಹಿಂದೂ ವಿರೋಧಿಯಾಗಿ ಗುರು ತಿಸಲ್ಪಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ನೈಜ ಹಿಂದೂವಾಗಿದ್ದರೆ ಸಿದ್ದರಾಮಯ್ಯ ಗೋಹತ್ಯೆ ನಿಷೇಧಿಸಲಿ ಎಂಬ ಯೋಗಿ ಆದಿತ್ಯನಾಥ್ ಹೇಳಿಕೆಗೆ ಕಾಪು ವಿನಲ್ಲಿ ತಿರುಗೇಟು ನೀಡಿದ ಅವರು, ಕರ್ನಾಟಕದಲ್ಲಿ ಈಗಾಗಲೇ ಗೋಹತ್ಯಾ ನಿಷೇಧ ಕಾನೂನು ಜಾರಿ ಯಲ್ಲಿದೆ. ಆದರೆ ಕೆಲವೊಂದು ಷರತ್ತುಗಳಿವೆ. ಆ ಕಾರಣದಿಂದ ಬಿಜೆಪಿ ಮತ್ತು ಅದರ ಸಂಘಟನೆಗಳಿಗೆ ಇದು ರುಚಿಸುತ್ತಿಲ್ಲ ಎಂದರು.
ಯೋಗಿ ಆದಿತ್ಯನಾಥ್ ಕಾವಿ ಉಟ್ಟು ತಾನೊಬ್ಬ ನೈಜ ಹಿಂದೂ ಎಂದು ಹೇಳುತ್ತಾರೆ. ಆದರೆ ಆತ ಕಾವಿ ಉಟ್ಟ ಸಾಧುವೊ ಅಥವಾ ಇನ್ನಾರೋ ಎಂದು ಪರಾಮರ್ಶಿಸಿ ಕೊಳ್ಳುವ ಅಗತ್ಯವಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಗೋಹತ್ಯೆ ಬಗ್ಗೆ ಮಾತನಾಡುವ ಯೋಗಿ, ಬಿಜೆಪಿ ಯವರಿಗೆ ಗೋವುಗಳನ್ನು ಸಾಕಿ ಅಭ್ಯಾಸವಿದೆಯೇ, ಅದರ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ ಅವರು, ಕೃಷಿಕನ ಮಗನಾದ ನಾನು ಹಸು, ಎತ್ತು, ಎಮ್ಮೆ ಹೀಗೆ ಎಲ್ಲವುಗಳ ಸೇವೆ ಮಾಡಿದ್ದೇನೆ. ಗೊಬ್ಬರ ಹೊತ್ತಿದ್ದೇನೆ, ಸೆಗಣಿ ಎತ್ತಿದ್ದೇನೆ, ಹಾಲು ಹಿಂಡಿದ್ದೇನೆ. ಯೋಗಿ ಆದಿತ್ಯನಾಥ್ ಎಂದಾದರೂ ಈ ಕೆಲಸ ಮಾಡಿದ್ದಾರೆಯೇ ಎಂದರು.
ಗೋವುಗಳನ್ನು ಕೇವಲ ಹೇಳಿಕೆ, ಪ್ರಚಾರ, ಮತ ಯಂತ್ರಕ್ಕಾಗಿ ಮಾತ್ರ ಬಳಸದಿರಿ. ಬದಲಾಗಿ ಅವುಗಳ ಬಗ್ಗೆ ಪ್ರೀತಿ ತೋರಿಸಿ. ಗೋಹತ್ಯೆ, ಹಿಂದೂ ರಕ್ಷಣೆಯ ನೆಪದಲ್ಲಿ ಅಮಾಯಕರ ಬಲಿಗೆ ಇನ್ನಾದರೂ ಮುಕ್ತಿ ನೀಡಿ ಎಂದು ಕೇಳಿಕೊಂಡ ಅವರು, ಢೋಂಗಿ ಬಿಜೆಪಿ ಯವರಿಗೆ ಎಂದಿಗೂ ಅಧಿಕಾರ ನೀಡಬೇಡಿ. ಅವರನ್ನು ಅಧಿಕಾರದಿಂದ ದೂರವಿರಿಸಿ ಎಂದು ವಿನಂತಿಸಿದರು.
ಮತೀಯ ಸಂಘಟನೆಗಳ ಮೇಲೆ ನಿಗಾ: ಮನುಷ್ಯರೇ ಅಲ್ಲದ ಬಿಜೆಪಿ ಮುಖಂಡರಿಂದ ಹಿಂದುತ್ವದ ಪಾಠ ಕಲಿಯಬೇಕಾದ ಅಗತ್ಯ ಕಾಂಗ್ರೆಸಿಗಿಲ್ಲ. ನಾವು ಹಿಂದೂ ಗಳು; ಅದರಲ್ಲೂ ಮನುಷ್ಯತ್ವವಿರುವ ಹಿಂದೂಗಳು. ಗೋಡ್ಸೆ ಆರಾಧಕರು ನಮಗೆ ಹಿಂದುತ್ವದ ಪಾಠ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೈಂದೂರು ಅರೆಶಿರೂರಿನ ಹೆಲಿಪ್ಯಾಡ್ಗೆ ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಕೋಮು ಗಲಭೆಗಳಿಗೆ ಸಂಘ ಪರಿವಾರದ ಸಂಘ ಟನೆಗಳೇ ಕಾರಣ. ಶ್ರೀರಾಮ ಸೇನೆ, ಪಿಎಫ್ಐ, ಬಜರಂಗದಳ, ಆರೆಸ್ಸೆಸ್ ಸಂಘಟನೆಗಳ ಮೇಲೆ ನಿಗಾ ಇಡಲು ಸೂಚನೆ ನೀಡಿದ್ದೇನೆ ಎಂದವರು ಹೇಳಿದರು.
ಯೋಗಿ ನಮ್ಮಲ್ಲಿಗೆ ಬಂದು ಪಾಠ ಮಾಡುವ ಅಗತ್ಯವಿಲ್ಲ. ನಮ್ಮ ರಾಜ್ಯ ನೇರ ತೆರಿಗೆಯಲ್ಲಿ ನಂ.1, ಬಂಡವಾಳ ಹೂಡಿಕೆಯಲ್ಲಿ 3ನೇ ಸ್ಥಾನದಲ್ಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ