ಶ್ರೀ ಕೃಷ್ಣಮಠದಲ್ಲೊಂದು ವಿಶಿಷ್ಟ ಆಮೆ “ಬಾಬಾ’
Team Udayavani, May 11, 2019, 6:00 AM IST
ಉಡುಪಿ: ಶ್ರೀಕೃಷ್ಣಮಠದ ಮಧ್ವಸರೋವರದಲ್ಲಿ ವಿಶಿಷ್ಟ ಗುಣದ ಆಮೆಯೊಂದಿದೆ. ಇದನ್ನು ಕರೆಯುವುದು “ಬಾಬಾ’ ಎಂದು. ಇದು ಮನುಷ್ಯರಿಗೆ ಸ್ಪಂದಿಸುವ ಗುಣ ಹೊಂದಿದೆ.
ನಿತ್ಯ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು ಸ್ನಾನಕ್ಕೆ ತೆರಳುವಾಗ ಮತ್ತು ಮಹಾಪೂಜೆ ಮುಗಿಸಿ ಬರುವಾಗ ಆಮೆ, ಮೀನು, ಪಾರಿವಾಳಗಳು, ಆನೆ, ಗೋವುಗಳಿಗೆ ಏನಾದರೂ ಆಹಾರ ಕೊಡುತ್ತಾರೆ.
ಶ್ರೀಕೃಷ್ಣಮಠದ ನೈವೇದ್ಯ ವಿಭಾಗದ ಸಿಬಂದಿ ಶ್ರೀನಿವಾಸ ಭಟ್ ಅವರು ದೇವರಿಗೆ ನೈವೇದ್ಯ ಮಾಡಿದ ದೋಸೆಯನ್ನು ಈ ಆಮೆಗೆ ನಿತ್ಯ ತಿನ್ನಿಸುವುದು ವಿಶೇಷ. ಇವರು ಬಾಬಾ ಎಂದು ಕರೆದಾಗ ನೀರಿನಿಂದ ಮೇಲೆ ಬಂದು ಕೊಟ್ಟ ಆಹಾರವನ್ನು ತಿಂದು ಮತ್ತೆ ನೀರೊಳಗೆ ಸೇರಿಕೊಳ್ಳುತ್ತದೆ. ಕೆಲವು ಬಾರಿ ಅದು ತಟದ ಮೇಲೆ ಬಂದು ಕುಳಿತುಕೊಳ್ಳುವುದೂ ಇದೆ. ಈ ಬಾಬಾ ಕೇವಲ ಸ್ವಾಮೀಜಿ, ಶ್ರೀನಿವಾಸ ಭಟ್ಟರಿಗೆ ಮಾತ್ರವಲ್ಲ ಭಕ್ತರಿಗೂ ಅಚ್ಚುಮೆಚ್ಚು.
ಕಾಸರಗೋಡಿನ ಯಾರೋ ಒಬ್ಬರು ಈ ಆಮೆಯನ್ನು ತಂದು ಬಿಟ್ಟುಹೋದರು ಎಂದು ಶ್ರೀಕೃಷ್ಣಮಠದ ಮೂಲಗಳು ತಿಳಿಸುತ್ತವೆ. ಬೇರೆ ಆಮೆ ಇದ್ದರೂ ಈ ಬಾಬಾ ಇಲ್ಲಿನವರಿಗೆ ಸ್ಪಂದಿಸುವುದು ಅಚ್ಚರಿ. 12 ವರ್ಷಗಳಿಗೊಮ್ಮೆ ಮಧ್ವ ಸರೋವರದಲ್ಲಿ ಗಂಗೆ ಉದ್ಭವವಾಗುತ್ತದೆ ಎಂದು “ಮಧ್ವವಿಜಯ’ ಗ್ರಂಥದಲ್ಲಿ ಉಲ್ಲೇಖವಿದ್ದು ಇಂತಹ ವಿಶಿಷ್ಟ ಸರೋವರದಲ್ಲಿ ವಿಶಿಷ್ಟ ಆಮೆ ಕಂಡುಬಂದಿದೆ.
ಮೀನುಗಳಿಗೆ ಹಾಕಿದಂತೆ ನೀರಿಗೆ ಆಹಾರವನ್ನು ಎಸೆದರೆ ಈ ಆಮೆ ತಿನ್ನುವುದಿಲ್ಲ. ನಾನು ಒಂದು ಬಾರಿ ಕೈಯಲ್ಲಿ ತಿನ್ನಿಸಿದೆ. ಅನಂತರ ಅಭ್ಯಾಸವಾಗಿ ನಿರಂತರವಾಗಿ ಕೈಯಲ್ಲಿ ತಿನ್ನಿಸುತ್ತಿದ್ದೇನೆ. ಮೂರ್ನಾಲ್ಕು ವರ್ಷಗಳಿಂದ ಇದು ನಡೆಯುತ್ತಿದೆ.
-ಶ್ರೀನಿವಾಸ ಭಟ್, ಶ್ರೀ ಕೃಷ್ಣಮಠದ ಸಿಬಂದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು