ಉಡುಪಿಯಲ್ಲಿಂದು ಹಲಸು ಮೇಳ ಆರಂಭ


Team Udayavani, Jun 23, 2018, 9:36 AM IST

jackfruit.jpg

ಉಡುಪಿ: ತೋಟಗಾರಿಕೆ ಇಲಾಖೆಯ ಆಯೋಜನೆಯಲ್ಲಿ ಜೂ. 23-24ರಂದು ತೋಟ ಗಾರಿಕೆ ಇಲಾಖೆಯ ದೊಡ್ಡಣಗುಡ್ಡೆ ಪುಷ್ಪ ಹರಾಜು ಕೇಂದ್ರದಲ್ಲಿ ಹಲಸು ಮೇಳವನ್ನು ಆಯೋ ಜಿಸ ಲಾಗಿದೆ. ಜೂ. 23ರ ಬೆಳಗ್ಗೆ 11ಕ್ಕೆ ಹಲಸು ಮೇಳದ ಉದ್ಘಾಟನೆ ನಡೆಯಲಿದೆ. 

ಹಲಸು ಹೆಚ್ಚಿಗೆ ಖರ್ಚಿಲ್ಲದೆ ದೊರೆಯುವ ಉತ್ಪನ್ನ. ಪ್ರತಿಯೊಬ್ಬ ರೈತರು ಬೆಳೆಸಬಹುದು. ಒಂದು ಕಾಲದಲ್ಲಿ ಅದರಷ್ಟಕ್ಕೆ ಬಿದ್ದು ಹುಟ್ಟಿ ಫ‌ಲ ನೀಡು ತ್ತಿದ್ದ ಹಲಸಿಗೆ ಈಗ ಬಹುವಿಧ ಮಾರುಕಟ್ಟೆ ಇದೆ. ಆದರೂ ಹಿಂದೆ ಇದ್ದಷ್ಟು ಮರಗಳು ಈಗ ಕಾಣುತ್ತಿಲ್ಲ. ಮಾರುಕಟ್ಟೆ ಅಬಿವೃದ್ಧಿಪಡಿಸಲು ಹಲಸಿಗೆ ಸರಕಾರ ಪ್ರೋತ್ಸಾಹ ನೀಡುತ್ತಿದೆ.  
ತೂಬುಗೆರೆ, ಸಖರಾಯಪಟ್ಟಣ, ಚೇಳೂರು ಹಾಗೂ ಖಾನಾಪುರ ಹಲಸಿನ ಬೆಳೆಯ ಪ್ರಸಿದ್ಧ ತಾಣ ವಾಗಿದೆ. ಸ್ಥಳೀಯವಾಗಿ ರೈತರಿಂದಲೇ ಹೆಸ ರಿಸಲ್ಪಡುವ ತಳಿಗಳು ಪ್ರಚಲಿತವಾಗಿರುತ್ತವೆ. ಸ್ವರ್ಣ ಎಂಬ ಹಲಸು ತಳಿಯನ್ನು ಬೆಂಗಳೂರು ಕೃಷಿ ವಿ.ವಿ. ಬಿಡುಗಡೆ ಮಾಡಿದೆ. ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರವು ದಕ್ಷಿಣ ಭಾರತದ ಸ್ಥಳೀಯ ಹೆಸರಿನ 69 ಹಲಸಿನ ತಳಿ ಸಂಗ್ರಹ ತೋಪು ನಿರ್ಮಾಣ ಮಾಡಿದೆ. ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 6 ತಳಿಗಳನ್ನು ಗುರುತಿಸಲಾಗಿದೆ.  

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕ ಮಗಳೂರು ಜಿಲ್ಲೆಗಳಲ್ಲಿ ಹಲಸಿನ ಹಣ್ಣು ತಿನ್ನುವು ದಕ್ಕಲ್ಲದೆ ಹಪ್ಪಳ, ಮಾಬಳ, ಹಲ್ವಾ ಚಿಪ್ಸ್‌, ಹಲಸಿನ ಹಣ್ಣಿನ ಸಾಟ್‌ ಮುಂತಾದ ಮೌಲ್ಯವರ್ಧಿತ ಉತ್ಪನ್ನ ಗಳಲ್ಲದೆ ಹಲಸಿನ ಇಡ್ಲಿ, ಕಬಾಬ…, ಐಸ್‌ ಕ್ರೀಮ್‌ ಮುಂತಾದ ಪದಾರ್ಥ ತಯಾರಿ ರೂಢಿಯಲ್ಲಿದೆ.

ಉದ್ಯಮ ಅವಕಾಶ 
ಇತ್ತೀಚಿನ ದಿನಗಳಲ್ಲಿ ಉದ್ದಿಮೆಗಳಲ್ಲಿ ಬಹಳಷ್ಟು ಪ್ರಯೋಗಗಳು ನಡೆಯುತ್ತಿದ್ದು ಬಹುತೇಕ ಜನ ಮನ್ನಣೆ ಗಳಿಸುತ್ತಿವೆ. ಸಾಕಷ್ಟು ಸಣ್ಣ ಮಟ್ಟದ ಉದ್ದಿಮೆ ಗಳೂ ಕೂಡ ಇದ್ದು ತೋಟಗಾರಿಕೆ ಇಲಾಖೆಯ ಸಹಕಾರ ಪಡೆದು ಸ್ಥಾಪನೆಯಾಗುತ್ತಿವೆ.  ದಕ್ಷಿಣ ಕನ್ನಡದಲ್ಲಿ ತೋಟಗಾರಿಕೆ ಇಲಾಖೆಯ ಪ್ರಾಯೋ ಜಿತ ಪಿಂಗಾರ ಎನ್ನುವ ರೈತ ಉತ್ಪಾದಕ ಕಂಪೆನಿಯು ಹಲಸಿನ ಹಪ್ಪಳ, ಹಲ್ವಾ, ಚಿಪ್ಸ್‌, ಹಲಸಿನ ಬೆರಟ್ಟಿ ಯಂತಹ ಉತ್ಪನ್ನಗಳನ್ನು ತಯಾರಿಸುತ್ತಿದೆ. 

ಉಡುಪಿ ಜಿಲ್ಲೆಯಲ್ಲಿಯೂ ಮುಂದಿನ ದಿನದಲ್ಲಿ ಆಸಕ್ತ ರೈತರು ಮುಂದೆ ಬಂದಲ್ಲಿ ಕಂಪೆನಿ ಪ್ರಾರಂಭಿಸಲು ಇಲಾಖೆ ಸಹಯೋಗ ನೀಡಲಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.