ಜ್ಞಾನ, ಸತ್ಕರ್ಮ, ಪೀಳಿಗೆಗೆ ಆದ್ಯತೆ: ಪೇಜಾವರಶ್ರೀ ಕರೆ

ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ ಉದ್ಘಾಟನೆ

Team Udayavani, Dec 14, 2019, 7:11 PM IST

shivalli

ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣರು ಜ್ಞಾನ, ಸತ್ಕರ್ಮ, ಮುಂದಿನ ಪೀಳಿಗೆಗೆ ಸಂಸ್ಕೃತಿಯ ಬಳುವಳಿ ಕೊಡುವ ಕರ್ತವ್ಯಕ್ಕೆ ಆದ್ಯತೆ ಕೊಡಬೇಕು ಎಂದು ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಕರೆ ನೀಡಿದರು.

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಆರಂಭಗೊಂಡ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.

ಶರೀರ ಶಾಶ್ವತವಲ್ಲ. ಜ್ಞಾನ ಮತ್ತು ಪೂಜೆ, ಜಪ, ದಾನಧರ್ಮ ಇತ್ಯಾದಿ ಸತ್ಕರ್ಮಗಳು ಮಾತ್ರ ಇನ್ನೊಂದು ಜನ್ಮಕ್ಕೂ ಪುಣ್ಯ ರೂಪದಲ್ಲಿ ಸಿಗುತ್ತದೆ.

ಒಂದು ದೇಶದ ಕರೆನ್ಸಿ ನೋಟು ಇನ್ನೊಂದು ದೇಶದಲ್ಲಿ ಚಲಾವಣೆಗೊಳ್ಳದಿದ್ದರೂ ಅದನ್ನು ಮಾರ್ಪಡಿಸಲು ಆಗುತ್ತದೆ. ಗಳಿಸಿದ ಹಣ ಸತ್ತ ಅನಂತರ ಬಿಟ್ಟು ಹೋಗಬೇಕು. ಪುಣ್ಯ ಮಾತ್ರ ಮಾರ್ಪಡಿಸಿದ ಕರೆನ್ಸಿ ರೀತಿಯಲ್ಲಿ ಸಾವಿನ ಬಳಿಕವೂ ನಮ್ಮ ಜತೆ ಬರುತ್ತದೆ ಎಂದು ಮಧ್ವಾಚಾರ್ಯರು ತಿಳಿಸಿದ್ದಾರೆಂದು ಸ್ವಾಮೀಜಿ ಉಲ್ಲೇಖೀಸಿದರು.

ಭರತ, ಪ್ರಹ್ಲಾದರಂತಹ ಮಕ್ಕಳು ಬೇಕು
ಭರತನನ್ನು ಕೊಟ್ಟ ಕೈಕೇಯಿಗೆ, ಪ್ರಹ್ಲಾದನ ತಂದೆ ಹಿರಣ್ಯಕಶಿಪುವಿಗೆ ಮಕ್ಕಳ ಕಾರಣದಿಂದ ನರಕ ಪ್ರಾಪ್ತಿಯಾಗಲಿಲ್ಲ. ಭರತ, ಪ್ರಹ್ಲಾದರಂತಹ ಮಕ್ಕಳ ಪೀಳಿಗೆಯನ್ನು ಸಮಾಜ ನೀಡಬೇಕಾಗಿದೆ ಎಂದು ಆಶಿಸಿದರು.

ವಿವಿಧ ಭಾಷೆಗಳನ್ನು ಪ್ರೀತಿಸಿದರೂ ಮಾತೃಭಾಷೆ ತುಳುವಿನ ಬಗೆಗೆ ವಿಶೇಷ ಅಭಿಮಾನ ಇರಬೇಕು. ಹಿಂದು ಸಮಾಜದೊಳಗೆ ಬ್ರಾಹ್ಮಣ ಸಮಾಜ, ಬ್ರಾಹ್ಮಣ ಸಮಾಜದೊಳಗೆ ತುಳು ಶಿವಳ್ಳಿ ಸಮಾಜ ಹೀಗೆ ಈ ಆವರಣಗಳು ಒಂದಕ್ಕೊಂದು ಪೂರಕವಾಗಿರಬೇಕು. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕವಾಗಿ ಸಮಾಜ ಗಟ್ಟಿಗೊಳ್ಳಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.

ಪಂಚಲಕ್ಷಣಗಳ ಸಮಾಜ
ತುಳು ಎಂದರೆ ತುಂಬಿ ತುಳುಕುವುದು ಎಂದರ್ಥ. ಭಾಷೆ, ಗುರು, ದೇವರು, ಭೂಮಿ, ಸಮಾಜ ಈ ಐದು ಲಕ್ಷಣಗಳನ್ನು ಸಮಾಜ ಹೊಂದಿರಬೇಕು. ತುಳು ಶಿವಳ್ಳಿ ಸಮುದಾಯಕ್ಕೆ ಲಿಪಿ ಸಹಿತ ತುಳು ಭಾಷೆ, ಗುರು ಮಧ್ವಾಚಾರ್ಯರು, ದ್ವಾರಕೆಯಿಂದ ಬಂದ ಶ್ರೀಕೃಷ್ಣ ದೇವರು, ಪರಶುರಾಮ ಸೃಷ್ಟಿಯ ಭೂಮಿ, ಸಮಾಜ ಇದೆ. ಮಧ್ವಾಚಾರ್ಯರು, ವಾದಿರಾಜರು ಬಂದ ನಮ್ಮ ಪರಂಪರೆಯ ಸಂಸ್ಕೃತಿ, ಅಂತಃಸತ್ವವನ್ನು ನಶಿಸಲು ಬಿಡಬಾರದು. ರಾಜಕಾರಣಿಗಳೂ ಸಮ್ಮೇಳನಕ್ಕೆ ಬರುವಂತಾಗಬೇಕು. ಮತ ಬ್ಯಾಂಕ್‌ ಶಕ್ತಿಯನ್ನೂ ಉಳಿಸಿಕೊಳ್ಳಬೇಕು ಎಂದು ಸಮ್ಮೇಳನವನ್ನು ಉದ್ಘಾಟಿಸಿದ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.

ನಮ್ಮ ವಿಶಿಷ್ಟ ಪರಂಪರೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಜತೆಗೆ ಸಮಾಜದ ಸಮಸ್ಯೆಗಳ ಪರಿಹಾರಕ್ಕೂ ಚಿಂತನೆ ನಡೆಸಬೇಕು ಎಂದು ಶ್ರೀಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಶ್ರೀಪಲಿಮಾರು ಮಠದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಶಯ ವ್ಯಕ್ತಪಡಿಸಿದರು.

ಕೃತಿ ಬಿಡುಗಡೆ
ದಿ| ಅನಂತರಾಮ ರಾಯರು ಬರೆದ ಶ್ರೀಮದ್ಭಾಗವತ ಸಂಪುಟದ ಐದನೆಯ ಸಂಪುಟವನ್ನು ವಿನೋದಾ ಅನಂತರಾಮ ರಾವ್‌ ಪ್ರಕಟಿಸಿದ್ದು, ಇದನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಗೋವಾ ಎನ್‌ಐಟಿ ನಿರ್ದೇಶಕ ಡಾ|ಗೋಪಾಲ ಮೊಗೇರಾಯ, ಸಮ್ಮೇಳನ ಸಮಿತಿ ಅಧ್ಯಕ್ಷರಾದ ರಾಮದಾಸ ಮಡಮಣ್ಣಾಯ, ಕೇರಳ ಆಲಪುಜದ ಗಿರಿರಾಜನ್‌, ಪುತ್ತೂರಿನ ಡಾ|ಬಾಲಕೃಷ್ಣ ಮೂಡಂಬಡಿತ್ತಾಯ ಪಿ.ಕೆ., ಕಿದಿಯೂರು ರಾಮದಾಸ ಭಟ್‌, ಕಾರ್ಯಾಧ್ಯಕ್ಷ ಮಂಜುನಾಥ ಉಪಾಧ್ಯಾಯ, ಸ್ವಾಗತ ಸಮಿತಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕೇರಳದ ವೆಂಕಟರಮಣ ಪೋತಿ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಸಂಚಾಲಕ ಮಂಗಳೂರಿನ ಪ್ರೊ| ಎಂ.ಬಿ.ಪುರಾಣಿಕ್‌ ಸ್ವಾಗತಿಸಿ, ಮೈಸೂರಿನ ಯು.ಕೆ.ಪುರಾಣಿಕ್‌ ವಂದಿಸಿದರು. ಪ್ರೊ|ಎಂ.ಎಲ್‌.ಸಾಮಗ ಕಾರ್ಯಕ್ರಮ ನಿರ್ವಹಿಸಿದರು.

ಗಾಯತ್ರೀ ವಿಶ್ವಗೀತೆ
ವಂದೇ ಮಾತರಂ, ಜನಗಣಮನ ಇವುಗಳು ರಾಷ್ಟ್ರಗೀತೆಗಳಾದರೆ, “ನಮಗೆಲ್ಲರಿಗೂ ಒಳ್ಳೆಯ ಬುದ್ಧಿ ಬರಲಿ’ ಎಂದು ಪ್ರಾರ್ಥಿಸುವ ಗಾಯತ್ರೀ ಮಂತ್ರ ವಿಶ್ವ ಗೀತೆಯಾಗಿದೆ. ಇದನ್ನು ತಪ್ಪದೆ ಜಪಿಸಬೇಕು.
– ಪೇಜಾವರ ಶ್ರೀಗಳು

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.