ಅವೈಜ್ಞಾನಿಕ ಹಂಪ್ನಿಂದ ಹೆಚ್ಚುತ್ತಿರುವ ಅಪಘಾತ
Team Udayavani, Jul 9, 2019, 5:35 AM IST
ಹೆಬ್ರಿ: ಹೆಬ್ರಿ ಪೇಟೆಯಿಂದ ಕುಚ್ಚಾರು ಮಾರ್ಗದಲ್ಲಿ ಪ್ರಮುಖ ರಸ್ತೆಯ ಆರಂಭದಲ್ಲಿ ಅಳವಡಿಸಲಾದ ಅವೈಜ್ಞಾನಿಕ ಹಂಪ್ನಿಂದ ದಿನನಿತ್ಯ ಅಪಘಾತಗಳು ಹೆಚ್ಚುಗುತ್ತಿದ್ದು ಕೂಡಲೇ ಇದನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಉಡುಪಿ-ಶಿವಮೊಗ್ಗ ಮುಖ್ಯ ರಸ್ತೆಯ ಸಮೀಪವಿರುವ ಈ ಹಂಪ್ ಎತ್ತರವಾಗಿದ್ದು ಈ ಮಾರ್ಗದಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಪ್ರಮುಖ ರಸ್ತೆಯ ಸಮೀಪವಿರುವ ಈ ರಸ್ತೆಯಲ್ಲಿ ಬೃಹತ್ ವಾಹನಗಳು ಸಂಚರಿಸುವಾಗ ಹಂಪ್ನಿಂದ ವಾಹನ ನಿಧಾನಗೊಂಡು ಹಿಂಬದಿ ಭಾಗ ಪ್ರಮುಖ ರಸ್ತೆಗೆ ಅಡ್ಡವಾಗುತ್ತಿದ್ದು ಅಪಘಾತಗಳು ಹೆಚ್ಚುತ್ತಿವೆ. ಪ್ರಮುಖ ರಸ್ತೆಯಲ್ಲಿ ಉಡುಪಿ-ಶಿವಮೊಗ್ಗ ವೇಗದೂತ ಮಿನಿಬಸ್ಸುಗಳು ಸಂಚರಿಸುತ್ತಿದ್ದು ರಸ್ತೆ ಕಿರಿದಾದ ಕಾರಣ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ.
ಮುಖ್ಯ ರಸ್ತೆಯಿಂದ ಕುಚ್ಚಾರು ಮಾರ್ಗದ ಸ್ವಲ್ಪ ದೂರದಲ್ಲಿ ಹಂಪ್ ನಿರ್ಮಾಣವಾಗಿದ್ದರೆ ಈ ಸಮಸ್ಯೆಯಾಗುತ್ತಿಲ್ಲ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಹಂಪ್ನಿಂದಾಗಿ ವಾಹನ ನಿಧಾನ ಮಾಡುವಾಗ ಹಿಂದಿನಿಂದ ಇನ್ನೊಂದು ವಾಹನ ಢಿಕ್ಕಿ ಹೊಡೆಯುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಂಕಷ್ಟದಲ್ಲಿ ಬೈಕ್ ಸವಾರರು
ಅತೀ ಎತ್ತರವಾಗಿ ಹಂಪ್ ಇರುವುದರಿಂದ ಬೈಕ್ ಸವಾರರು ನಿಯಂತ್ರಣ ತಪ್ಪಿ ನೆಲಕ್ಕುರುಳಿದ ಘಟನೆಗಳಿವೆ. ಅದರಲ್ಲೂ ಮಹಿಳಾ ದ್ವಿಚಕ್ರ ವಾಹನ ಸವಾರರು ಪಾಡು ಹೇಳತೀರದು. ಹಂಪ್ನಿಂದ ದ್ವಿಚಕ್ರವಾಹನ ಜಂಪ್ ಆಗಿ ಹಿಂಬದಿ ಸವಾರ ಕೆಳಬಿದ್ದಿದ್ದೂ ಇದೆ ಎನ್ನುತ್ತಾರೆ ಸ್ಥಳೀಯರು.
ಶೀಘ್ರ ಸಮಸ್ಯೆ ಬಗೆ ಹರಿಸಿ
ಈಗ ಇದ್ದ ಜಾಗದಲ್ಲಿರುವ ಅವೈಜ್ಞಾನಿಕ ಹಂಪ್ನ್ನು ಶೀಘ್ರ ತೆರವುಗೊಳಿಸಿ ಸ್ವಲ್ಪ ಮುಂದೆ ಅಳವಡಿಸಬೇಕು. ಇಲ್ಲದಿದ್ದಲ್ಲಿ ಅನಾಹುತ ತಪ್ಪಿದಲ್ಲ ಎಂಬುದು ಸ್ಥಳೀಯರ ವಾದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್