ಭಾರತೀಯ ವೈದ್ಯಕೀಯ ಸಂಘದ ಮುಷ್ಕರ: ನಗರದ ಖಾಸಗಿ ಆಸ್ಪತ್ರೆಗಳ ಬೆಂಬಲ
Team Udayavani, Jun 20, 2019, 5:59 AM IST
ಉಡುಪಿ: ಪಶ್ಚಿಮ ಬಂಗಾಲದಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಮತ್ತು ಆರೋಗ್ಯ ಸಂಸ್ಥೆಗಳ ಮೇಲಿನ ದಾಳಿ ತಡೆಯಲು ಕಾಯ್ದೆ ರೂಪಿಸುವಂತೆ ಆಗ್ರಹಿಸಿ ಸೋಮವಾರ ಭಾರತೀಯ ವೈದ್ಯಕೀಯ ಸಂಘ ನೀಡಿರುವ ಬಂದ್ ಕರೆಗೆ ನಗರದ ಎಲ್ಲ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳು ಸಂಪೂರ್ಣ ಬೆಂಬಲ ನೀಡಿದೆ.
ಬಂದ್ಗೆ ವ್ಯಾಪಕ ಬೆಂಬಲ
ಉಡುಪಿ ಜಿಲ್ಲೆಯಲ್ಲಿ ಒಟ್ಟು 24ಕ್ಕೂ ಅಧಿಕ ಖಾಸಗಿ ಆಸ್ಪತ್ರಗಳಿವೆ. ನಗರದ ಮಿಷನ್ ಆಸ್ಪತ್ರೆ, ಡಾ| ಟಿಎಂಎ ಪೈ, ಹೈಟೆಕ್, ಪ್ರಸಾದ್ ನೇತ್ರಾಲಯ, ಮಣಿಪಾಲ ಕಸ್ತೂರ್ಬಾ, ಉಡುಪಿಯ ಆದರ್ಶ, ಮಿತ್ರ, ದೊಡ್ಡಣಗುಡ್ಡೆಯ ಡಾ| ಎ.ವಿ. ಬಾಳಿಗಾ ಸೇರಿದಂತೆ ಎಲ್ಲ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್ಗಳಲ್ಲಿ ಹೊರ ರೋಗಿಗಳ ವಿಭಾಗ ಸೋಮವಾರ ಬೆಳಗ್ಗೆಯಿಂದ ಮುಚ್ಚಿತ್ತು. ಅನಿವಾರ್ಯ ಹಾಗೂ ತುರ್ತು ಚಿಕಿತ್ಸೆಗಳನ್ನು ಮಾಡಲಾ ಗುತ್ತಿತ್ತು.
ಕ್ಲಿನಿಕ್ನಲ್ಲಿ ಸೇವೆ ಸ್ಥಗಿತ
ನಗರದಲ್ಲಿ ಸುಮಾರು 100 ಕ್ಲಿನಿಕ್ಗಳಿವೆ. ಮುಷ್ಕರದ ನಿಮಿತ್ತ ಎಲ್ಲ ವೈದ್ಯರು ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಿದರು. ಸಾಮಾನ್ಯವಾಗಿ ವೈದ್ಯರ ಮುಷ್ಕರದ ಸಂದರ್ಭ ಕ್ಲಿನಿಕ್ ತೆರೆದಿರುತ್ತದೆ. ಇದೇ ಮೊದಲ ಬಾರಿ ನಗರದ ಎಲ್ಲ ಕ್ಲಿನಿಕ್ಗಳಲ್ಲಿ ಒಪಿಡಿ ಸೇವೆ ಬಂದ್ ಮಾಡಲಾಯಿತು. ಖಾಸಗಿ ಆಸ್ಪತ್ರೆ ಮುಂಭಾಗದಲ್ಲಿ ಒಪಿಡಿ ಸೇವೆ ಬಂದ್ ಆಗಿರುವ ಕುರಿತು ಬಿತ್ತಿ ಪತ್ರ ಅಂಟಿಸಲಾಗಿತ್ತು.
ತಾಲೂಕಿನಲ್ಲಿ ಬೆಂಬಲ
ಉಡುಪಿ ತಾಲೂಕಿನ ಎಲ್ಲ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ಗಳು ಮುಷ್ಕರಕ್ಕೆ ಬೆಂಬಲ ನೀಡಿವೆ. ತುರ್ತು ಚಿಕಿತ್ಸೆ ವಿಭಾಗ ಎಂದಿನಂತೆ ಕಾರ್ಯಚರಿಸಿದೆ. ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿ ಜತೆಗಿನ ಚರ್ಚೆಯ ಬಳಿಕ ಜೂ.18ಕ್ಕೆ ಮುಷ್ಕರ ನಡೆಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ| ಗುರುಮೂರ್ತಿ ತಿಳಿಸಿದರು.
ಒಪಿಡಿ ಸೇವೆ ಸಿಗದೆ ಪರದಾಟ
15 ದಿನಗಳ ಹಿಂದೆ ಕೈ ಮೊಳೆ ಮುರಿತಕ್ಕೆ ಒಳಗಾದ ವೈದ್ಯರು ಪಟ್ಟಿಯನ್ನು ಹಾಕಿ ಜೂ. 17ರಂದು ಬರುವಂತೆ ಸೂಚಿಸಿದ್ದಾರೆ. ಅಂತೆಯೇ ವೈದ್ಯರ ಮುಷ್ಕರವಾದರೂ ಕೈಗೆ ಹಾಕಿರುವ ಪಟ್ಟಿ ತೆಗೆಯಬಹುದು ಅಂತ ಬಂದಿದ್ದೇನೆ. ಆದರೆ ಆಸ್ಪತ್ರೆಯಲ್ಲಿ ತುರ್ತು ಸೇವೆ ಬಿಟ್ಟು ಇತರೆ ಒಪಿಡಿ ಸೇವೆ ನೀಡಲು ಸಿಬಂದಿಗಳು ಒಪ್ಪುತ್ತಿಲ್ಲ ಎಂದು ಹೆಬ್ರಿ ನಿವಾಸಿ ಮಹೇಶ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ