ಹಳ್ಳಿಗಳೀಗ ಸೋಂಕು ಮುಕ್ತದ ಕಡೆಗೆ


Team Udayavani, Jun 24, 2021, 5:00 AM IST

ಹಳ್ಳಿಗಳೀಗ ಸೋಂಕು ಮುಕ್ತದ ಕಡೆಗೆ

ಕಾರ್ಕಳ: ಅಧಿಕಾರಿಗಳು, ವಾರಿಯರ್ಸ್‌ ಹಾಗೂ ಗ್ರಾಮೀಣ ಕಾರ್ಯಪಡೆಗಳ ಅಹೋರಾತ್ರಿ ಪರಿಶ್ರಮದ ಫ‌ಲವೆಂಬಂತೆ ಕಾರ್ಕಳ ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ.

2ನೇ ಅಲೆಯಲ್ಲಿ ಕೋವಿಡ್ ತಾಲೂಕಿನ ಹಳ್ಳಿಹಳ್ಳಿಗಳಿಗೂ ನುಸುಳಿ ಆತಂಕವನ್ನು ಸೃಷ್ಟಿಸಿತ್ತು. ಅಪಾರ ಸಾವು-ನೋವುಗಳಿಗೂ ಅದು ಕಾರಣವಾಗಿತ್ತು. ಆರೋಗ್ಯ ಇಲಾಖೆ ಸಹಿತ ಎಲ್ಲ  ಇಲಾಖೆಗಳ  ಅಧಿಕಾರಿಗಳು ಹಾಗೂ ಗ್ರಾಮ ಮಟ್ಟದ  ಕಾರ್ಯಪಡೆಗಳ ದಕ್ಷತೆ ಮತ್ತು ಪರಿಶ್ರಮದಿಂದ ಸೋಂಕಿನ ಆರ್ಭಟ ತಗ್ಗುತ್ತಿದೆ. 2ನೇ ಅಲೆಯ ಮುನ್ಸೂಚನೆ  ದೊರೆತಾಗ  ಸ್ಥಳೀಯ ಶಾಸಕರು ಎಲ್ಲ  ಇಲಾಖೆ ಅಧಿಕಾರಿಗಳ ಜತೆ  ಸಭೆ  ನಡೆಸಿದ್ದರು. ಗ್ರಾಮಗಳಿಗೂ ತೆರಳಿ ಮಾರ್ಗದರ್ಶನ ನೀಡಿದ್ದರು.  ಇವೆಲ್ಲವೂ ಸೋಂಕು ನಿಯಂತ್ರಿಸುವಲ್ಲಿ ಫ‌ಲಪ್ರದವಾಗಿದೆ.

ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ  ಬಹುತೇಕ  ಗ್ರಾಮಗಳು  ಕೊರೊನಾನ  ಸೋಂಕಿಗೆ ಸಿಲುಕಿ ಸಂಕಷ್ಟ ಅನುಭವಿಸಿತ್ತು. 2ನೇ ಅಲೆಯಲ್ಲಿ  ಮಾರ್ಚ್‌ನಲ್ಲಿ  125, ಎಪ್ರಿಲ್‌ನಲ್ಲಿ 816, ಮೇ 5,378, ಜೂನ್‌ 16ರ  ತನಕ 1,532 ಸೇರಿ ಒಟ್ಟು 7,852 ಪಾಸಿಟಿವ್‌ ಪ್ರಕರಣಗಳು ದಾಖಲಾಗಿತ್ತು. ಅವುಗಳಲ್ಲಿ 7,439 ಮಂದಿ ಗುಣಮುಖರಾಗಿದ್ದರು. ಅನಂತರದ ಒಂದು ವಾರದಲ್ಲಿ  ಪಾಸಿಟಿವ್‌ ಪ್ರಕರಣ ಇಳಿಕೆಯಾಗುತ್ತ ಬಂದಿದೆ. ದಾಖಲಾದ ಸೋಂಕಿತರಲ್ಲಿ ಹೆಚ್ಚಿನವರು ಗುಣಮುಖರಾಗುತ್ತಿದ್ದಾರೆ. 393ರ ಆಸುಪಾಸಿನಲ್ಲಿ  ಈಗ  ಸಕ್ರಿಯ ಪ್ರಕರಣಗಳಿವೆ. ಹೆಮುಂಡೆ, ಸೂಡ, ಎಳ್ಳಾರೆ, ಜಾರ್ಕಳ, ಪಳ್ಳಿ ಮುಳ್ಳಡ್ಕ, ಕೆರ್ವಾಶೆ, ಕೆರೆಬೆಟ್ಟು  ಮೊದಲಾದ  ಗ್ರಾಮಗಳಲ್ಲಿ  ಸಕ್ರಿಯ ಪ್ರಕರಣಗಳು  ಇರುವುದಿಲ್ಲ.

ಮಾಳ, ಈದು, ಕುಕ್ಕುಂದೂರು, ಕಡ್ತಲ, ಮರ್ಣೆ,  ಪಳ್ಳಿ, ನಿಟ್ಟೆ, ಮಿಯ್ನಾರು, ಬೆಳ್ಮಣ್‌, ಬೆಳ್ವೆ, ಮುದ್ರಾಡಿ, ವರಂಗ  ಈ  ಗ್ರಾಮಗಳಲ್ಲಿ   50ಕ್ಕಿಂತ  ಅಧಿಕ  ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿದ್ದರಿಂದ  ಸಂಪೂರ್ಣ ಲಾಕ್‌ಡೌನ್‌ ಮಾಡಲಾಗಿತ್ತು. ಅನಂತರದಲ್ಲಿ ಈ ಗ್ರಾಮಗಳಲ್ಲೂ ಸೋಂಕು ನಿಯಂತ್ರಣಕ್ಕೆ  ಬರುತ್ತಿರುವುದು ಆತಂಕ ಕಡಿಮೆ ಮಾಡಿದೆ.  ಕಳೆದ ವರ್ಷ  ಮೊದಲ  ಕೋವಿಡ್‌ ಅಲೆಯಲ್ಲಿ  1,035 ಪ್ರಕರಣಗಳು   ಕಾರ್ಕಳ, ಹೆಬ್ರಿ ತಾಲೂಕುಗಳಲ್ಲಿ  ಕಂಡು ಬಂದಿತ್ತು. ಮೊದಲ ಅಲೆಯಲ್ಲಿ 36 ಮಂದಿ, 2ನೇ ಅಲೆಯಲ್ಲಿ  19 ಮಂದಿ  ಸಾವನಪ್ಪಿದ್ದರು.  ಇದುವರೆಗೆ ತಾಲೂಕಿನಲ್ಲಿ ಒಟ್ಟು 55 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಹಲವು  ಕ್ರಮ  ಫ‌ಲ  ನೀಡಿತು  : ಗ್ರಾಮಮಟ್ಟದಲ್ಲಿ ಕಾರ್ಯಪಡೆ, ಆಶಾ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಜಾಗೃತಿ, ಮನೆಗಳಿಗೆ ತೆರಳಿ ಸಮೀಕ್ಷೆ, ಕಡ್ಡಾಯ ಪರೀಕ್ಷೆ, ಪರವೂರಿನಿಂದ ಬಂದವರ ಬಗ್ಗೆ  ನಿಗಾ,  ಅಚ್ಚುಕಟ್ಟಿನ ಕೋವಿಡ್‌ ಕೇರ್‌ ಕೇಂದ್ರ,  ಸೋಂಕು ಹರಡದಂತೆ ಕಠಿನ  ಕ್ರಮಗಳು,  ಬಿಗಿ ಲಾಕ್‌ಡೌನ್‌, ಇದೆಲ್ಲದರ ಪರಿಣಾಮ ತಾಲೂಕಿನಲ್ಲಿ  ಕೋವಿಡ್‌ ನಿಯಂತ್ರಣದ ಕಡೆಗೆ ಸಾಗಿದ್ದು, ಪರಿಣಾಮ ಹಳ್ಳಿಗಳಿಗೆ ನುಸುಳಿದ್ದ  ಸೋಂಕು  ಮುಕ್ತವಾಗುವ ಕಡೆಗೆ ಹೆಚ್ಚು ಪರಿಣಾಮ ಬೀರಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ, ಆದಷ್ಟು ಬೇಗ ಪರೀಕ್ಷೆ ಒಳಪಡಿಸಿರುವುದು ಸಹಕಾರಿಯಾಯಿತು. ಗ್ರಾಮೀಣ ಕಾರ್ಯಪಡೆ ನೆರವು  ಸಾಕಷ್ಟು  ಫ‌ಲ ಕೊಟ್ಟಿತು. ಸೋಂಕಿತರನ್ನು  ಮನೆಯಿಂದ ಕೋವಿಡ್‌ ಕೇರ್‌ಗೆ ಸ್ಥಳಾಂತರಿಸಿದ್ದು ಕೂಡ  ನಿಯಂತ್ರಣಕ್ಕೆ ಬರಲು ಕಾರಣವಾಗಿದೆ.-ಡಾ| ಕೃಷ್ಣಾನಂದ ಶೆಟ್ಟಿ , ತಾಲೂಕು ಆರೋಗ್ಯಾಧಿಕಾರಿ, ಕಾರ್ಕಳ

ಟಾಪ್ ನ್ಯೂಸ್

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.