ಮಳೆ ಕೊಯ್ಲು ಅಳವಡಿಸಿ ವರ್ಷಪೂರ್ತಿ ಸಮಗ್ರ ಕೃಷಿ
ಜಲ ಸಂಪನ್ಮೂಲ: ಮನೆ ಮನೆಗೆ ಮಳೆಕೊಯ್ಲು ಉದಯವಾಣಿ ಅಭಿಯಾನ
Team Udayavani, Jul 30, 2019, 5:15 AM IST
ಮಳೆ ನೀರು ಸಂಗ್ರಹಣಾ ತೊಟ್ಟಿ (ಕೆರೆ).
ಉಡುಪಿ: ಕುಡಿಯುವ ನೀರಿನ ಸಮಸ್ಯೆಗೆ ಈ ಬಾರಿ ಇಡೀ ಜಿಲ್ಲೆ ತತ್ತರಿಸಿದೆ. ಉದಯವಾಣಿಯ ಜಲಸಾಕ್ಷರ ಅಭಿಯಾನದಿಂದ ಪ್ರೇರಣೆಗೊಂಡು ಮಳೆಕೊಯ್ಲುಗೆ ಹಲವು ಮಂದಿ ಮನಸ್ಸು ಮಾಡುತ್ತಿ ದ್ದಾರೆ. ಇಂಥವರಿಗೆ ಪ್ರೇರಣೆ ಯೆಂದರೆ ಈಗಾಗಲೇ ಮಳೆಕೊಯ್ಲುವಿನಿಂದ ಪ್ರಯೋಜನ ಪಡೆಯುತ್ತಿರುವ ಉಡುಪಿ ತಾಲೂಕಿನ ಅಲೆವೂರಿನ ಪ್ರಗತಿಪರ ಕೃಷಿಕ ಗೋಪಾಲ ಕೆ.ನಾಯಕ್. ಸಂಗ್ರಹಿಸಿದ ಮಳೆನೀರಿನಲ್ಲಿ ವರ್ಷಪೂರ್ತಿ ಬೆಳೆ ತೆಗೆಯು ವುದೇ ಇವರ ಸಾಧನೆ.
ಸುಮಾರು 3ಎಕ್ರೆಯಲ್ಲಿ 29 ವರ್ಷದಿಂದ ಸಮಗ್ರ ಕೃಷಿ ಪದ್ಧತಿ ಆಳವಡಿಸಿದ್ದಾರೆ. ಬೇಸಗೆಯಲ್ಲಿ ರೈತರು ಬೆಳೆ ತೆಗೆಯಲು ಹಿಂದೇಟು ಹಾಕುತ್ತಾರೆ. ಆದರೆ ಇವರು ವರ್ಷ ಪೂರ್ತಿ ಮಾವು, ತೆಂಗು, ಅಡಿಕೆ, ತರಕಾರಿ, ಭತ್ತ, ತರಕಾರಿಗಳನ್ನು ಬೆಳೆಸುತ್ತಾರೆ. ಬೇಸಗೆಯಲ್ಲಿ ಇಡೀ ನಗರ ನೀರಿಗಾಗಿ ಪರದಾಡಿದರೂ ಇವರಿಗೆ ಅದು ತಟ್ಟದು. ಇದಕ್ಕೆ ಕಾರಣ ಮಳೆ ನೀರು ಸಂಗ್ರಹ ತೊಟ್ಟಿ.
ಮಳೆ ನೀರು ಸಂಗ್ರಹ ತೊಟ್ಟಿ
ಗೋಪಾಲ ಅವರು ತಮ್ಮ ತಂದೆ ಮರಣ ಬಳಿಕ ತಮ್ಮ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯ ತೊಡಗಿದರು. 1990ರಲ್ಲಿ ಸಣ್ಣ ಕೆರೆಗಳ ರೂಪದಲ್ಲಿ ಮಳೆ ನೀರಿನ ಸಂಗ್ರಹ ತೊಟ್ಟಿ ನಿರ್ಮಿಸಿದರು. 2016 ರಲ್ಲಿ ತೋಟಗಾರಿಕಾ ಇಲಾಖೆಯ ಸಹಾಯದಿಂದ ಸುಮಾರು 60 ಅಡಿ ಅಗಲ ಹಾಗೂ 15 ಅಡಿ ಆಳದ ನೀರು ಸಂಗ್ರಹಣ ತೊಟ್ಟಿ (ಕೆರೆ) ಕಟ್ಟಿದರು. ವಿವಿಧ ಪ್ರದೇಶದಿಂದ ಹರಿದು ಬಂದ ಸುಮಾರು 16 ಲಕ್ಷ ಲೀ. ನೀರು ಇದರಲ್ಲಿ ಸಂಗ್ರಹವಾಗುತ್ತದೆ.
ನೀರಿನ ಮಟ್ಟದ ಹೆಚ್ಚಳ
ಈ ತೊಟ್ಟಿಯ ಸುಮಾರು 20 ಅಡಿ ದೂರದಲ್ಲಿ 35 ಅಡಿ ಆಳದ ಬಾವಿಯಿದೆ. ಅದಕ್ಕೂ ಮಳೆ ನೀರು ಹಾಯಿಸುತ್ತಾರೆ. ತೊಟ್ಟಿಯಲ್ಲಿ ಸಂಗ್ರಹಿಸಿದ ನೀರನ್ನು ಡಿಸೆಂಬರ್ -ಜನವರಿವರೆಗೆ ಕೃಷಿಗೆ ಬಳಸಲಾಗುತ್ತಿದೆ. ಫೆಬ್ರವರಿ ಅನಂತರ ಬಾವಿಯ ನೀರು ಬಳಸುತ್ತಾರೆ.
ತೊಟ್ಟಿಯಲ್ಲಿ ನೀರು ಸಂಗ್ರಹವಾಗಿ ಭೂಮಿಯಲ್ಲಿ ಇಂಗುವ ಕಾರಣ ಕಡು ಬೇಸಗೆಯಲ್ಲಿ ಸಹ ಗೋಪಾಲ ನಾಯಕ್ ಅವರ ಬಾವಿಯಿಂದ ಸುಮಾರು 3 ಎಚ್ಪಿ ಪಂಪಿನಲ್ಲಿ ಕೃಷಿಗೆ ಅರ್ಧಗಂಟೆ ನೀರು ತೆಗೆಯಬಹುದು. ಈ ಪರಿಸರಕ್ಕೆ ಹೊಂದಿಕೊಂಡ ಬಾವಿಗಳ ಅಂತರ್ಜಲ ಮಟ್ಟ ಸಹ ಏರಿಕೆಯಾಗಿದೆ.
ಪ್ರೇರಣೆಯಾಗಲಿ
ಪ್ರತಿಯೊಬ್ಬರೂ ಸಣ್ಣಮಟ್ಟದಲ್ಲಿ ಯಾದರೂ ಮಳೆ ನೀರು ಭೂಮಿಯಲ್ಲಿ ಇಂಗಿಸುವ ಮೂಲಕ ಜಲಸಂಪನ್ಮೂಲವನ್ನು ಸಂರಕ್ಷಿಸಬೇಕು. ಉದಯವಾಣಿ ಅಭಿಯಾನದಿಂದ ಪ್ರೇರಣೆಗೊಂಡು ಇನ್ನಷ್ಟು ಜನರು ಮಳೆ ಕೊಯ್ಲು ಪದ್ಧತಿ ಆಳವಡಿಸಲಿ.
–ಗೋಪಾಲ್ ನಾಯಕ್,
ಪ್ರಗತಿ ಪರ ಕೃಷಿಕ, ಅಲೆವೂರು
ನೀವೂ ಅಳವಡಿಸಿ,
ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್ ನಲ್ಲಿ ಕಳಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ