ಉಡುಪಿ ಜಿಲ್ಲೆಯ ಗಡಿಭಾಗಗಳಲ್ಲಿ ತನಿಖೆ ಇನ್ನಷ್ಟು ಬಿಗಿ
ಚೆಕ್ಪೋಸ್ಟ್ಗಳ ಸ್ಥಳಾಂತರ,ಸಾರ್ವಜನಿಕರ ಸಹಕಾರ ಕೋರಿದ ಇಲಾಖೆ
Team Udayavani, Apr 29, 2020, 5:08 AM IST
ಬೆಳ್ಮಣ್: ಕೋವಿಡ್ 19 ನಿಯಂತ್ರಣದಲ್ಲಿ ಉಡುಪಿ ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಂಡ ಬೆನ್ನಲ್ಲೇ ಜಿಲ್ಲೆಯ ಗಡಿಭಾಗಗಳ ಚೆಕ್ಪೋಸ್ಟ್ಗಳಲ್ಲಿ ತಪಾಸಣೆಯ ಪ್ರಕ್ರಿಯೆ ಇನ್ನಷ್ಟು ಬಿಗಿಗೊಂಡಿದೆ.
ಮಂಗಳವಾರ ಕಾರ್ಕಳ ಡಿವೈಎಸ್ಪಿ ಭರತ್ ರೆಡ್ಡಿ ಕಾರ್ಕಳದ ಗಡಿಭಾಗಗಳಾದ ಜಾರಿಗೆಕಟ್ಟೆ, ಸಚ್ಚೇರಿಪೇಟೆಯ ಚೆಕ್ಪೋಸ್ಟ್ಗಳಿಗೆ ಭೇಟಿ ನೀಡಿ ಈ ಭಾಗದ ಒಳ ಮಾರ್ಗಗಳಲ್ಲಿ ವಾಹನ ಸಂಚಾರ ಅಧಿಕವಾಗಿರುವ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಠಿಯಿಂದ ಜಾರಿಗೆಕಟ್ಟೆಯ ಚೆಕ್ಪೋಸ್ಟ್ ಸಂಕಲಕರಿಯಕ್ಕೂ ಕಡಂದಲೆ ನದಿ ಬದಿಯ ಚೆಕ್ಪೋಸ್ಟ್ ಸಚ್ಚೇರಿಪೇಟೆ ರೈಸ್ಮಿಲ್ ಬಳಿಗೆ ಸ್ಥಳಾಂತರಿಸುವಂತೆ ಮುಂಡ್ಕೂರು ಗ್ರಾಮ ಪಂಚಾಯತ್ ಪಿಡಿಒ ರವಿರಾಜ್ರವರಿಗೆ ಆದೇಶ ತಿಳಿಸಿದರು.
ಈಗಾಗಲೇ ಮುಂಡ್ಕೂರು ಭಾಗದಲ್ಲಿ ಜನ ಸಂಚರಿಸುತ್ತಿರುವ ಹಲವು ವಾಮ ಮಾರ್ಗಗಳ ಸಂಪರ್ಕ ಕಡಿತಗೊಳಿಸಲಾಗಿದ್ದು ಭದ್ರತೆಯ ದೃಷ್ಠಿಯಿಂದ ಉಳಿದ ಸಣ್ಣ ಅಡ್ಡ ರಸ್ತೆಗಳ ಸಂಪರ್ಕಗಳನ್ನೂ ಕಡಿತಗೊಳಿಸುವಂತೆ ತಿಳಿಸಿದರು.
ಪೊಸ್ರಾಲು -ಮುಕ್ಕಡಪ್ಪು ರಸ್ತೆಯ ಸಂಪರ್ಕ ಕಡಿತಗೊಳಿಸಿದ ಬಗ್ಗೆ ಸ್ಥಳೀಯರ ಆಕ್ಷೇಪವಿದ್ದ ಹಿನ್ನೆಲೆಯಲ್ಲಿ ಆ ಸ್ಥಳಕ್ಕೂ ಭೇಟಿ ನೀಡಿದ ಭರತ್ ರೆಡ್ಡಿ ಸಾಮಾಜಿಕ ಹಿತದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು ವೃದ್ಧರಿಗೆ ತೊಂದರೆಯಾದಲ್ಲಿ, ಅಗತ್ಯ ಬಿದ್ದಲ್ಲಿ ಸಹಕರಿಸುವುದಾಗಿ ತಿಳಿಸಿದರು.
ಮುಂಡ್ಕೂರು ಗ್ರಾಮ ಪಂಚಾಯತ್ ಪಿಡಿಒ ರವಿರಾಜ್, ಗ್ರಾಮಕರಣಿಕ ಸುಖೇಶ್,ಸಿಬ್ಬಂದಿ ಪುರುಷೋತ್ತಮ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ