ಮಣಿಪಾಲದಲ್ಲಿ ಅಯ್ಯಂಗಾರ್‌ ಯೋಗ ಕಾರ್ಯಾಗಾರ


Team Udayavani, Dec 1, 2017, 9:19 AM IST

01-10.jpg

ಉಡುಪಿ: ವಿಶ್ವವಿಖ್ಯಾತ ಯೋಗಾಚಾರ್ಯ ಬಿಕೆಎಸ್‌ ಅಯ್ಯಂಗಾರ್‌ ಅವರ ಜನ್ಮ ಶತಮಾನೋತ್ಸವವನ್ನು ಈ ವರ್ಷ ಆಚರಿಸಲಾಗುತ್ತಿದ್ದು, ಇದರ ಮೊದಲ ಕಾರ್ಯಕ್ರಮವಾಗಿ ಮಣಿಪಾಲ-ಪೆರಂಪಳ್ಳಿಯ “ಅಥ ಇತಿ ಯೋಗ ಕೇಂದ್ರ’ ವು ಡಿಸೆಂಬರ್‌ 9 ಮತ್ತು 10ರಂದು ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಎರಡು ದಿನಗಳ “ಅಯ್ಯಂಗಾರ್‌ ಯೋಗ’ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

ಬಿಕೆಎಸ್‌ ಅಯ್ಯಂಗಾರ್‌ ಅವರ ಶಿಷ್ಯೆ ಶೋಭಾ ಶೆಟ್ಟಿಯವರ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಈ ಕಾರ್ಯಾಗಾರದಲ್ಲಿ ಚಿಕ್ಕಮಗಳೂರು, ದಕ್ಷಿಣಕನ್ನಡ, ಉತ್ತರಕನ್ನಡ ಮತ್ತು ಉಡುಪಿ ಜಿಲ್ಲೆಯ ಆಸಕ್ತರು ಭಾಗವಹಿಸಬಹುದಾಗಿದೆ.
ಯೋಗಾಭ್ಯಾಸದ ಕುರಿತು ಆರಂಭಿಕ ಜ್ಞಾನವುಳ್ಳವರು, ಈಗಾಗಲೇ ಯೋಗಾಭ್ಯಾಸದಲ್ಲಿ ನಿರತರಾಗಿರುವ ಅನುಭವಿಗಳು ಇದರಲ್ಲಿ  ಪಾಲ್ಗೊಳ್ಳಬಹುದಾಗಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಮುಕ್ತ ಅವಕಾಶವಿದೆ. “ಕರೆಕ್ಟ್ ಎಲೈನ್‌ಮೆಂಟ್‌’ನೊಂದಿಗೆ ಯೋಗಾಸನಗಳ ಪರಿಚಯ, ನಿಖರ ಭಂಗಿ ಮತ್ತು ಉಸಿರಾಟದ ತಂತ್ರಗಳೊಂದಿಗೆ ಪ್ರಾಣಾಯಾಮದ ಮೂಲಪಾಠ, ದೇಹವನ್ನು ಕಾಡುವ ಸಾಮಾನ್ಯ ನೋವುಗಳ ನಿವಾರಣೆಗೆ ಮುಂಜಾಗರೂಕತೆ, ಯೋಗಾಭ್ಯಾಸದ ಸಮಸ್ಯೆಗಳ ಕುರಿತ ಪ್ರಶ್ನೋತ್ತರ- ಹೀಗೆ ಹಲವು ಕಲಾಪಗಳನ್ನು ಎರಡು ದಿನಗಳ ಕಾರ್ಯಾಗಾರಗಳಲ್ಲಿ ಅಳವಡಿಸಲಾಗಿದೆ.

ಮಣಿಪಾಲ ಟೈಗರ್‌ ಸರ್ಕಲ್‌ನಿಂದ ವಾಹನ ವ್ಯವಸ್ಥೆ, ಸಸ್ಯಾಹಾರಿ ಸರಳ ಭೋಜನ, ಚಹಾ ವ್ಯವಸ್ಥೆ, ಅಯ್ಯಂಗಾರ್‌ ಯೋಗ ಪರಿಚಯ ಪುಸ್ತಕ, ಯೋಗ ಬೆಲ್ಟ್- ಇವುಗಳೆಲ್ಲ ಸೇರಿ ಪ್ರವೇಶ ಶುಲ್ಕ ರೂ. 2000 ಆಗಿರುತ್ತದೆ. ಭಾಗವಹಿಸಲಿಚ್ಛಿಸುವವರು ಡಿಸೆಂಬರ್‌ 5ರ ಮೊದಲು ತಮ್ಮ ಹೆಸರನ್ನು  ನೋಂದಾಯಿಸಬೇಕೆಂದು ಸಂಯೋಜಕರು ತಿಳಿಸಿದ್ದಾರೆ. 

ಸಂಪರ್ಕ:  98447 16452 (ಬೆಳಗ್ಗೆ 10 ಮತ್ತು ಸಂಜೆ 5ರ ನಡುವೆ).

ಅಯ್ಯಂಗಾರ್‌ ಯೋಗಾನುಭವ !
ಬಿಕೆಎಸ್‌ ಅಯ್ಯಂಗಾರ್‌ ಅವರ ಶಿಷ್ಯೆ ಶೋಭಾ ಶೆಟ್ಟಿಯವರ ಯೋಗ ತರಗತಿಗೆ ನಾನು ಸೇರಿದ್ದು ಎಂಟು ವರ್ಷಗಳ ಹಿಂದೆ. ಆಗ ನನಗೆ ಬೆನ್ನುನೋವು ಕಾಡುತ್ತಿತ್ತು. ಯೋಗ ತರಗತಿಗೆ ಸೇರಿದ ಆರಂಭದಲ್ಲಿ ಕೆಲವು ಆಸನಗಳನ್ನು ಮಾಡಲು ಕಷ್ಟವಾಗುತ್ತಿತ್ತು. ಗುರುಗಳ ಸೂಚನೆಯಂತೆ ಕಷ್ಟಪಟ್ಟು ಆಸನಗಳನ್ನು ಮಾಡಿದೆ. ಈಗ ಬೆನ್ನುನೋವು ತುಂಬ ಕಡಿಮೆಯಾಗಿ ಆರೋಗ್ಯದಲ್ಲಿ ತುಂಬಾ ಸುಧಾರಣೆಯಾಗಿದೆ. ಯೋಗಾಸನಗಳನ್ನು ಆತ್ಮವಿಶ್ವಾಸದಿಂದ ಮಾಡಲು ಕೂಡಾ ಸಾಧ್ಯವಾಗಿದೆ.
ಮೀರಾ ರಾಜೇಶ್‌, ಚಿಟಾ³ಡಿ, ಉಡುಪಿ

ಎರಡು ವರ್ಷಗಳಿಂದ ನನ್ನ ಭುಜಗಳಲ್ಲಿ ನೋವು ಕಾಡುತ್ತಿತ್ತು. ನಾನು ಪ್ರತಿದಿನವೆಂಬಂತೆ ನೋವುನಿವಾರಕ ಗುಳಿಗೆಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಅಯ್ಯಂಗಾರ್‌ ಯೋಗವನ್ನು ಅಭ್ಯಾಸ ಮಾಡಿದ ಮೇಲೆ ನೋವು ಕಡಿಮೆಯಾಯಿತು. ನಿಜವಾಗಿ ನಾನು ನನ್ನ ಯೋಗ  ಗುರುಗಳಾದ ಶೋಭಾ, ವನಿತಾ,  ಸುಚಿತ್ರಾ ಅವರಿಗೆ ಕೃತಜ್ಞತೆ ಹೇಳಬೇಕು!
ಸೋನಿಯಾ ರಾಜೇಶ್‌, ಮಣಿಪಾಲ್‌

ನಾಲ್ಕು ವರ್ಷಗಳ ಹಿಂದೆ ಬೆನ್ನುನೋವಿನಿಂದ ಬಳಲುವುದನ್ನು ಕಂಡ ಪರಿಚಿತರೊಬ್ಬರು ಉಡುಪಿಯ “ಅಯ್ಯಂಗಾರ್‌ ಯೋಗಶಿಕ್ಷಕಿ’ ಶೋಭಾ ಶೆಟ್ಟಿಯವರನ್ನು ಪರಿಚಯಿಸಿದರು. ಅಂದಿನಿಂದ ನಿಯತವಾಗಿ ನಾನು ಅವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ನಡೆಸುತ್ತಿದ್ದು ನನ್ನ ಬೆನ್ನುನೋವಿನ ತೊಂದರೆಯಿಂದ ಮುಕ್ತಳಾಗಿದ್ದೇನೆ. ಯೋಗಾಭ್ಯಾಸ ನನ್ನ ದೈಹಿಕ, ಮಾನಸಿಕ ಆರೋಗ್ಯದ ಸುಧಾರಣೆಗೆ ಕಾರಣವಾಗಿದೆ. ಯೋಗಾಸನದ ಸೂಕ್ಷ್ಮ ವಿವರಗಳಿಗೂ ಒತ್ತು ನೀಡಿ ತರಬೇತಿ ನೀಡುವ ಶೋಭಾ ಶೆಟ್ಟಿಯವರು ಯೋಗದ ಹೊಸ ಆಯಾಮವನ್ನು ನನಗೆ ಪರಿಚಯಿಸಿದ್ದಾರೆ.
 ಪದ್ಮಾವತಿ ತಲ್ಲೂರು

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.