ಬೆಳ್ಮಣ್: ಲಾಕ್ ಡೌನ್ ನಡುವೆಯೂ ಕದ್ದುಮುಚ್ಚಿ ಮಲ್ಲಿಗೆ ವ್ಯಾಪಾರ…!
Team Udayavani, Apr 12, 2020, 11:39 AM IST
ಬೆಳ್ಮಣ್: ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲ ಚಟುವಟಿಕೆಗಳು ಸ್ತಬ್ಧವಾಗಿದ್ದರೂ ಬೆಳ್ಮಣ್, ಸಾಂತೂರು, ಶಿರ್ವ, ಶಂಕರಪುರದಲ್ಲಿ ಕೆಲವು ಮಲ್ಲಿಗೆ ಕಟ್ಟೆಯವರು ಮನೆ ಮನೆಗೆ ಹೋಗಿ ಮಲ್ಲಿಗೆ ಖರೀದಿ ಮುಂದುವರಿಸಿದ್ದಾರೆ.
ಶಂಕರಪುರ ದರ ಕೇಂದ್ರದಲ್ಲಿ ನಡೆದ ಮಲ್ಲಿಗೆ ವ್ಯಾಪಾರಿಗಳ ಸಭೆಯಲ್ಲಿ ಮಲ್ಲಿಗೆ ಖರೀದಿಸಬಾರದು ಎಂದು ನಿರ್ಧರಿಸಲಾಗಿದ್ದರೂ ಹಣದಾಸೆಗೆ ಆದೇಶ ಮೀರಿ ವ್ಯಾಪಾರ ಮಾಡಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಸುರತ್ಕಲ್ ಭಾಗದಿಂದ ಕೆಲವು ವ್ಯಕ್ತಿಗಳು ಕದ್ದು ಮುಚ್ಚಿ ಈ ಭಾಗಕ್ಕೆ ಬಂದು ಮಲ್ಲಿಗೆ ಕೃಷಿಕರಿಗೆ ಚೆಂಡು ಒಂದರ ತಲಾ ಹತ್ತು ರೂ. ನೀಡಿ ಮಲ್ಲಿಗೆ ಖರೀದಿಸುತ್ತಿದ್ದಾರೆ.
ವೈದ್ಯಕೀಯ ಸಿಬಂದಿ, ಆರೋಗ್ಯ ಕಾರ್ಯಕರ್ತರು, ಪೌರ ಕಾರ್ಮಿಕರು ಪೊಲೀಸರು ನಾಗರಿಕರ ಆರೋಗ್ಯ ರಕ್ಷಣೆಗೆ ಹೋರಾಡುತ್ತಿರುವ ಸಂದರ್ಭ ಕೆಲವರು ಕಾನೂನು ಮೀರಿ ನಡೆಯುತ್ತಿದ್ದಾರೆ.
ಇವರ ವಿರುದ್ಧ ಕ್ರಮಕ್ಕೆ ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.
ನಾಗರಿಕರ ಸಮಯಪ್ರಜ್ಞೆ
ಕಳೆದ ಎ.1 ರಂದು ಮಂಗಳೂರು ಭಾಗದಿಂದ ದ್ವಿಚಕ್ರವಾಹನದಲ್ಲಿ ಮಲ್ಲಿಗೆ ಖರೀದಿಸಲು ಬಂದವರನ್ನು ಬಂಟಕಲ್ಲು ಪರಿಸರದ ನಾಗರಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ಕಾರಣದಿಂದಾಗಿ ಮಂಗಳೂರು ಭಾಗದ ವ್ಯಾಪಾರಿಗಳು ಸ್ಥಳೀಯ ಕಟ್ಟೆಗಳ ಏಜಂಟರ ಮೂಲಕವೇ ಮಲ್ಲಿಗೆ ಪಡೆದು ವ್ಯಾಪಾರ ಕುದುರಿಸಿಕೊಳ್ಳುತ್ತಿರುವುದೂ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು