ಉದ್ಯಾವರ ಜಯಲಕ್ಷ್ಮಿ ಜವುಳಿ ಮಳಿಗೆ ಸಂಸ್ಥಾಪಕಿ ಗೀತಾ ವಿ. ಹೆಗ್ಡೆ ನಿಧನ
Team Udayavani, Aug 17, 2021, 8:18 AM IST
ಕಟಪಾಡಿ: ಉದ್ಯಾವರ ಜಯಲಕ್ಷ್ಮಿ ಜವುಳಿ ಮಳಿಗೆ ಸಂಸ್ಥಾಪಕಿ ಗೀತಾ ವಿ. ಹೆಗ್ಡೆ (70 ವ) ಉದ್ಯಾವರ ಗುಡ್ಡೆಯಂಗಡಿ ತನ್ನ ಸ್ವಗೃಹದಲ್ಲಿ ಆ.17ರಂದು ನಿಧನ ಹೊಂದಿದರು
52 ವರ್ಷಗಳ ಹಿಂದೆ ಉದ್ಯಾವರದಲ್ಲಿ ಪತಿ ಎನ್. ವಾಸುದೇವ ಹೆಗ್ಡೆ ಸಹಿತವಾಗಿ ಜಯಲಕ್ಷ್ಮಿ ವಸ್ತ್ರ ಮಳಿಗೆ ಸ್ಥಾಪಿಸಿದ್ದು ಇದೀಗ ರಾಜ್ಯಾದ್ಯಂತ ಹೆಸರುವಾಸಿಯಾಗಿದೆ.
ಇದನ್ನೂ ಓದಿ:ಹೊಸ ಆವಿಷ್ಕಾರಗಳಿಂದ ಕೃಷಿ ಸಮಸ್ಯೆಗೆ ಪರಿಹಾರ ಅಗತ್ಯ: ವೆಂಕಯ್ಯ ನಾಯ್ಡು
ಮೃತರು ಉದ್ಯಾವರ ಜಯಲಕ್ಷ್ಮಿ ಜವುಳಿ ಮಳಿಗೆ ಮಾಲಕರಾದ ಪುತ್ರರಾದ ವೀರೇಂದ್ರ ಹೆಗ್ಡೆ ಮತ್ತು ರವೀಂದ್ರ ಹೆಗ್ಡೆ, ಪುತ್ರಿ ವೀಣಾ ಹೆಗ್ಡೆ ಅವರನ್ನು ಅಗಲಿರುತ್ತಾರೆ