ಜಯಮಾಲಾ ಗ್ಲಾಮರಸ್ ಸಚಿವೆ: ಪ್ರಮೋದ್
Team Udayavani, Aug 30, 2018, 11:16 AM IST
ಉಡುಪಿ: ಜಯಮಾಲಾ ನಮ್ಮ ಗ್ಲಾಮರೆಸ್ ಉಸ್ತುವಾರಿ ಸಚಿವರು, ಅವರ ಗ್ಲಾಮರ್ ನಮಗೂ ಇಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಜಯಮಾಲಾ 1 ದಿನ ಮಾತ್ರ ನಗರ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ಬಂದಿರುವುದು ನಿಮಗೆ ಸಾಕಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ, ಅವರ 1 ದಿನದ ಪ್ರಚಾರವೇ ದೊಡ್ಡ ಪ್ರಭಾವವನ್ನೇ ಸೃಷ್ಟಿಸಿದೆ. ಉಡುಪಿಯಲ್ಲಿ ಜಯಮಾಲಾ ಗಾಳಿ ಎಬ್ಬಿಸಿದ್ದಾರೆ ಎಂದರು.
ಕಾಂಗ್ರೆಸ್ ಸನಾತನ ಧರ್ಮದಂತೆ!
ಕಾಂಗ್ರೆಸ್ಗೆ ಇದು ಅಳಿವು ಉಳಿವಿನ ಚುನಾವಣೆ ಎಂದು ಹೇಳಲಾಗುತ್ತಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಕಾಂಗ್ರೆಸ್ ಪಕ್ಷ ಎಂದಿಗೂ ಉಳಿಯುತ್ತದೆ. ಸನಾತನ ಧರ್ಮದಂತೆ ಕಾಂಗ್ರೆಸ್ ಪಕ್ಷ. ಸನಾತನ ಧರ್ಮ ಎಂದಿಗೂ ನಾಶವಾಗುವುದಿಲ್ಲ. ನಾನು ಬಿಟ್ಟರೂ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ ಎಂದರು.
ಪತ್ರಕರ್ತರೊಬ್ಬರು ನಾನು ಇಲ್ಲದಿದ್ದರೂ ಅಂದರೆ ಏನು ಅರ್ಥ? ವಿಧಾನಸಭಾ ಚುನಾವಣೆಯಂತೆ ಗೇಟು ತೆರೆಯುವುದು ಮತ್ತು ಹಾರುವುದು ಎಂಬೆಲ್ಲಾರೀತಿಯಲ್ಲಿ ಪ್ರಚಾರವಾಗಿದೆ. ಮುಂದಿನ ಲೋಕಸಭಾ ಚುನಾವಣೆಯೊಳಗೆ ಪಕ್ಷ ಬಿಡುವ ಆಲೋಚನೆ ಇದೆಯಾ ಎಂದು ಪ್ರಶ್ನಿಸಿದರು. ಇದು ಉದಾಹರಣೆಗೆಂದು ನೀಡಿದ ಉತ್ತರ. ತುಂಬಾ ಹಳೆಯ ಪಕ್ಷವಾಗಿರುವ ಕಾಂಗ್ರೆಸ್ಗೆ ಎಂದಿಗೂ ಅಳಿವಿಲ್ಲ ಉಳಿವು ಮಾತ್ರ ಎಂದರು.
ಶಾಸಕ ಭಟ್ ವಿರುದ್ಧ ಪ್ರತಿಭಟನೆ
ನಾನು ಗೆದ್ದ ಒಂದು ತಿಂಗಳೊಳಗೆ ಮರಳು ಸಮಸ್ಯೆ ಬಗೆಹರಿಸುತ್ತೇನೆ ಎಂದು ಶಾಸಕ ಭಟ್ ಹೇಳಿದ್ದರು. ಆದರೆ ಆ. 1ರಿಂದ ಮರಳುಗಾರಿಕೆ ಆರಂಭಗೊಳ್ಳಬೇಕಿತ್ತು. ಅವರಿಗೆ ಇನ್ನೂ ಒಂದು ತಿಂಗಳು ಗಡುವು ನೀಡಿ, ಸೆ. 1ರ ಅನಂತರ ಮರಳುಗಾರಿಕೆ ಆರಂಭಗೊಳ್ಳದಿದ್ದರೆ ಪ್ರತಿಭಟನೆ ನಡೆಸುತ್ತೇವೆ. ಇನ್ನೂ ಮಹತ್ವದ ವಿಚಾರವೆಂದರೆ, ಸಿಆರ್ಝಡ್ ಮತ್ತು ನಾನ್ ಸಿಆರ್ಝಡ್ ಎರಡು ಕಡೆ ಕೇಂದ್ರ ಸರಕಾರ ಮರಳುಗಾರಿಕೆಗೆ ಅವಕಾಶ ನಿರಾಕರಿಸಿದೆ. ಇಲ್ಲಿನ ಶಾಸಕರು ಕೇಂದ್ರದಲ್ಲಿ ಈ ಕುರಿತು ಚರ್ಚಿಸಿದರೆ ಮರಳುಗಾರಿಕೆ ಪುನರಾರಂಭಿಸಲು ಸಾಧ್ಯ. ಇದಕ್ಕೆ ರಾಜ್ಯ ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
MUST WATCH
ಹೊಸ ಸೇರ್ಪಡೆ
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ