ಮಳೆಗಾಲಕ್ಕೆ ಮುನ್ನ ತೋಡು ರಿಪೇರಿ
Team Udayavani, May 17, 2018, 7:50 AM IST
ಉಡುಪಿ: ಉಡುಪಿ – ಮಣಿಪಾಲ ರಾ.ಹೆ. ಹಾದು ಹೋಗುವ ಕಲ್ಸಂಕ ಜಂಕ್ಷನ್ನಲ್ಲಿರುವ ಸೇತುವೆ ಕಾಮಗಾರಿಗೆ ನಗರಸಭೆಯಿಂದ ಅನುದಾನ ಮಂಜೂರಾಗಿದ್ದು, ಇದೀಗ ಮಳೆಯ ನೀರು ಸರಾಗವಾಗಿ ಹರಿದುಹೋಗಲು ತೋಡಿನಲ್ಲಿದ್ದ ಮಣ್ಣನ್ನು ಹಿಟಾಚಿ ಮೂಲಕ ಮೇಲಕ್ಕೆತ್ತಿ ಸರಾಗ ನೀರು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ನಗರಸಭೆ ಅನುದಾನದಡಿ ಕಲ್ಸಂಕ ಸೇತುವೆ ಕಾಮಗಾರಿಗೆ 75 ಲ.ರೂ. ಮಂಜೂರಾಗಿದ್ದು, ಕೆಮೂ¤ರು ಕೃಷ್ಣಮೂರ್ತಿ ಭಟ್ ಕಾಮಗಾರಿಯ ಗುತ್ತಿಗೆ ಪಡೆದಿದ್ದಾರೆ. ಅಂಬಾಗಿಲಿನಿಂದ ಬರುವ ವಾಹನಗಳಿಗೆ ನೇರವಾಗಿ ಕೃಷ್ಣಮಠಕ್ಕೆ ತೆರಳುವಂತೆ ಮತ್ತು ಮಣಿಪಾಲದಿಂದ ಬರುವ ವಾಹನಗಳಿಗೆ ಫ್ರೀ ಲೆಫ್ಟ್ (ಮುಕ್ತ ಎಡ ರಸ್ತೆ) ದೊರಕಬೇಕೆನ್ನುವ ಉದ್ಧೇಶದಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಇದ್ದ ಸ್ಥಳಾವಕಾಶದಲ್ಲಿಯೇ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನೆಲೆಯಲ್ಲಿ “ಕ್ಯೂ’
ಮಾದರಿಯಲ್ಲಿ ಸೇತುವೆ ನಿರ್ಮಿಸಲಾಗುವುದು. ಬಿಡುಗಡೆಗೊಂಡ 75 ಲ.ರೂ. ಕಾಮಗಾರಿಯನ್ನು ಮರು ವಿನ್ಯಾಸಗೊಳಿಸಿ ಇನ್ನಷ್ಟು ವ್ಯವಸ್ಥಿತವಾಗಿ ಸೇತುವೆ ನಿರ್ಮಿಸಲಾಗುವುದು. ಮಳೆಗಾಲ ಕಳೆದ ಆನಂತರವೇ ಸೇತುವೆ ಕಾಮಗಾರಿ ಆರಂಭಿಸಲಾಗುವುದೆಂದು ನಗರಸಭೆ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ