ಕಂಡಲೂರು – ಸೌಕೂರು ರಸ್ತೆ: ದುರಸ್ತಿಗೆ ಆಗ್ರಹ
Team Udayavani, May 17, 2019, 6:20 AM IST
ಬಸೂÅರು: ಕಂಡಲೂರಿನಿಂದ ಸೌಕೂರಿಗೆ ಹೋಗುವ ರಸ್ತೆ ಸುಮಾರು 2 ಕಿ.ಮೀ. ಉದ್ದವಿದ್ದು, ಕಾವ್ರಾಡಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಆರಂಭದ ಸುಮಾರು 1 ಕಿ.ಮೀ. ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು ಸಂಚಾರ ದುಸ್ತರವಾಗಿದೆ.
ಸೌಕೂರು ದೇವಸ್ಥಾನಕ್ಕೆ ತೆರಳುವ ಭಕ್ತರು ಮತ್ತು ಸ್ಥಳೀಯರು ಓಡಾಟಕ್ಕೆ ಇದೇ ರಸ್ತೆಯನ್ನು ಅವಲಂಬಿಸಿದ್ದು, ರಸ್ತೆಯ ಆರಂಭದಲ್ಲಿ 500 ಮೀ. ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಉಳಿದ ರಸ್ತೆಗೆ ಡಾಮರು ಹಾಕಲಾಗಿದ್ದರೂ ರಸ್ತೆಯ ಮಧ್ಯೆಯೇ ಹೊಂಡಗಳು ಬಿದ್ದಿದ್ದು ಸಂಚಾರ ನಡೆಸುವುದು ಕಷ್ಟವಾಗಿದೆ.
ಶೀಘ್ರ ರಸ್ತೆ ದುರಸ್ತಿ ಕಾಮಗಾರಿ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾವ್ರಾಡಿ ಗ್ರಾ.ಪಂ. ಪಿಡಿಒ ಗೀತಾ ಅವರು 2019-20ನೇ ಸಾಲಿನ ಕ್ರಿಯಾ ಯೋಜನೆಯಡಿಯಲ್ಲಿ ರಸ್ತೆಯ ದುರಸ್ತಿ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.