ಕಾರ್ಕಳ: ನಾಗನ ಕಲ್ಲಿಗೂ ಬೇಡಿಕೆ ಇಲ್ಲ ; ಸಾವಿರ ನಾಗನ ಕಲ್ಲುಗಳ ಸರದಾರರಿವರು!


Team Udayavani, Jul 24, 2020, 1:05 PM IST

ಕಾರ್ಕಳ: ನಾಗನ ಕಲ್ಲಿಗೂ ಬೇಡಿಕೆ ಇಲ್ಲ ; ಸಾವಿರ ನಾಗನ ಕಲ್ಲುಗಳ ಸರದಾರರಿವರು!

ಸಚ್ಚಿದಾನಂದ ನಾಯಕ್‌ ಅವರ ಕೆತ್ತನೆಯಲ್ಲಿ ಮೂಡಿಬಂದ ನಾಗನ ಕಲಾಕೃತಿ.

ಕಾರ್ಕಳ: ಕಾರ್ಕಳ ಅನೇಕ ಶಿಲ್ಪಿಗಳನ್ನು ಪಡೆದ ಊರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ರೆಂಜಾಳ ಗೋಪಾಲಕೃಷ್ಣ ಶೆಣೈ, ಸತೀಶ್‌ ಆಚಾರ್ಯ ಮುಂತಾದ ಮಹಾನ್‌ ಶಿಲ್ಪಿಗಳು ಇವರಲ್ಲಿ ಪ್ರಮುಖರು. ಆದರೆ ನಾಗನಕಲ್ಲುಗಳ ಕೆತ್ತನೆಯಲ್ಲಿ ಶಿಲ್ಪಿ ಸಚ್ಚಿದಾನಂದ ನಾಯಕ್‌ ಪ್ರಮುಖರು. ಇವರ ಕೈಯಿಂದ ತಯಾರಾಗುವ ಶಿಲಾಮೂರ್ತಿಗಳಿಗೆ ರಾಜ್ಯವಷ್ಟೆ ಅಲ್ಲ ಹೊರ ರಾಜ್ಯಗಳಲ್ಲೂ ಅತಿಯಾದ ಬೇಡಿಕೆಯಿದೆ. ಈ ಬಾರಿ ಕೊರೊನಾದಿಂದ ದೇವರ ಆರಾಧನೆಗೂ ಏಟು ಬಿದ್ದಿದ್ದು, ನಾಗನ ಕಲ್ಲು, ದೇವರ ಮೂರ್ತಿಗಳಿಗೆ ಬೇಡಿಕೆಯೂ ಕುಸಿದಿದೆ.

12 ಸಾವಿರಕ್ಕೂ ಆಧಿಕ ಕೆತ್ತನೆ
ಇವರು ತೆಳ್ಳಾರು ಗ್ರಾಮದ ರಾಮಚಂದ್ರ ನಾಯಕ್‌ ಮತ್ತು ದಿ| ಜಯಶ್ರೀ ದಂಪತಿ ಪುತ್ರ. ಇದುವರೆಗೆ 12 ಸಾವಿರಕ್ಕೂ ಅಧಿಕ ನಾಗನ ಕಲ್ಲು, ದೇವರ ಮೂರ್ತಿಗಳನ್ನು ಇವರು ರಚಿಸಿದ್ದಾರೆ. ಬಂಟ್ವಾಳ, ಬೆಳ್ತಂಗಡಿ ಪುತ್ತೂರಿನಾದ್ಯಾಂತ ನಾಗನ ಕೆತ್ತನೆಯ ಕಲ್ಲುಗಳನ್ನು ಪೂರೈಸುತಿದ್ದಾರೆ. ಶಿವಮೊಗ್ಗ, ವಿಜಯಪುರ, ಚಿಕ್ಕಮಗಳೂರು, ಹಾಸನ, ಉಡುಪಿ, ಕೊಡಗು, ಬೆಂಗಳೂರು ಬೆಳಗಾವಿ ಜಿಲ್ಲೆಗಳ ಜತೆಗೆ ಹೊರ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಕ್ಕೆ ಹೆಚ್ಚು ಮೂರ್ತಿಗಳನ್ನು ನೀಡಿದ್ದಾರೆ.

ಹೊಸತಕ್ಕೆ ಹೊಂದುವ ಕೆತ್ತನೆ
ವಿಭಿನ್ನ, ತಾಳ್ಮೆಯ ನಾಜೂಕಾದ ಕೆಲಸ. ಕೆತ್ತನೆಯ ಶೈಲಿ ಹೊಸತನಕ್ಕೆ ಹೊಂದಿಕೊಂಡಂತೆ ಬದಲಾವಣೆ ಸಚ್ಚಿದಾನಂದರ ವಿಶೇಷತೆಯಾಗಿದೆ. ಇವರ ಈ ಶೈಲಿಗೆ ಸ್ಥಳೀಯವಷ್ಟೆ ಅಲ್ಲ ಕೇರಳದ ಕೊಟ್ಟಾಯಂನ ಹಾಗೂ ಹೊರ ರಾಜ್ಯಗಳಲ್ಲಿ ಕೂಡ ಸಮ್ಮಾನ ಗೌರವಗಳು ಲಭಿಸಿವೆ.

ಕಲಾಕಾರ!
ಇವರು ಜೋಡುಕಟ್ಟೆಯ ಕೆನರಾ ಬ್ಯಾಂಕ್‌ನ ಕರಕುಶಲ ಅಧ್ಯಯನ ಕೇಂದ್ರ ದಲ್ಲಿ ಶಿಲೆಯ ಕೆತ್ತನೆಗಳ 1999-2000ನೇ ಸಾಲಿನ ವಿದ್ಯಾರ್ಥಿ. ಗುಣವಂತೇಶ್ವರ ಭಟ್‌ ಇವರ ಗುರುಗಳು. ನಾಗನ ಕಲ್ಲು ಹಾಗೂ ದೇವರ ಮೂರ್ತಿಗಳಿಗೆ ಜೀವಂತಿಕೆ ತುಂಬುವ ಅದ್ಭುತ ಕಲಾಕಾರ ಶಿಲ್ಪಿ ಗರಪಂಚಮಿಯ ಅವಧಿಯಲ್ಲಿ ನೆನಪಿಗೆ ಬರುತ್ತಾರೆ.

ಕೋವಿಡ್‌-19ರಿಂದ ಬೇಡಿಕೆ ಕುಸಿತ
ಕರಿಯ ಕಲ್ಲು ಕಾರ್ಕಳದ ಕೃಷ್ಣ ಶಿಲೆಯ ಕಲ್ಲಿನ ಮೂರ್ತಿಗೆ ಭಾರೀ ಬೇಡಿಕೆಯಿದೆ. ಪ್ರತಿ ವರ್ಷ 300ಕ್ಕೂ ಅಧಿಕ ನಾಗನ ಕಲ್ಲುಗಳಿಗೆ ಬೇಡಿಕೆ ಇರುತ್ತಿತ್ತು. ಈ ಬಾರಿ ಕೊರೊನಾದಿಂದ 15ರಿಂದ 20ಕ್ಕೆ ಇಳಿದಿದೆ. ಶೇ.10ರಷ್ಟು ಬೇಡಿಕೆಯಿದೆ. ಹಿಂದೆಯೇ ನಿರ್ಧರಿಸಿದವರು ಮಾತ್ರ ಮೂರ್ತಿ, ಕಲ್ಲಿಗೆ ಬೇಡಿಕೆ ಇರಿಸಿದ್ದಾರೆ. ಹೊಸದಾಗಿ ನಾಗಬನ, ಮೂರ್ತಿಗಳ
ನಿರ್ಮಾಣ ನಿರ್ಧಾರಗಳು ಇಲ್ಲ. ಕೋವಿಡ್ ನಾಗಾರಾಧನೆ ಮೇಲೂ ದುಷ್ಪರಿಣಾಮ ಬೀರಿದೆ.
-ಸಚ್ಚಿದಾನಂದ, ಶಿಲ್ಪಿ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.