ಕಾರ್ಕಳ: ವಿಷ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
Team Udayavani, Oct 11, 2019, 8:09 PM IST
ಕಾರ್ಕಳ: ಕಾರ್ಕಳ ಎಂಪಿಎಂ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ನಲ್ಲೂರು ಗ್ರಾಮದ ಹರೀಶ್ (20) ಶುಕ್ರವಾರ ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಶುಕ್ರವಾರ ಕಾಲೇಜಿಗೆ ತರಗತಿಗೆ ಹಾಜರಾಗದ ಹರೀಶ್ ಗೆಳೆಯನ ಜತೆ ಬೈಕ್ನಲ್ಲಿ ದೂಪದಕಟ್ಟೆಯತ್ತ ತೆರಳಿದ್ದನು. ಈ ವೇಳೆ ಅತ್ತೂರು ಬಳಿ ಬೈಕ್ ನಿಲ್ಲಿಸುವಂತೆ ಸವಾರನಿಗೆ ತಿಳಿಸಿದ ಹರೀಶ್ ಆತನನ್ನು ಮುಂದುವರಿಯುವಂತೆ ಹೇಳಿ ಬೈಕ್ನಿಂದ ಇಳಿದನು. ಬೈಕ್ ಸವಾರ ಸ್ವಲ್ಪ ದೂರ ಹೋಗಿ ವಾಪಸಾಗುವ ವೇಳೆ ಹರೀಶ್ ರಸ್ತೆಯಲ್ಲಿ ಹೊರಳಾಡುತ್ತಿರುವುದು ಕಂಡು ಬಂದಿದ್ದು, ತಕ್ಷಣ ಆತನನ್ನು ಉಡುಪಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಬೆಳ್ಮಣ್ ತಲುಪುವಾಗ ಕೊನೆಯುಸಿರೆಳೆದನು ಎನ್ನಲಾಗಿದೆ.
ಹರೀಶ್ ತಂದೆ ಜಗನ್ನಾಥ, ತಾಯಿ ಚಂಪಾ, ಇಬ್ಬರು ಸಹೋದರರನ್ನು ಅಗಲಿದ್ದಾನೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಾವಂತ ವಿದ್ಯಾರ್ಥಿ
ಅಂತಿಮ ಬಿಎ ಓದುತ್ತಿದ್ದ ಹರೀಶ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಕಲಿಕೆಯಲ್ಲಿ ಮಾತ್ರವಲ್ಲದೇ ಕಬಡ್ಡಿ ಆಟಗಾರನಾಗಿಯೂ ಗುರುತಿಸಿಕೊಂಡಿದ್ದ.
ಸ್ಟೇಟಸ್ ಅಪ್ಲೋಡ್
ಟೈಮ್ ಈಸ್ ಓವರ್, ಐ ಆ್ಯಮ್ ಕಮಿಂಗ್ ಗಾಡ್. ಜೀವನ ಅಂದ್ರೆ ಏನಂತ ಚೆನ್ನಾಗಿ ತಿಳ್ಕೊಂಡೆ ಎಂದು ಹರೀಶ್ ಶುಕ್ರವಾರ ತನ್ನ ವ್ಯಾಟ್ಸಪ್ ಸ್ಟೇಟಸ್ ಅಪ್ಲೊಡ್ ಮಾಡಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ