ಮೊಯಿಲಿ: ಕಾರ್ಕಳ ಕಾಂಗ್ರೆಸ್ ಟಿಕೆಟ್ ಹೈಕಮಾಂಡ್ “ಕೈ’ಲಿ
Team Udayavani, Mar 21, 2018, 7:30 AM IST
ಉಡುಪಿ: ಕಾರ್ಕಳ ಕ್ಷೇತ್ರದ ಟಿಕೆಟ್ ಕುರಿತು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
ಕಾರ್ಕಳಕ್ಕೆ ಹೈಕಮಾಂಡ್ ನೀವೇ ಅಲ್ಲವೆ? ಎಂದು ಪತ್ರಕರ್ತರು ಪ್ರಶ್ನಿಸಿದಾಗ “ಹೈಕಮಾಂಡ್ ಒಂದೇ, ಅದುವೇ ನಿರ್ಧರಿಸಲಿದೆ’ ಎಂದರು. ಇತ್ತೀಚೆಗೆ ನೀವು ಮಾಡಿದ್ದೀರಿ ಎನ್ನಲಾದ ಟ್ವೀಟ್ನಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿಲ್ಲವೆ ಎಂದು ಪ್ರಶ್ನಿಸಿದಾಗ “ಇದು ಹ್ಯಾಕ್ ಆದ ಟ್ವೀಟ್. ಡ್ಯಾಮೇಜ್ ಹೇಗೆ ಆಗುತ್ತದೆ’ ಎಂದು ಮರು ಪ್ರಶ್ನಿಸಿದರು.
ಲಿಂಗಾಯತ-ವೀರಶೈವ ಧರ್ಮದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮತ, ರಾಜಕೀಯ ಇಲ್ಲ. ಲಿಂಗಾಯತ ಧರ್ಮಕ್ಕೆ ಸಂಬಂಧಿಸಿ 13ನೇ ಶತಮಾನದಿಂದ ಪ್ರಯತ್ನ ನಡೆದಿದೆ. ಬಸವೇಶ್ವರರು ಹೊಸ ರೀತಿಯ ಜಾತ್ಯತೀತ ಕಲ್ಪನೆಯ ಧರ್ಮವನ್ನು ಹುಟ್ಟುಹಾಕಿದ್ದರು. ನಮ್ಮ ದೃಷ್ಟಿಯಲ್ಲಿ ಇವೆರಡೂ ಒಂದೇ. ಬಸವೇಶ್ವರರ ಪ್ರಯತ್ನಕ್ಕೆ ಸರಕಾರ ವಿಶೇಷ ಗೌರವ ಕೊಟ್ಟಿದೆ ಅಷ್ಟೆ. ಎಂದರು.
ಮತ್ತೆ ರಾಹುಲ್ ಉಡುಪಿಗೆ: ರಾಹುಲ್ ಗಾಂಧಿಯವರ ಕಾರ್ಯಕ್ರಮ ಉಡುಪಿಯಲ್ಲಿ ಇಲ್ಲ. ಹೀಗಾಗಿ ಶ್ರೀಕೃಷ್ಣ ಮಠಕ್ಕೆ ಹೋಗುತ್ತಿಲ್ಲ ಅಷ್ಟೆ. ಇದು ಸಿದ್ದರಾಮಯ್ಯನವರ ಇಷ್ಟದ ಪ್ರಕಾರ ನಡೆಯುವಂಥದ್ದಲ್ಲ. ಇನ್ನೊಮ್ಮೆ ಉಡುಪಿಗೆ ಬಂದಾಗ ರಾಹುಲ್ ಅವರು ಕೃಷ್ಣ ಮಠಕ್ಕೆ ಹೋಗುತ್ತಾರೆ ಎಂದು ಮೊಯಿಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ