ಕಾರ್ಕಳ: ನಿರುಪಯುಕ್ತ ಸ್ವಾಗತ ಫಲಕ
Team Udayavani, Mar 26, 2019, 6:30 AM IST
ಕಾರ್ಕಳ: 4 ವರ್ಷಗಳ ಹಿಂದೆ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸ್ವಾಗತ ಫಲಕವೊಂದು ಜೋಡುರಸ್ತೆಯ ಮೂಲೆಯಲ್ಲಿ ಕಾಣದಂತೆ ಪಾಳುಬಿದ್ದಿದೆ.
2015ರ ಕಾರ್ಕಳ ಬಾಹುಬಲಿ ಮಹಾ ಮಸ್ತಕಾಭಿಷೇಕ ಸಂದರ್ಭ ಸರಕಾರದಿಂದ ಲಭಿಸಿದ ವಿಶೇಷ ಅನುದಾನದಲ್ಲಿ ಪುರಸಭೆಯು 8 ಕೋಟಿ ರೂ. ವೆಚ್ಚದಲ್ಲಿ 3 ಗೋಪುರಗಳನ್ನು ನಿರ್ಮಿಸಿತ್ತು. ಕಾರ್ಕಳ ಪೇಟೆಯಿಂದ ಇತರ ಪಟ್ಟಣಗಳಿಗೆ ಇರುವ ದೂರವನ್ನು ಸೂಚಿಸುವ ಸಲುವಾಗಿ ಈ ಫಲಕಗಳ ನಿರ್ಮಾಣ ನಡೆದಿತ್ತು.
ಗೋಮಟೇಶ್ವರ ಬಳಿಯಲ್ಲೊಂದು ಮತ್ತು ಬೈಪಾಸ್ ರಸ್ತೆಯಲ್ಲೊಂದು ಹೀಗೆ ಎರಡು ಫಲಕಗಳು ಸುಸ್ಥಿತಿಯಲ್ಲಿದ್ದರೂ ಜೋಡುರಸ್ತೆ ಗೋಪುರ ಮಾತ್ರ ಉಪಯೋಗವಿಲ್ಲದೇ ಮೂಲೆಯಲ್ಲಿ ಬಿದ್ದಿದೆ.
ಕಾರ್ಕಳ-ಉಡುಪಿ ರಾಷ್ಟ್ರೀಯ ಹೆದ್ದಾರಿ ಯಾಗುವ ಸಂದರ್ಭ ಅಂದರೆ ಒಂದೂವರೆ ವರ್ಷಗಳ ಹಿಂದೆ ತೆಗೆದಿರಿಸಲಾದ ಜೋಡುರಸ್ತೆ ಫಲಕವನ್ನು ರಸ್ತೆ ಕಾಮಗಾರಿ ಪೂರ್ಣವಾದ ಬಳಿಕ ಮರುಸ್ಥಾಪಿಸುವುದು ಪುರಸಭೆಗೆ ಮರೆತೇ ಹೋಗಿದೆ.
ನಾಮ ಫಲಕದ ಕಬ್ಬಣದ ರಾಡ್ ತುಕ್ಕು ಹಿಡಿಯುತ್ತಿದೆ. ಇನ್ನು ಕೆಲ ಸಮಯದ ಬಳಿಕ ಇದನ್ನು ಗುಜರಿಗೆ ರವಾನಿಸುವಂತಾಗಲಿದೆ. ಈ ಮೂಲಕ ಸಾರ್ವಜನಿಕ ಹಣ ಪೋಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ
MUST WATCH
ಹೊಸ ಸೇರ್ಪಡೆ
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್