ಕಾಪು ಮೀನು ಮಾರುಕಟ್ಟೆ ಬಂದ್‌ ​​​​​​​


Team Udayavani, Sep 9, 2018, 6:00 AM IST

0809kpe6.jpg

ಕಾಪು: ಬೆಳಪುವಿನಲ್ಲಿ ತೆರೆದಿರುವ ಮೀನು ಮಾರಾಟದ ಅಂಗಡಿ ವಿರುದ್ಧ  ಕಾಪು ಮಹಿಳಾ ಮೀನು ಮಾರಾಟಗಾರರು ಮಾರುಕಟ್ಟೆ ಬಂದ್‌ ಮಾಡಿ ಶನಿವಾರ ಪ್ರತಿಭಟನೆ ನಡೆಸಿದರು. 
 
ಕಾಪು ಮೀನು ಮಾರುಕಟ್ಟೆಯಲ್ಲಿ ಸುಮಾರು 70 ಮಂದಿ ಮಹಿಳಾ ಮೀನುಗಾರರಿದ್ದಾರೆ. ಇವರೊಂದಿಗೆ ಇದ್ದ ಸುಮಾ ಎಂಬವರು ಕೆಲ ದಿನಗಳ ಹಿಂದೆ ಬೆಳಪುವಿನಲ್ಲಿ ಪ್ರತ್ಯೇಕವಾಗಿ ಮೀನು ಮಾರಾಟ ಅಂಗಡಿಯನ್ನು ತೆರೆದಿದ್ದು, ಇದರಿಂದ ತೊಂದರೆ ಯಾಗುತ್ತಿದೆ ಎಂದು ಮಹಿಳಾ ಮೀನು ಮಾರಾಟಗಾರರು ದೂರಿದ್ದಾರೆ. 

ಸಂಘಕ್ಕೆ ಮನವಿ
ಬೆಳಪು ಗ್ರಾಮದಲ್ಲಿ ಹಸಿ ಮೀನು ಮಾರಾಟ ಅಂಗಡಿ ಪ್ರಾರಂಭಿಸಿರುವುದರಿಂದ  4 ದಿನ ಗಳಿಂದ ವ್ಯಾಪಾರ ಕುಂಠಿತವಾಗಿದೆ. ಬೆಳಪು, ಪಣಿಯೂರು, ಮಲ್ಲಾರು, ಮಜೂರಿನಿಂದ ಬರುವ ಗ್ರಾಹಕರು ಬೆಳಪುವಿನಲ್ಲೇ ಮೀನು ಖರೀದಿಸುತ್ತಿದ್ದು, ಕಾಪುವಿನಿಂದ ಮನೆ ಮನೆ ಮೀನು ಮಾರಾಟಗಾರರಿಗೂ ಇದರಿಂದ ತೊಂದರೆಯಾಗುತ್ತಿದೆ. ಇದನ್ನು ಬಗೆಹರಿಸಿ ಕೊಡುವಂತೆ  ಕಾಪುವಿನ ಮಹಿಳಾ ಮೀನುಗಾರರು ಉಡುಪಿ ತಾ| ಮಹಿಳಾ ಹಸಿ ಮೀನು ಮಾರಾಟಗಾರರ ಸಂಘಕ್ಕೆ ಮನವಿ ಸಲ್ಲಿಸಿದ್ದಾರೆ. 

ಶನಿವಾರ ದಿನವಿಡೀ ಪ್ರತಿಭಟನೆ ನಡೆಸಿದ ಮಹಿಳೆಯರು ಬೆಳಪುಗೆ ತೆರಳಿ ಸುಮಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಅಂಗಡಿ ಮುಚ್ಚಿ ಪಾರಂಪರಿಕ ಮಾದರಿಯಲ್ಲಿ ಮೀನು ಮಾರಾಟಕ್ಕೆ ಸಹಕರಿಸಲು ಮನವಿ ಮಾಡಿದ್ದಾರೆ.  

ಸ್ಥಳಾವಕಾಶದ ಕೊರತೆ
ಬೆಳಪುವಿನಲ್ಲಿ ಗ್ರಾಮ ಪಂಚಾಯತ್‌ ಅನುಮತಿ ಮೇರೆಗೆ ಅಂಗಡಿ ತೆರೆಯಲಾಗಿದೆ. ಕಾಪು ಮಾರುಕಟ್ಟೆಯಲ್ಲಿ ಕುಳಿತು ಕೊಳ್ಳಲು, ಮೀನು ಮಾರಾಟ ಮಾಡಲು ಸ್ಥಳಾವಕಾಶದ ಕೊರತೆಯಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಮಾರಾಟಕ್ಕೆ ಉದ್ದೇಶಿಸಿದ್ದೇನೆ. ಇದಕ್ಕೆ ನಮ್ಮದೇ ಸಮುದಾಯದ ಮಹಿಳೆಯರು ವಿರೋಧಿಸುವುದು  ಬೇಸರ ತಂದಿದೆ.  
– ಸುಮಾ,ಬೆಳಪುವಿನ ಮೀನು ಮಾರಾಟ ಮಹಿಳೆ

 ಒಟ್ಟಾಗಿ ತೀರ್ಮಾನ 
ಕಾಪುವಿನಲ್ಲಿ ನಾವೆಲ್ಲರೂ ಒಟ್ಟಾಗಿ ಮೀನು ಮಾರಾಟ ನಡೆಸುತ್ತಿದ್ದೇವೆ. ಈಗ ನಮ್ಮೊಂದಿಗೆ ಇದ್ದವರು ಬೇರೊಂದು ಪ್ರದೇಶದಲ್ಲಿ ಅಂಗಡಿ ತೆರೆದಿರುವುದು ಸಮಂಜಸವಲ್ಲ. ಮುಂದೆ ಎಲ್ಲರೂ ಇದೇ ರೀತಿ ಮಾಡಿದರೆ ನಮ್ಮ ಪಾಡೇನು ಎಂಬ ಚಿಂತೆ ಇದೆ. ಈ ಬಗ್ಗೆ ಅವರ ಬಳಿಯೂ ಮಾತುಕತೆ ನಡೆಸಿದ್ದೇವೆ. ಒಟ್ಟಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ.  
– ಶಾಂತಾ, ಕಾಪು ಮೀನು 
ಮಾರಾಟಗಾರ ಮಹಿಳಾ ಮುಖಂಡೆ

ಟಾಪ್ ನ್ಯೂಸ್

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

Rajeev Chandrashekhar

Corrupt ಡಿಕೆಶಿ ಸರ್ಟಿಫಿಕೆಟ್‌ ಬೇಕಾಗಿಲ್ಲ: ಕೇಂದ್ರ ಸಚಿವ ರಾಜೀವ್‌ ತಿರುಗೇಟು

1-wqewqe

2014 ಭರವಸೆ, 2019 ನಂಬಿಕೆ, 2024ರಲ್ಲಿ ಗ್ಯಾರಂಟಿ: ಮೋದಿ

mamata

CAA, NRC ರದ್ದು: ದೀದಿ ಶಪಥ ಪ್ರಣಾಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

3-hegde

LS Polls: ಮಾಡಿದ ಕೆಲಸ ನೋಡಿ ಮತ ನೀಡಿ: ಜಯಪ್ರಕಾಶ್‌ ಹೆಗ್ಡೆ

Udupi-Chikkamagaluru ಲೋಕಸಭಾ ಕ್ಷೇತ್ರ: ಹಳೇ ಹುಲಿಗಳ ನಡುವೆ ಹೊಸ ಯುದ್ಧ

Udupi-Chikkamagaluru ಲೋಕಸಭಾ ಕ್ಷೇತ್ರ: ಹಳೇ ಹುಲಿಗಳ ನಡುವೆ ಹೊಸ ಯುದ್ಧ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.