ಕಿಡ್ನಿ ವೈಫಲ್ಯ: ನೆರವಿಗಾಗಿ ಮನವಿ
Team Udayavani, Aug 4, 2017, 8:20 AM IST
ಕಾರ್ಕಳ: ತಾಲೂಕಿನ ಮಿಯ್ನಾರು ಗ್ರಾಮದ ಜೋಡುಕಟ್ಟೆ ಕಜಾಯ್ ನಿವಾಸಿ ಕುಮಾರಿ (29)ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದು, ಕಳೆದೊಂದು ವರ್ಷದಿಂದ ಈ ಸಮಸ್ಯೆಯಿಂದ ತತ್ತರಿಸಿಹೋಗಿದ್ದಾರೆ. ಅವರ ಚಿಕಿತ್ಸೆಗೆ ಆರ್ಥಿಕ ನೆರವು ಸಿಕ್ಕರೆ ಜೀವ ಉಳಿಯುವ ಭರವಸೆ ಹೊಂದಿದ್ದಾರೆ. ಈಗಾಗಲೇ ಇವರನ್ನು ಉಳಿಸಿಕೊಳ್ಳಲು ಮನೆ ಮಂದಿ ಸುಮಾರು ರೂ. 2 ಲಕ್ಷ ವೆಚ್ಚ ಮಾಡಿದ್ದು ಪತಿ ಕೂಲಿ ಕಾರ್ಮಿನಾಗಿರುದರಿಂದ ಮುಂದಿನ ಚಿಕಿತ್ಸಾ ವೆಚ್ಚವನ್ನು ಭರಿಸಲು ಅಸಹಾಯಕರಾಗಿದ್ದಾರೆ. ಮೂಲತಃ ಗಂಗಾವತಿಯ ನಿವಾಸಿಯಾಗಿರುವ ಪತಿ ಕುಮಾರಸ್ವಾಮಿ ಹೊಟ್ಟೆಪಾಡಿಗಾಗಿ ಮಿಯ್ನಾರಿನಲ್ಲಿ ನೆಲೆಸಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಪತ್ನಿ ಕುಮಾರಿ ಅವರಿಗೆ 2ನೆಯ ಹೆರಿಗೆ ಸಂದರ್ಭ ಕಿಡ್ನಿ ಸಮಸ್ಯೆ ಕಂಡುಬಂದಿತ್ತು. ವೈದ್ಯರು ತಪಾಸಣೆ ನಡೆಸಿದಾಗ ಎರಡೂ ಕಿಡ್ನಿಗಳು ವೈಫಲ್ಯವಾಗಿದೆ ಎನ್ನುವ ಸುದ್ದಿ ಹೇಳಿ ಮನೆಮಂದಿ ಎಲ್ಲ ಕಂಗಾಲಾದರು. ಬಳಿಕ ಅವರನ್ನು ವಾರಕ್ಕೆರಡು ಬಾರಿ ಮಂಗಳೂರಿನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಈಗಲೂ ಚಿಕಿತ್ಸೆ ನಡೆಯುತ್ತಿದೆ.
ಕಿಡ್ನಿ ದಾನಕ್ಕೆ ಮುಂದಾದ ತಾಯಿ
ಮಗಳು ಕುಮಾರಿ ಬದುಕಬೇಕು ಎನ್ನುವ ಆಕಾಂಕ್ಷೆಯಿಂದ ತಾಯಿ ರಾಜಮ್ಮ ತಮ್ಮದೊಂದು ಕಿಡ್ನಿಯನ್ನು ಮಗಳಿಗೆ ಕೊಡಲು ಸಿದ್ಧರಾಗಿದ್ದಾರೆ. ಆದರೆ ಕಿಡ್ನಿ ಜೋಡಿಸಲು ಸುಮಾರು 5 ಲಕ್ಷ ಖರ್ಚಾಗುತ್ತದೆ ಎಂದು ತಿಳಿದ ಮೇಲೆ ಮನೆ ಮಂದಿ ಅಷ್ಟು ವೆಚ್ಚವನ್ನು ಬರಿಸಲಾಗದೇ ಕಂಗಾಲಾಗಿದ್ದಾರೆ. ಅಲ್ಲದೇ ಡಯಾಲಿಸಿಸ್ ಚಿಕಿತ್ಸೆಗೆ ವಾರಕ್ಕೆ ರೂ. 12,000 ಖರ್ಚಾಗುತ್ತಿದೆ. ಇಷ್ಟೆಲ್ಲಾ ಅಸಹಾಯಕತೆಯ ನಡುವೆಯೂ ಪತ್ನಿಯನ್ನು ಬದುಕಿಸಲು ಹೊರಟ ಪತಿಗೆ ಸಹೃದಯಿಗಳು, ಸಂಘ ಸಂಸ್ಥೆಗಳು ಆರ್ಥಿಕವಾಗಿ ನೆರವಾದರೆ ಜೀವವೊಂದನ್ನು ಉಳಿಸಬಹುದು ಪತಿಯ ಕನಸನ್ನು ನನಸಾಗಿಸಬಹುದು.
ನೆರವು ನೀಡಲು
ಕರ್ನಾಟಕ ಬ್ಯಾಂಕ್ ಕಾರ್ಕಳ ಶಾಖೆಯಲ್ಲಿರುವ ಕುಮಾರಿ ಅವರ ಉಳಿತಾಯ ಖಾತೆ :
ಖಾತೆ ಸಂಖ್ಯೆ: 4042500101868201,
IFSC Code: KARB0000404ಗೆ ಕಳಿಸಬಹುದು, ಮೊ.8197213533ಗೆ ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ