ಸ್ಥಳೀಯ ಆರ್ಥಿಕತೆಯ ಪುನಶ್ಚೇತನಕ್ಕೆಂದೇ ಹುಟ್ಟಿದ ಸಂಘ

ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘ

Team Udayavani, Feb 9, 2020, 5:45 AM IST

0802uppe5

ಸಮಾಜಮುಖೀ ನೆಲೆಯಲ್ಲಿ ಆಲೋಚಿಸುತ್ತಾ ಕ್ರಿಯಾಶೀಲವಾಗಿರುವ ಸಂಘ ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಂಘ. ಹಾಲು ಖರೀದಿಗೆ ಸೀಮಿತಗೊಳ್ಳದೆ
ಹೈನುಗಾರರ ಜ್ಞಾನ ಅಭಿವೃದ್ಧಿ ಕಡೆಗೂ ಗಮನ ಹರಿಸುತ್ತಿರುವುದು ವಿಶೇಷ.

ಉಪ್ಪುಂದ: ಸಮಾಜಮುಖೀ ಸಂಘ ವಾಗಿ ಗುರುತಿಸಿಕೊಂಡಿರುವ ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಂಘಕ್ಕೆ 45 ವರ್ಷಗಳ ಇತಿಹಾಸವಿದೆ.

ನಾಲ್ಕು ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 75 ಮಂದಿ ಸದಸ್ಯರನ್ನು ಒಟ್ಟು ಮಾಡಿ 1975 ರಲ್ಲಿ ಆರಂಭವಾದದ್ದು ಈ ಸಂಘ.

ಗ್ರಾಮೀಣ ಪ್ರದೇಶವಾದ ಕಿರಿಮಂಜೇಶ್ವರ, ಹೇರೂರು, ಉಳ್ಳೂರು, ಕಂಬದಕೋಣೆ, ಕೊಡೇರಿ ಭಾಗದ ಹೈನುಗಾರರು ಹಾಲನ್ನು ಹೊಟೆಲ್‌, ಮನೆಮನೆಗಳಿಗೆ ನೀಡಿ ಅಲ್ಪಸ್ವಲ್ಪ ಆದಾಯಗಳಿಸುತ್ತಿದ್ದರು. ಈ ಸಮಯದಲ್ಲಿ ಊರಿನ ಮುತ್ಸದಿಗಳನ್ನು ಒಳಗೊಂಡ ತಂಡ ರೈತರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲು ಕಟ್ಟಿದ ಸಂಘಟನೆಯೇ ಈ ಸಂಘ.

ಸುಮಾರು 22 ವರ್ಷಗಳ ಕಾಲ ಬಾಡಿಗೆ ಕಟ್ಟದಲ್ಲಿದ್ದು, 1997 ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಗೊಂಡಿತು. ಆರಂಭದಲ್ಲಿ ಸಂಗ್ರಹ ವಾಗುತ್ತಿದ್ದ ಪ್ರಮಾಣ ಕೇವಲ 100-125 ಲೀಟರ್‌ಗಳು. ಪ್ರಸ್ತುತ 357 ಸದಸ್ಯರನ್ನು ಹೊಂದಿರುವ ಸಂಸ್ಥೆಯಲ್ಲಿ 1500ಲೀ.ಹೆಚ್ಚು ಹಾಲು ಸಂಗ್ರಹವಾಗುತ್ತಿದೆ. 2008ರಲ್ಲಿ ಅಧ್ಯಕ್ಷ ಮಂಜುನಾಥ ಕಾರಂತರ ಅವಧಿಯಲ್ಲಿ 3ಸಾವಿರ ಲೀ. ಸಾಮರ್ಥ್ಯದ ಬಿಎಂಸಿ (ಬಲ್ಕ್ ಮಿಲ್ಕ್ ಕೂಲರ್‌) ಸ್ಥಾಪಿಸಲಾಗಿದೆ. ಡ್ರೈನೆಜ್‌ ವ್ಯವಸ್ಥೆ ಹಾಗೂ ಡೈರಿಯಲ್ಲಿಯೇ ಹಾಲಿನ ಪಾತ್ರೆ ಸ್ವಚ್ಚಗೊಳಿಸಲು ಬಿಸಿ ನೀರಿನ ಸೌಲಭ್ಯ ಕಲ್ಪಸಲಾಗಿದೆ.

ಅತೀ ಹೆಚ್ಚು ಲಾಭದ ನಿರೀಕ್ಷೆ ಇಟ್ಟುಕೊಳ್ಳದೇ ರೈತರಿಗೆ ಅಧಿಕ ಪ್ರಮಾಣದ ದರ ಸಿಗುವಂತೆ ಮಾಡುವ ಸಲುವಾಗಿ ಪ್ರಥಮ ಬಾರಿಗೆ ಹಾಲು ಉತ್ಪಾದಕರು ನೀಡುವ ಪ್ರತಿ ಮೀಲಿ ಲೀಟರ್‌ ಹಾಲನ್ನು ಗಣನೆಗೆ ತೆಗೆದುಕೊಂಡು ಅದಕ್ಕೆ ದರ ನೀಡುವ ನೂತನ ಪ್ರಯೋಗಕ್ಕೆ ಮುಂದಾಗಿದೆ ಈ ಸಂಘ.

ಆರಂಭದಲ್ಲಿ ಕಿರಿಮಂಜೇಶ್ವರ, ಹೇರೂರು, ಉಳ್ಳುರು, ಕಂಬದ ಕೋಣೆ, ಕೊಡೇರಿ ಪ್ರದೇಶದ ಹೈನು ಗಾರರು ಹಾಲು ಹಾಕುತ್ತಿದ್ದರು ಈಗ ಕೊಡೇರಿ, ಕಂಬದಕೋಣೆ, ಮೇಕೋಡಿನಲ್ಲಿ ಪ್ರತ್ಯೇಕ ಹಾಲು ಡೈರಿ ಸ್ಥಾಪನೆಯಾಗಿದೆ. ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳ ಬೇಕೆನ್ನುವುದು ಸಂಘದ ಮಹದಾಸೆ.

ಸಮಾಜಮುಖೀ ಕಾರ್ಯಕ್ರಮದತ್ತ ಒಲವು
ಪ್ರತಿ ವರ್ಷ ಕೃಷಿ ಅಧ್ಯಯನ ಪ್ರವಾಸ, ಹೈನುಗಾರಿಕೆ ಕುರಿತು ಮಾಹಿತಿ ಶಿಬಿರ, ಶುದ್ಧ ಹಾಲು ನಿರ್ವಹಣೆ ಶಿಬಿರ, ಜಾನುವಾರು ಪ್ರರ್ದಶನ, ಅತೀ ಹೆಚ್ಚು ಹಾಲು ನೀಡುವರಿಗೆ ಸಮ್ಮಾನ, ವಿದ್ಯಾರ್ಥಿ ವೇತನ, ಜಾನುವಾರುಗಳು ಅನಾರೋಗ್ಯಕ್ಕಿಡಾದಾಗ ಸಂಸ್ಥೆ ಮೂಲಕ ಸ್ಪಂದಿಸಲಾಗುತ್ತಿದೆ. ವಾರ್ಷಿಕವಾಗಿ ಹಲವಾರು ಉತ್ತೇಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪ್ರಶಸ್ತಿ
2005-6ನೇ ಸಾಲಿನಲ್ಲಿ ದ.ಕ.ಹಾಲು. ಒಕ್ಕೂಟದ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ಸಂಘ ಪ್ರಶಸ್ತಿ, 2018-19ನೇ ಸಾಲಿನಲ್ಲಿ ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಜಿಲ್ಲಾ ಉತ್ತಮ ಸಂಘ ಪ್ರಶಸ್ತಿ ದೊರಕಿದೆ. ಕೃಷ್ಣ ಬಳಗಾರ್‌ ಹಳಗೇರಿ, ಗೋವಿಂದ ಪೂಜಾರಿ, ವಿಶ್ವನಾಥ ಹವಾಲ್ದಾರ್‌ ಅತೀ ಹೆಚ್ಚು ಹಾಲು ನೀಡುವ ಹೈನುಗಾರರು.

ಅಧ್ಯಕ್ಷರು
ಕೆ.ರಾಮಪ್ಪಯ್ಯ ಕಾರಂತ, ಬಿ.ಪುಂಡರಿಕಾಕ್ಷ ಹೆಬ್ಟಾರ್‌, ವೈ.ಚಂದ್ರಶೇಖರ ಶೆಟ್ಟಿ, ಶೇಷಪ್ಪಯ್ಯ ಮಧ್ಯಸ್ಥ, ಅನಂತಕೃಷ್ಣ ಪಡಿಯಾರ, ಪಣಿಯಪ್ಪಯ್ಯ ಕಾರಂತ, ವೆಂಕಟರಮಣ ಉಡುಪ, ಎನ್‌.ಮಂಜುನಾಥ ಕಾರಂತ, ಪುಂಡರೀಕ ಮಧ್ಯಸ್ಥ. ಪ್ರಸ್ತುತ ಸುಬ್ಬಣ್ಣ ಶೆಟ್ಟಿ.

-  ಕೃಷ್ಣ ಬಿಜೂರು

ಟಾಪ್ ನ್ಯೂಸ್

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.