ಕೊಲ್ಲೂರು ಜಾತ್ರೆಯ ಓಕುಳಿ, ತೆಪ್ಪೋತ್ಸವ ಸಂಪನ್ನ
Team Udayavani, Mar 31, 2019, 6:30 AM IST
ಕೊಲ್ಲೂರು: ನೆರದ ಭಕ್ತರ ಸಮ್ಮುಖದಲ್ಲಿ ಮಾ. 29ರ ರಾತ್ರಿ ಕೊಲ್ಲೂರು ಜಾತ್ರೆಯ ಸಲುವಾಗಿ ಓಕುಳಿ ಹಾಗೂ ತೆಪ್ಪೋತ್ಸವ ಜರಗಿತು.
ದೇಗುಲದ ಕಾರ್ಯನಿರ್ವಹಣಾಧಿ ಕಾರಿ ಎಚ್. ಹಾಲಪ್ಪ ಉಪ ಕಾರ್ಯನಿರ್ವಹಣಾ ಧಿಕಾರಿ ಕೃಷ್ಣಮೂರ್ತಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಸಮಿತಿ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ, ರಮೇಶ ಗಾಣಿಗ ಕೊಲ್ಲೂರು, ನರಸಿಂಹ ಹಳಗೇರಿ, ಅಭಿಲಾಷ, ರಾಜೇಶ ಕಾರಂತ, ಜಯಂತಿ ಪೂಜಾರಿ ಹಾಗೂ ಅಂಬಿಕಾ ದೇವಾಡಿಗ ಉಪಸ್ಥಿತರಿದ್ದರು.
ದೇಗುಲದ ತಂತ್ರಿ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ಗಳು ನಡೆದವು.