“ಹಂಚಿ ತಿನ್ನಿ, ಕೂಡಿ ಇಡಬೇಡಿ’ ಸಂದೇಶ ಸಾರಿದ್ದ ಶ್ರೀಕೃಷ್ಣ
Team Udayavani, Sep 2, 2018, 9:21 AM IST
ಲಿಂಗ ಭೇದ, ಜಾತಿ ಮತ ಭೇದವಿಲ್ಲದೆ ದೇಶಾದ್ಯಂತ ಮನೆಮನೆಗಳಲ್ಲಿ ಆಚರಿಸುವ ಹಬ್ಬ ಕೃಷ್ಣಾಷ್ಟಮಿ. ಹೊಟ್ಟೆ ಪೂರ್ತಿ ತಿನ್ನುವ ಮತ್ತು ಹೊಟ್ಟೆ ಪೂರ್ತಿ ಖಾಲಿ ಇಡುವ ಹಬ್ಬವೂ ಕೃಷ್ಣಾಷ್ಟಮಿ. ಅಂದರೆ ಕೃಷ್ಣಾಷ್ಟಮಿ ದಿನ ಉಪವಾಸ, ಮರುದಿನ ಪೂಜೆ ಮಾಡಿ ಪ್ರಸಾದ ಸ್ವೀಕರಿಸುವ ಹಬ್ಬ. ಇದರ ಅರ್ಥ ಸಾಧನೆಗೂ ಅವಕಾಶವಿದೆ, ಫಲವೂ ಇದೆ.
ಈಗ ಸರಕಾರವೇ ಕೃಷ್ಣಾಷ್ಟಮಿ ಆಚರಿಸಬೇಕೆಂದು ನಿರ್ಧರಿಸಿರುವುದು ಸಂತೋಷ. ಕೃಷ್ಣನ ಬಳಿ ಬಂದ ಯಾರೂ ಬರಿಗೈಯಲ್ಲಿ ಹೋಗಲಿಲ್ಲ. ಗೋವರ್ಧನ ಪರ್ವತದಲ್ಲಿ ಭಾರೀ ಮಳೆ ಬಂದಾಗ ಗೋವಳರು ಕೊಟ್ಟ ಪೂಜೆಯನ್ನು ಸ್ವೀಕರಿಸಿ ಪ್ರಕೃತಿ ವಿಕೋಪವನ್ನು ಸರಿಪಡಿಸಿದ. ಈಗ ನಾವು ಕೊಟ್ಟದ್ದನ್ನು ಸ್ವೀಕಾರ ಮಾಡಿ ಪ್ರಕೃತಿ ವಿಕೋಪ ಸರಿಪಡಿಸಿ ಸಂತ್ರಸ್ತರಿಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸೋಣ.
ಕೃಷ್ಣಾಷ್ಟಮಿಯಲ್ಲಿ ಅರ್ಘ್ಯ ಪ್ರದಾನವೇ ಪ್ರಧಾನ. ಕೃಷ್ಣನ ಆಗಮನವೇ ಜಾತಃ ಕಂಸವಧಾರ್ಥಾಯ. ದುರ್ಯೋಧನ, ಕಂಸಾದಿಗಳು ಯಾವಾಗಲೋ ಸತ್ತು ಹೋಗಿದ್ದಾರೆ. ಆದರೆ ಅಂತಹವರ ದುಷ್ಟ
ಚಿಂತನೆಗಳು ಮಾತ್ರ ನಾಶ ವಾಗಬೇಕು. ಒಳ್ಳೆಯ ಚಿಂತನೆಗಳು ಮೈಗೂಡಬೇಕು. ಲೋಕದಲ್ಲಿ ಕ್ಷೋಭೆ ಇಲ್ಲವಾಗಬೇಕು. ಕಾಲಕಾಲದಲ್ಲಿ ಮಳೆ ಬೆಳೆ ಬಂದು ಸುಭಿಕ್ಷೆ ನೆಲೆಗೊಳ್ಳಬೇಕು. ಇದಕ್ಕೆ ಬೇಕು ಕೃಷ್ಣಾನುಗ್ರಹ. ಆ ದೇವರು ನಮ್ಮಲ್ಲಿಯೂ ಬಂದು ಅನುಗ್ರಹಿಸಬೇಕಾದರೆ ಭಕ್ತಿಯಿಂದ ಮನೆ ಮನೆಗಳಲ್ಲಿ “ಶ್ರೀಕೃಷ್ಣಾಯ ನಮಃ’ ಎಂದು ಪ್ರಾರ್ಥಿಸಿ ಅರ್ಘ್ಯಪ್ರದಾನ ಮಾಡಬೇಕು.
ಕೃಷ್ಣ ಮೊಸರು ಗಡಿಗೆಯನ್ನು ಒಡೆದು ಚೆಲ್ಲಾಟವಾಡಿದ. ಕೃಷ್ಣ ಮೊಸರು ಕುಡಿದದ್ದಲ್ಲ, ಜತೆಗಿದ್ದವರಿಗೆ ಹಂಚಿ ತಿಂದ. “ಹಂಚಿ ತಿನ್ನಿ, ಕೂಡಿ ಇಡಬೇಡಿ’ ಎಂಬ ಸಂದೇಶವನ್ನು ಕೃಷ್ಣ ಜಗತ್ತಿಗೆ ಸಾರಿದ. ಆದ್ದರಿಂದಲೇ ಇಂದಿಗೂ ಅವನ ಸಂದೇಶ ಪ್ರಸ್ತುತ. ರಾಜನೀತಿಜ್ಞರು, ವ್ಯಾಪಾರಿಗಳು, ಅರ್ಚಕರು ಹೀಗೆ ಎಲ್ಲ ಬಗೆಯವರಿಗೆ ಆತ ಆದರ್ಶ ಪ್ರಾಯ. ಕೃಷ್ಣ ಆನಂದದ ದೇವರು, ಎಲ್ಲರಿಗೂ ಆನಂದ ಕೊಡಲಿ, ದುಃಖ ನಿವಾರಣೆಯಾಗಲಿ ಎಂದು ಶ್ರೀಕೃಷ್ಣಾಷ್ಟಮಿಯ ಶುಭ ಸಂದರ್ಭ ಪ್ರಾರ್ಥಿಸುತ್ತೇವೆ.
– ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು,
ಪರ್ಯಾಯ ಶ್ರೀ ಪಲಿಮಾರು ಮಠ,
ಶ್ರೀಕೃಷ್ಣ ಮಠ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ