ವರುಣನ ಕೃಪೆ; ಉಡುಪಿಯಲ್ಲಿ ಕೃಷ್ಣಲೀಲೋತ್ಸವ, ವಿಟ್ಲಪಿಂಡಿ ಸಂಭ್ರಮ ಸಂಪನ್ನ
Team Udayavani, Aug 24, 2019, 5:54 PM IST
ಉಡುಪಿ: ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಹಿನ್ನೆಲೆಯಲ್ಲಿ ಶನಿವಾರ ಗೋಪಾಲಕರಿಂದ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮ, ಹುಲಿವೇಷದ ಸ್ಪರ್ಧೆಯೊಂದಿಗೆ ವಿಟ್ಲಪಿಂಡಿ ಉತ್ಸವ ಅದ್ದೂರಿಯಾಗಿ ನಡೆಯುವ ಮೂಲಕ ಸಂಪನ್ನಗೊಂಡಿದೆ.
ವರುಣನ ಕೃಪೆಯಿಂದಾಗಿ ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದರು. ಶ್ರೀಕೃಷ್ಣ ಮೃಣ್ಮಯಮೂರ್ತಿ ಸಹಿತ ರಥೋತ್ಸವ ನಡೆಯಿತು. ಉತ್ಸವದಲ್ಲಿ ಶ್ರೀಅನಂತೇಶ್ವರ, ಶ್ರೀಚಂದ್ರಮೌಳೇಶ್ವರ ದೇಗುಲಗಳ ಉತ್ಸವ ಮೂರ್ತಿಗಳು ಇದ್ದಿದ್ದವು.
ಇಂದು ಬೆಳಗ್ಗಿನಿಂದಲೇ ನಗರದ ವಿವಿಧೆಡೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅದರಲ್ಲಿ ಮುಂಬಯಿಯ ಅಲಾರೆ ಗೋವಿಂದ ತಂಡದಿಂದ ದಹೀ ಹಂಡಿ ನಡೆಯಿತು.