ಕಾಲ್ತೋಡು-ಹೇರಂಜಾಲುವಿಗೆ ದೊಡ್ಡ ಬಸ್
ಒಂದೇ ದಿನದಲ್ಲಿ ಕೆಎಸ್ಆರ್ಟಿಸಿ ಸ್ಪಂದನೆ
Team Udayavani, Jun 29, 2019, 5:23 AM IST
ಉಪ್ಪುಂದ: ಕಾಲ್ತೋಡು, ಬೊಳ್ಳಂಬಳಿ, ಹೆರಂಜಾಲುವಿನಿಂದ ಖಂಬದಕೋಣೆ ಮಾರ್ಗವಾಗಿ ಕುಂದಾಪುರಕ್ಕೆ ತೆರಳುವ ಮಿನಿ ಬಸ್ ಬದಲಾಗಿ ದೊಡ್ಡ ಬಸ್ ಬಿಡುವ ಮೂಲಕ ಇಲ್ಲಿನ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗೆ ಇಲಾಖೆ ಸ್ಪಂದಿಸಿದೆ.
ಬೊಳ್ಳಂಬಳ್ಳಿಯಿಂದ ಬರುವ ಬಸ್ ಕಾಲ್ತೋಡು, ಹೆರಂಜಾಲು ಮೂಲಕ ಬಂದು ಖಂಬಕೋಣೆಯಿಂದ ಸಂಚರಿಸುವ ಬಸ್ನಲ್ಲಿ ನಿತ್ಯ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳಿಂದ ತುಂಬಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತಿತ್ತು.
ಉದಯವಾಣಿ ವರದಿ
ವಿದ್ಯಾರ್ಥಿಗಳು ಬಸ್ನಲ್ಲಿ ನೇತಾಡಿಕೊಂಡೇ ತೆರಳುವ ಪರಿಸ್ಥಿತಿಯ ಕುರಿತು ಕುರಿತು ಉದಯವಾಣಿಯು ಜೂ. 28ರಂದು ಜನಪರ ಕಾಳಜಿಯಲ್ಲಿ ವರದಿ ಪ್ರಕಟಿಸುವ ಮೂಲಕ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಇಲಾಖೆಗಳ ಅಧಿಕಾರಿಗಳ ಗಮನ ಸೆಳೆದಿತ್ತು. ವರದಿಗೆ ಸ್ಪಂದಿರುವ ಸಾರಿಗೆ ಇಲಾಖೆಯು ಈ ಭಾಗಕ್ಕೆ ದೊಡ್ಡ ಬಸ್ ಸಂಚರಿಸುವಂತೆ ಮಾಡಿದೆ.
ಸರಕಾರದಿಂದ ದೊಡ್ಡ ಬಸ್ ಸಂಚರಿಸುವಂತೆ ಮಾಡಿರುವುದಿಂದ ಈ ಭಾಗ ಪ್ರತಿದಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಗೂ ನಿತ್ಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ