ಕುಕ್ಕುಜೆ: ಅಭಿವೃದ್ಧಿಗೊಳ್ಳದ ಖಾರಕಟ್ಟೆ-ಪಡುಬೈಂತ್ಲ ರಸ್ತೆ
Team Udayavani, Oct 24, 2019, 5:31 AM IST
ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಜೆ ಗ್ರಾಮದ ಕಾರಕಟ್ಟೆ ಪಡುಬೈಂತ್ಲ ರಸ್ತೆ ಅಭಿವೃದ್ಧಿಗೊಳ್ಳದೆ ಸ್ಥಳೀಯರಿಗೆ ಸಂಚಾರಕ್ಕೆ ಸಂಕಷ್ಟ ಉಂಟಾಗಿದೆ.
ಸುಮಾರು 35 ವರ್ಷಗಳ ಹಿಂದೆ ಪಂಚಾಯತ್ ರಸ್ತೆಯಾಗಿ ನಿರ್ಮಾಣ ಗೊಂಡ ಈ ರಸ್ತೆ ಅನಂತರದ ದಿನಗಳಲ್ಲಿ ಅಭಿವೃದ್ಧಿ ಕಂಡಿಲ್ಲ. ಮಣ್ಣಿನ
ರಸ್ತೆಯಾಗಿರುವುದರಿಂದ ಮಳೆಗಾಲ ದಲ್ಲಿ ರಸ್ತೆಯುದ್ದಕ್ಕೂ ಹೊಂಡ ಗುಂಡಿ
ನಿರ್ಮಾಣವಾಗಿ ನೀರು ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ.
ಕಳೆದ 15-20 ವರ್ಷಗಳಿಂದ ರಸ್ತೆ
ಡಾಮರು ಮಾಡುವಂತೆ ಸ್ಥಳೀಯರು ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಾ
ಬಂದಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಸುಮಾರು 4 ಕಿ.ಮೀ.ನಷ್ಟು ಉದ್ದವಿರುವ ಈ ರಸ್ತೆ ಮುಖಾಂತರ ಖಾರಕಟ್ಟೆ, ದೆಮ್ಮಾರು, ಪಡುಬೈಂತ್ಲ ಭಾಗದ ಜನತೆ ಪ್ರತಿದಿನ ಸಂಚರಿಸಬೇಕಾಗಿದೆ. ಈ ಭಾಗದ ವಿದ್ಯಾರ್ಥಿಗಳು ಕುಕ್ಕುಜೆ ಶಾಲೆಗೆ ತೆರಳಬೇಕಾಗಿದ್ದು ರಸ್ತೆ ಅವ್ಯವಸ್ಥೆಯಿಂದಾಗಿ ಸಂಕಟ ಪಡುವಂತಾಗಿದೆ.
ಕಳೆದ ಕೆಲ ವರ್ಷಗಳಿಂದ ರಸ್ತೆ ನಿರ್ವಹಣೆ ನಡೆಯದೇ ಇರುವುದರಿಂದ ಸಂಚಾರ ಅಸಾಧ್ಯವಾಗಿದೆ. ಕೆಲ ಸ್ಥಳೀಯರು ಬೃಹತ್ ಹೊಂಡಗಳಿಗೆ ಹೊಗೆ ಕಲ್ಲನ್ನು ತುಂಬಿಸಿ ಸ್ವಲ್ಪಮಟ್ಟಿಗೆ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಿದ್ದಾರೆ.
ಅಂದಾಜು ಪಟ್ಟಿ ಸಲ್ಲಿಕೆ
ಪಡುಬೈಂತ್ಲ ರಸ್ತೆಗೆ ಈಗಾಗಲೇ ಅನುದಾನ ಮಂಜೂರುಗೊಂಡು ಸರ್ವೆಕಾರ್ಯ ಮುಗಿದಿದ್ದು ಅಂದಾಜು ಪಟ್ಟಿ ಸಲ್ಲಿಸಲಾಗಿದೆ.
-ಮಧು ಕುಮಾರ್ , ಎಂಜಿನಿಯರ್, ಪಂಚಾಯತ್ರಾಜ್ ಕಾರ್ಕಳ
ಶೀಘ್ರ ಕಾಮಗಾರಿ
ಖಾರಕಟ್ಟೆ ಪಡುಬೈಂತ್ಲ ರಸ್ತೆಗೆ ಶಾಸಕ ಸುನಿಲ್ ಕುಮಾರ್ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಅನಂತರ ಶೀಘ್ರ ಕಾಮಗಾರಿ ನಡೆಸಲಾಗುವುದು.
-ಅರುಣ್ ಕುಮಾರ್ ಹೆಗ್ಡೆ,, ಅಧ್ಯಕ್ಷರು, ಗ್ರಾಮ ಪಂಚಾಯತ್ ಕಡ್ತಲ
ಜನಪ್ರತಿನಿಧಿಗೆ ಮನವಿ ಮಾಡಲಾಗಿದೆ
ಕಳೆದ 20 ವರ್ಷಗಳಿಂದ ರಸ್ತೆ ದುಃಸ್ಥಿತಿ ಬಗ್ಗೆ ಶಾಸಕರಿಗೆ, ಇತರ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿ ಅಭಿವೃದ್ಧಿಗೊಳಿಸುವಂತೆ ಮನವಿ ಮಾಡಿದ್ದರೂ ರಸ್ತೆ ಅಭಿವೃದ್ಧಿ ಕಂಡಿಲ್ಲ
-ಸುಭಾಶ್ಚಂದ್ರ ಪೂಜಾರಿ, ಕುಕ್ಕುಜೆ ದೊಂಡೇರಂಗಡಿ, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್