ಕುಂದಾಪುರ: ನಗರದಲ್ಲಿ ತಲೆ ಎತ್ತಿವೆ ಅಕ್ರಮ ಕಟ್ಟಡಗಳು

ಸರಕಾರಿ ಕಟ್ಟಡವೂ ಅಕ್ರಮ! ;ಕೆಡಹುವ ನೋಟಿಸ್‌ ನೀಡಿದ ಪುರಸಭೆ ;ಅನಿರ್ಬಂಧಿತವಾಗಿ ನಿರ್ಮಾಣ ಮುಂದುವರಿಕ

Team Udayavani, Nov 14, 2019, 5:21 AM IST

1211KDLM4PH

ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ನಗರದ ವಿವಿಧೆಡೆ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ. ಈ ಕುರಿತು ಈಗಾಗಲೇ ಪುರಸಭೆಯಲ್ಲಿ ಗೆದ್ದು ಅಧಿಕಾರ ದೊರೆಯದಿದ್ದರೂ ಸದಸ್ಯರು ಆಕ್ಷೇಪ ಎತ್ತಿದ್ದಾರೆ. ಲಿಖೀತವಾಗಿ ದೂರು ಕೊಟ್ಟಿದ್ದಾರೆ. ಪುರಸಭೆ ಎಚ್ಚರಿಕೆ ನೀಡಿದೆ. ಪ್ರಯೋಜನ ಮಾತ್ರ ಆಗಿಲ್ಲ.

ಅಕ್ರಮ
ಪುರಸಭೆ ವ್ಯಾಪ್ತಿಯ ವಿವಿಧೆಡೆ ಖಾಸಗಿಯವರು ಭಾರೀ ಗಾತ್ರದ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಇವುಗಳಿಗೆ ಪುರಸಭೆಯಿಂದ ಅನುಮತಿಪತ್ರವನ್ನೇ ಪಡೆದಿಲ್ಲ. ನಿರಾಕ್ಷೇಪಣಾ ಪತ್ರಗಳಿಲ್ಲ. ರಸ್ತೆಯಿಂದ ಬಿಡಬೇಕಾದಷ್ಟು ದೂರವನ್ನೂ ಬಿಟ್ಟಿಲ್ಲ. ಪಾರ್ಕಿಂಗ್‌ ಜಾಗವೂ ಇಲ್ಲ. ವಾಣಿಜ್ಯ ಉದ್ದೇಶದಿಂದ ನಿರ್ಮಿಸಲ್ಪಡುತ್ತಿರುವ ಈ ಕಟ್ಟಡಗಳು ಪುರಸಭೆ ವ್ಯಾಪ್ತಿಯಲ್ಲಿ ಪಾಲಿಸಬೇಕಾದ ನಿಯಮಗಳನ್ನೆಲ್ಲ ಗಾಳಿಗೆ ತೂರಿವೆ. ಇದರಿಂದಾಗಿ ರಾಜಾರೋಷವಾಗಿ ಕಟ್ಟಲಾಗುತ್ತಿರುವ ಈ ಕಟ್ಟಡದ ಕುರಿತು ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ.

ದೂರು
ಪೇಟೆ ವೆಂಕಟರಮಣ ದೇಗುಲದ ಬಳಿ ಪರ ವಾನಗಿ ರಹಿತವಾಗಿ ಕಟ್ಟಡವೊಂದು ನಿರ್ಮಾಣ ವಾಗುತ್ತಿದೆ ಎಂದು ಪುರಸಭೆ ಸದಸ್ಯರೊಬ್ಬರು ಪುರ ಸಭೆಗೆ ಲಿಖೀತ ದೂರು ನೀಡಿದ್ದಾರೆ. ಅಂತೆಯೇ ಕೋಡಿ ಎಂಬಲ್ಲಿಯೂ ಸರಕಾರಿ ಇಲಾಖೆಗಳ ಅನು ಮತಿಯಿಲ್ಲದೇ ಫಿಶ್‌ ಕಟ್ಟಿಂಗ್‌ ಕಟ್ಟಡ ವೊಂದನ್ನು ನಿರ್ಮಿಸಲಾಗುತ್ತಿದೆ. ಇದರ ಜತೆಗೆ ರಾಮ ಮಂದಿರ ರಸ್ತೆಯಲ್ಲೂ ಕಟ್ಟಡವೊಂದನ್ನು ಸೂಕ್ತ ಪರವಾನಗಿ ಇಲ್ಲದೇ ನಿರ್ಮಾಣ ಮಾಡಲಾಗುತ್ತಿದೆ.

ಸರಕಾರಿ ಕಟ್ಟಡವೇ ಅಕ್ರಮ
ಅವಿಭಜಿತ ಕುಂದಾಪುರ ತಾಲೂಕಿನಲ್ಲಿ 6,800 ಮಂದಿ ವಿಶೇಷಚೇತನರಿದ್ದಾರೆ. ಇವರಿಗಾಗಿ ತಾಲೂಕು ಪಂಚಾಯತ್‌ ಬಳಿ ನಿರ್ಮಾಣವಾದ 8 ಲಕ್ಷ ರೂ. ವೆಚ್ಚದ ವಿಶೇಷಚೇತನ ಭವನ ಕಟ್ಟಡವೇ ಅಕ್ರಮ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಿದ್ದು ನೋಟಿಸ್‌ಮಾಡಲಾಗಿದೆ. ಗ್ರಾ.ಪಂ. ಮಟ್ಟದ ಕಾರ್ಯಕರ್ತರ ಜತೆ ಸಮಾಲೋಚನೆ, ಸಭೆ ನಡೆಸಲು, ಮಾಹಿತಿ ನೀಡಲು, ಕಾರ್ಯಾಗಾರ ಏರ್ಪಡಿಸಲು ಅಗತ್ಯ ವಿರುವ ಭವನವೇ ವಿಶೇಷಚೇತನ ಭವನ. ಇಲ್ಲಿ ವಿಶೇಷಚೇತನ ಮಕ್ಕಳ ಶೈಕ್ಷಣಿಕ ತರಬೇತಿಗೂ ವ್ಯವಸ್ಥೆ ಮಾಡಬಹುದಾಗಿದೆ. ಉಡುಪಿ ಹಾಗೂ ಕಾರ್ಕಳದಲ್ಲಿ ಇಂತಹ ಭವನಗಳಿದ್ದು ಕುಂದಾಪುರದಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಕಾಯುತ್ತಿದೆ. ಸದ್ಯ ಕುಂದಾಪುರದಲ್ಲಿ ತಾಲೂಕು ಮಟ್ಟದ ಸಿಬಂದಿಗೆ ತಾ.ಪಂ. ನಲ್ಲಿಯೇ ಕುರ್ಚಿ, ಟೇಬಲ್‌ ನೀಡಲಾಗಿದ್ದು ಹಿಂದಿನ ಉಪಾಧ್ಯಕ್ಷರು ತಮ್ಮ ಕೊಠಡಿಯಲ್ಲಿಯೇ ಮಾಸಿಕ ಸಭೆ ನಡೆಸಲು ಅನುವು ಮಾಡಿಕೊಟ್ಟಿದ್ದರು. ರಸ್ತೆ ಮಾರ್ಜಿನ್‌ ಸೇರಿದಂತೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಪುರಸಭೆ ಈ ಕಟ್ಟಡ ನಿರ್ಮಾಣ ಮಾಡದಂತೆ ರಚನೆ ಸಂದರ್ಭವೇ ನೋಟಿಸ್‌ಮಾಡಿತ್ತು. ಆದರೆ ನೋಟಿಸ್‌ಇದ್ದರೂ ಕಟ್ಟಡದ ಕಾಮಗಾರಿ ಪೂರ್ಣಮಾಡಲಾಗಿದೆ. ಉದ್ಘಾಟನೆಯಷ್ಟೇ ಬಾಕಿಯಿದೆ.

ಡೆಮಾಲಿಶ್‌ ನೋಟಿಸ್‌
ಅಕ್ರಮವಾಗಿ ನಿರ್ಮಾಣವಾಗುತ್ತಿದೆ ಎಂದು ಕೋಡಿ ಫಿಶ್‌ ಕಟ್ಟಿಂಗ್‌ ಘಟಕ, ವೆಂಕಟರಮಣ ದೇವಾಲಯ ಬಳಿಯ ಕಟ್ಟಡ ಹಾಗೂ ರಾಮಮಂದಿರ ಬಳಿಯ ಅಕ್ರಮ ಕಟ್ಟಡವನ್ನು ಕೆಡಹುವುದಾಗಿ ಪುರಸಭೆ ನೋಟಿಸ್‌ಮಾಡಿದೆ. ಈ ಪೈಕಿ ಒಂದು ಕಟ್ಟಡದವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಪುರಸಭೆ ಆದೇಶವನ್ನು ಪುನರ್‌ಪರಿಶೀಲಿಸಲು ವಿನಂತಿಸಿದ್ದಾರೆ. ಆದರೆ ಜಿಲ್ಲಾಧಿಕಾರಿ ಕಚೇರಿಯಿಂದ ಯಾವುದೇ ಸೂಚನೆಗಳು ಬಂದಿಲ್ಲ. ಕೋಡಿ ಫಿಶ್‌ ಕಟ್ಟಿಂಗ್‌ ಕಟ್ಟಡದವರು ನ್ಯಾಯಾಲಯದ ಮೊರೆ ಹೋಗದಂತೆ ಈಗಾಗಲೇ ಪುರಸಭೆ ನ್ಯಾಯಾಲಯಕ್ಕೆ ಮುಂಜಾಗ್ರತಾ ಅರ್ಜಿ ಸಲ್ಲಿಸಿದೆ.

ಕೆಡವಲು ನೋಟಿಸ್‌
ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಮೂರು ಕಟ್ಟಡಗಳನ್ನು ಕೆಡಹುವ ಕುರಿತು ಈಗಾಗಲೇ ಕಟ್ಟಡದ ಮಾಲಕರಿಗೆ ಕಾನೂನು ರೀತಿಯ ನೋಟಿಸ್‌ನಿàಡಲಾಗಿದೆ. ಒಬ್ಬರು ಡಿಸಿಯವರಿಗೆ ಮನವಿ ಸಲ್ಲಿಸಿದ್ದು ಅಲ್ಲಿಂದ ಯಾವುದೇ ಮರುತ್ತರ ಬಂದಿಲ್ಲ. ಇನ್ನೊಂದು ಕಟ್ಟಡದವರು ನ್ಯಾಯಾಲಯಕ್ಕೆ ಹೋಗದಂತೆ ಕೇವಿಯಟ್‌ ಸಲ್ಲಿಸಲಾಗಿದೆ. ಸರಕಾರಿ ಕಟ್ಟಡಕ್ಕೂ ನೋಟಿಸ್‌ ನೀಡಲಾಗಿದೆ.
-ಗೋಪಾಲಕೃಷ್ಣ ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ

-ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.