ಕುಂದಾಪುರ: ಮರಳು ಅಡ್ಡೆಗಳ ತೆರವು: ದೋಣಿ, ಮರಳು ಮುಟ್ಟುಗೋಲು
Team Udayavani, Apr 8, 2017, 8:34 AM IST
ಕುಂದಾಪುರ: ಕಂದ್ಲೂರಿನಲ್ಲಿ ರವಿವಾರ ನಡೆದ ಘಟನೆ ಅನಂತರ ಮರಳು ಮಾಫಿಯಾದ ವಿರುದ್ಧ ಜಿಲ್ಲಾಡಳಿತ ದಿಟ್ಟ ಕಾರ್ಯಾಚರಣೆಗೆ ಮುಂದಾಗಿದೆ. ಆರಂಭಿಕವಾಗಿ ಅಕ್ರಮವಾಗಿ ನಡೆಸುತ್ತಿದ್ದರೆನ್ನಲಾದ ತಾಲೂಕಿನ ಮರಳುಗಾರಿಕೆ ಅಡ್ಡೆಗಳ ತೆರವು, ಅಕ್ರಮ ಮರಳು ದಾಸ್ತಾನು ಮುಟ್ಟುಗೋಲು ಹಾಗೂ ಧಕ್ಕೆಗಳಲ್ಲಿ ನಿಲ್ಲಿಸಲಾಗಿದ್ದ ದೋಣಿಗಳನ್ನು ಕೊಂಡೊಯ್ಯವ ಕಾರ್ಯಾಚರಣೆಯನ್ನು ಕಂದಾಯ, ಗಣಿ ಇಲಾಖೆ, ಪೊಲೀಸ್ ಇಲಾಖೆ
ಯವರು ಜಂಟಿಯಾಗಿ ಶುಕ್ರವಾರ ನಡೆಸಿದರು. ಶುಕ್ರವಾರ ಮುಂಜಾನೆಯಿಂದ ಕಂದ್ಲೂರು, ಹಳ್ನಾಡು ಮರಳುಗಾರಿಕಾ ದಕ್ಕೆಗಳಲ್ಲಿ ಲಂಗರು ಹಾಕಲಾಗಿದ್ದ ದೋಣಿಗಳನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಸಾಗಿಸಲಾಯಿತು. ಅಲ್ಲದೇ ದಕ್ಕೆಗಳಲ್ಲಿ ರಾಶಿ ಹಾಕಿದ ಮರಳನ್ನು ಬಳ್ಕೂರು ಪಿಡಬ್ಲ್ಯುಡಿ ಯಾರ್ಡ್ಗೆ ಸಾಗಿಸಲಾಯಿತು.
ಅಕ್ರಮ ಮರಳು ದಾಸ್ತಾನು ಮುಟ್ಟುಗೋಲು ತಲ್ಲೂರು ಪಾರ್ತಿಕಟ್ಟೆ ಬಳಿ ದಾಸ್ತಾನು ಇಟ್ಟಿರುವ ಮರಳನ್ನು ಕುಂದಾಪುರ ಪುರಸಭೆಯ ಮರಳು ಯಾರ್ಡ್ಗೆ ಸಾಗಿಸಲಾಯಿತು. ಅಲ್ಲದೇ ಮಾಹಿತಿ ಬಂದಿರುವ ಮರಳು ದಾಸ್ತಾನನ್ನು ಮುಟ್ಟುಗೋಲು ಹಾಕಿ ಸುಮಾರು 28 ಲೋಡು ಮರಳನ್ನು ಯಾರ್ಡ್ಗಳಿಗೆ ಹಾಕುವ ಕಾರ್ಯಾಚರಣೆ ನಡೆಸಧಿಲಾಗುತ್ತಿದೆ. ಕಂಡೂÉರಿನ ದಕ್ಕೆಯಲ್ಲಿರುವ ಸುಮಾರು ಒಂಬತ್ತು¤ ದೋಣಿಗಳನ್ನು ಕಂದ್ಲೂರು ಪೊಲೀಸ್ ಠಾಣೆಗೆ ಸಾಗಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಕುಂದಾಪುರ ತಹಶೀಲ್ದಾರ್ ಜಿ.ಎಂ. ಬೋರ್ಕರ್, ಗಣಿ ಇಲಾಖೆಯ ಗಣಿ ವಿಜ್ಞಾನಿ ಡಾ| ಮಹದೇಶ್ವರ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಐವರ ಗಡಿಪಾರಿಗೆ ಶಿಫಾರಸು
ಉಡುಪಿ: ಹೊರರಾಜ್ಯದಿಂದ ಬಂದು ಕರಾವಳಿಯಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಕೆಯಲ್ಲಿ ನಿರತರಾಗಿರುವ ಆರೋಪ ಎದುರಿಸುತ್ತಿರುವ ಉತ್ತರ ಪ್ರದೇಶದ ನವಾಬ್ಗಂಜ್ ಮೂಲದ ಐವರನ್ನು ಗಡಿಪಾರು ಮಾಡುವಂತೆ ಪೊಲೀಸರು ಜಿಲ್ಲಾ ದಂಡಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ. ಉತ್ತರಪ್ರದೇಶದ ಕಾರ್ಮಿಕರಾದ ರೋಹಿತ್ (25), ಬಲರಾಮ್ (40), ರಾಮ್ಭವನ್ (24), ಲಲಿತ್ರಾಮ (25), ಮಾಸ್ತರ್ (21) ಅವರನ್ನು ಗಡಿಪಾರು ಮಾಡುವಂತೆ ಶಿಫಾರಸು ಮಾಡಲಾಗಿದೆ.
ಮುಂಜಾನೆಯಿಂದ ಗಣಿ ಇಲಾಖೆಯವರು, ಕಂದಾಯ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯವರು ಸಂಘಟಿತರಾಗಿ ಕಂದ್ಲೂರು ಹಾಗೂ ಇತರ ಕಡೆ ಅಕ್ರಮ ಮರಳುಧಿಗಾರಿಕೆ ಅಡ್ಡೆಗಳಲ್ಲಿರುವ ಸುಮಾರು 8ರಿಂದ 10 ದೋಣಿ ಹಾಗೂ ಮರಳನ್ನು ಮುಟ್ಟುಗೋಲು ಹಾಕಿದ್ದಾರೆ. ತಲ್ಲೂರು ಬಳಿ ಪಾರ್ತಿಕಟ್ಟೆಯಲ್ಲಿ ಅಕ್ರಮವಾಗಿ ದಾಸ್ತಾನಾಗಿಟ್ಟ 28 ಲೋಡು ಮರಳನ್ನು ಕುಂದಾಪುರ ಪುರಸಭೆಯ ಮರಳು ಯಾರ್ಡಗೆ ಕಳುಹಿಸಿದ್ದಾರೆ. ಕಾರ್ಯಾಚರಣೆೆ ಸಂಜೆ ವರೆಗೆ ಮುಂದುವರಿಯಿತು.
ಜಿ.ಎಂ. ಬೋರ್ಕರ್, ತಹಶೀಲ್ದಾರ್, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ