ಕುಂದಾಪುರ : ತಮ್ಮನಿಂದಲೇ ಅಕ್ಕನ ಕೊಲೆ
Team Udayavani, Jul 29, 2018, 9:36 AM IST
ಕುಂದಾಪುರ: ಹಣಕ್ಕಾಗಿ ಪೀಡಿಸಿದ ತಮ್ಮನು ಅಕ್ಕನನ್ನು ಕತ್ತಿಯಿಂದ ಕಡಿದು ಕೊಲೆಗೈದ ಘಟನೆ ಕುಂದಾಪುರದಲ್ಲಿ ಸಂಭವಿಸಿದೆ.
ಕುಂದೇಶ್ವರ ದೇವಸ್ಥಾನದ ಹಿಂಭಾಗದ ವಡೇರಹೋಬಳಿ ಗ್ರಾಮದ ಹಂದೇರ ಕೇರಿಯ ದಿ| ಶೀನ ಭಂಡಾರಿ ಅವರ ಪುತ್ರಿ ವಿಜಯಾ ಭಂಡಾರಿ (50) ಕೊಲೆಗೀಡಾದವರು. ಅಣ್ಣಪ್ಪ ಭಂಡಾರಿ (45) ಆರೋಪಿ.
ಅಣ್ಣಪ್ಪ ಭಂಡಾರಿ ಸಂಗಮ್ ಬಳಿ ಸೆಲೂನ್ ಹೊಂದಿದ್ದರೂ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಖರ್ಚಿಗಾಗಿ ಹಣ ನೀಡುವಂತೆ ಹಾಗೂ ತನ್ನ ಮನೆ ಕೆಲಸವನ್ನು ಮಾಡಿಕೊಡುವಂತೆ ಅಕ್ಕನನ್ನು ಪೀಡಿಸುತ್ತಿದ್ದರು. ವಿಜಯಾ ಭಂಡಾರಿ ಅವಿವಾಹಿತೆಯಾಗಿದ್ದು, ಅಕ್ಕ ಮತ್ತು ತಮ್ಮ ಒಂದೇ ವಠಾರದಲ್ಲಿ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದರು.
ಜು.22ರ ರಾತ್ರಿ ಆರೋಪಿಯು ಅಕ್ಕನ ಮನೆಗೆ ಬಂದು ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿ ಸಿದ್ದ.
ಚಿಂತಾಜನಕ ಸ್ಥಿತಿಯಲ್ಲಿದ್ದ ವಿಜಯಾ ಭಂಡಾರಿ ಮಣಿಪಾಲ ಆಸ್ಪತ್ರೆಯಲ್ಲಿ ಜು. 28ರಂದು ಸಾವನ್ನಪ್ಪಿದ್ದಾರೆ. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ. ಕುಂದಾಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು