ಕುಂದಾಪುರ: ಮರಗಳು ಉರುಳಿ ಹಲವು ಮನೆಗಳಿಗೆ ಹಾನಿ
Team Udayavani, May 23, 2018, 12:34 PM IST
ಕುಂದಾಪುರ: ತಾಲೂಕಿನಾದ್ಯಂತ ಮಂಗಳವಾರ ಬೆಳಗ್ಗಿನ ಜಾವ ಉತ್ತಮ ಮಳೆಯಾಗಿದ್ದು, ಭಾರೀ ಗಾಳಿ-ಸಿಡಿಲಿಗೆ ಹಲವೆಡೆ ಮನೆಗಳ ಮೇಲೆ ಮರ ಬಿದ್ದು, ಅಪಾರ ಹಾನಿಯಾಗಿದೆ. ರಸ್ತೆಯ ಮೇಲೆ ಮರಗಳು ಉರುಳಿ ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಕೋಡಿಯ ಸೋನ್ಸ್ ಶಾಲೆಯ ಹತ್ತಿರ ಶ್ಯಾಮ ಅವರ ಮನೆಗೆ ತೆಂಗಿನ ಮರ ಬಿದ್ದು, ಸುಮಾರು 50,000 ರೂ. ನಷ್ಟ ಸಂಭವಿಸಿದೆ. ಜಡ್ಕಲ್ ಗ್ರಾಮದ ಸೆಳ್ಕೊàಡಿನ ಗೋಳಿಗುಡ್ಡಿ ಸರ್ವೇಶ್ರೀ ಪೂಜಾರ್ತಿ ಅವರ ಹೊಸ ಮನೆಯ ಮೇಲೆ ಮರ ಬಿದ್ದು, ಭಾಗಶಃ ಹಾನಿಯಾಗಿದೆ.
ಯಡಾಡಿ-ಮತ್ಯಾಡಿ, ಮೊಳಹಳ್ಳಿ, ಗೋಪಾಡಿ, ಬೀಜಾಡಿಯಲ್ಲಿ ಹಲವು ಮನೆಗಳ ಮೇಲೆ ಮರ ಬಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಮೀಟರ್ ಬೋರ್ಡ್ಗೆ ಹಾನಿ
ಜನ್ನಾಡಿಯ ವಿಷ್ಣುಮೂರ್ತಿ ಅಡಿಗ ಅವರ ಮನೆಯ ವಿದ್ಯುತ್ ಮೀಟರ್ ಬೋರ್ಡಿಗೆ ಸಿಡಿಲು ಬಡಿದು ಸಾವಿರಾರು ರೂ. ನಷ್ಟ ಉಂಟಾಗಿದೆ. ಬಿದ್ಕಲ್ಕಟ್ಟೆ ಹಾಗೂ ಬೆಳ್ಳಾಲದಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಅಂಪಾರಿನ ಮೂರುಕೈ ಹಿ.ಪ್ರಾ. ಶಾಲೆ ಬಳಿ ಹಾಗೂ ಗುಡಿಬೆಟ್ಟುವಿನಲ್ಲಿ ಅನೇಕ ಮರಗಳು, ಮೊಳಹಳ್ಳಿ ಭಾಗದಲ್ಲಿ ಅಡಿಕೆ ಮರಗಳು ಉರುಳಿವೆ. ಶೇಡಿಮನೆ, ಮರೂರಿನಲ್ಲಿ ಮರ ಬಿದ್ದಿದ್ದು, ಮರೂರಿನಲ್ಲಿ ಬಾಬು ನಾಯ್ಕ ಮನೆಗೆ ಮರ ಬಿದ್ದು ಸುಮಾರು 35 ಸಾವಿರ ರೂ. ಹಾನಿ, ಬಾಂಡ್ಯದಲ್ಲಿ ಮನೆಗೆ ಸಿಡಿಲು ಬಡಿದು, ಕ್ರೋಢಬೈಲೂರಿನಲ್ಲಿ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ಹಲವೆಡೆ ಮರಗಳು ಬಿದ್ದು, ವಿದ್ಯುತ್ ಕಂಬಗಳು ಉರುಳಿ ಬಿದ್ದ ಪರಿಣಾಮ ತಾಲೂಕಿನ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಕುಂದಾಪುರ, ತೆಕ್ಕಟ್ಟೆ ಮೊದಲಾದ ಪ್ರದೇಶಗಳಲ್ಲಿ ಮಂಗಳವಾರ ದಿನವಿಡೀ ಇಂಟರ್ನೆಟ್ ಸಂಪರ್ಕ ಕೈಕೊಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ