ಕುಂದಾಪುರ: ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಸ್ವಾಗತ
Team Udayavani, Aug 7, 2017, 7:40 AM IST
ಕುಂದಾಪುರ: ಕುಂದಾಪುರ ವಲಯದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅಶೋಕ ಕಾಮತ್ ಅವರನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಂದಾಪುರ ವಲಯದ ವತಿಯಿಂದ ಸ್ವಾಗತಿಸಿ, ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ಸದಾರಾಮ ಶೆಟ್ಟಿ ಮಲ್ಯಾಡಿ, ಗೌರವಾಧ್ಯಕ್ಷ ವೇಣುಗೋಪಾಲ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನಾಗರಾಜ ಶೆಟ್ಟಿ, ಕೋಶಾಧಿ ಕಾರಿ ಶೇಖರ ಯು., ಸಂಘಟನಾ ಕಾರ್ಯದರ್ಶಿ ದಯಾನಂದ ಶೆಟ್ಟಿ, ಉಪಾಧ್ಯಕ್ಷೆ ವತ್ಸಲ ರಾವ್, ಸದಸ್ಯರಾದ ಸೂರ್ಯಕಾಂತಿ, ದುರ್ಗಿ ಪಟಗಾರ್, ಪ್ರಭಾಕರ ಶೆಟ್ಟಿ, ಸೀತಾರಾಮ ಶೆಟ್ಟಿ, ಸದಾನಂದ ಶೆಟ್ಟಿ, ಅರುಂಧತಿ ರಾವ್, ಜ್ಯೋತಿ ಶೆಟ್ಟಿ, ವಿಜಯ ಕುಮಾರ್ ಹೆಗ್ಡೆ, ಬಾಲಕೃಷ್ಣ ಶೆಟ್ಟಿ, ಸುಧಾಕರ ಶೆಟ್ಟಿ, ನಾರಾಯಣ ನಾಯಕ್, ಸುಮನ್ ಎಂ.ಉಷಾ ದಿನಕರ, ಸುಭಾಸcಂದ್ರ ಶೆಟ್ಟಿ, ಶಂಕರ ಶೆಟ್ಟಿ, ಟಿ.ಸಿ.ಬಿ. ನಿರ್ದೇಶಕ ಸಂತೋಷ ಕುಮಾರ್ ಶೆಟ್ಟಿ, ಜಿಲ್ಲಾ ಪ್ರತಿನಿಧಿ ಐವನ್ ಸಂತೋಷ್ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಮಲ್ಯಾಡಿ ಸದಾರಾಮ ಶೆಟ್ಟಿ ಅವರು ಶಿಕ್ಷಕರ ವೇತನವು ಪ್ರತಿ ತಿಂಗಳು 5ನೇ ತಾರೀಕಿನೊಳಗೆ ಬ್ಯಾಂಕ್ ಖಾತೆಗೆ ಜಮಾ ಆಗುವಂತೆ ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ನೂತನ ಕ್ಷೇತ್ರ ಶಿಕ್ಷಣಾ ಧಿಕಾರಿಗಳು ಕುಂದಾಪುರ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸುತ್ತಾ ಸಂಘದ ಚಟುವಟಿಕೆಯು ಶೆ„ಕ್ಷಣಿಕ ವ್ಯವಸ್ಥೆಯೊಂದಿಗೆ ಸಮ್ಮಿಲಿತವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಲ್ಲಿ ಪ್ರೋತ್ಸಾಹದಾಯಕವಾಗಿ ಇರಬೇಕೆಂದು ಆಶಯ ವ್ಯಕ್ತಪಡಿಸಿದರು.