“ಏಕ್ ಮಿನಿಟ್ ಕಾ’ ಪೊಲೀಸ್ ಆದ ಕುಂದಾಪುರ ಎಸಿ ಪುತ್ರ
Team Udayavani, Jan 26, 2020, 9:29 PM IST
ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ರವಿವಾರ ನಡೆದ ಗಣರಾಜ್ಯೋತ್ಸವ ಆಚರಣೆ ವೇಳೆ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ರಾಜು ಕೆ. ಅವರ ಪುತ್ರ 8ರ ಹರೆಯದ ಶ್ರೀ ಹರ್ಷ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಅವರ ಪೊಲೀಸ್ ಕ್ಯಾಪ್ ತೊಟ್ಟು, ಕೈಯಲ್ಲಿ ಲಾಠಿ (ದಂಡ) ಹಿಡಿದು ಛೋಟಾ ಪೊಲೀಸ್ ಆಗಿ ಸಂಭ್ರಮಿಸಿದರು.
ತನ್ನ ತಂದೆಯೊಂದಿಗೆ ಬಂದಿದ್ದ ಶ್ರೀ ಹರ್ಷ ಗಣರಾಜ್ಯೋತ್ಸವ ಪರೇಡ್ ಮುಗಿದ ಬಳಿಕ ಅಲ್ಲಿಯೇ ಇದ್ದ ಎಎಸ್ಪಿ ಹರಿರಾಂ ಶಂಕರ್ ಅವರನ್ನು ಕಂಡು ಕೈಕುಲುಕಿ ಮಾತನಾಡಿದ್ದು, ಟೋಪಿ ಧರಿಸುವ ಇಂಗಿತ ವ್ಯಕ್ತಪಡಿಸಿದ್ದ.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಎಎಸ್ಪಿ ಹರಿರಾಂ ಶಂಕರ್ ಅವರು ತನ್ನ ಪೊಲೀಸ್ ಕ್ಯಾಪ್ ಹಾಗೂ ಲಾಠಿ (ಪೊಲೀಸ್ ಸ್ಟಿಕ್) ನೀಡಿ ಆತನ ಜತೆ ಫೋಟೋ ತೆಗೆಸಿಕೊಂಡರು.ಈ ಬಗ್ಗೆ ಶ್ರೀ ಹರ್ಷನೊಂದಿಗೆ ಮಾತನಾಡಿದಾಗ ನಾನು ಕೂಡ ಚೆನ್ನಾಗಿ ಓದಿ ತಂದೆಯಂತೆ ದೊಡ್ಡ ಅಧಿಕಾರಿಯಾಗಬೇಕು ಎನ್ನುವ ಮನದಾಸೆಯನ್ನು ವ್ಯಕ್ತಪಡಿಸಿದ್ದಾನೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್