ಕುಂಜಾರುಗಿರಿ: ಪೇಜಾವರ ಕಿರಿಯ ಶ್ರೀಗಳಿಂದ ಗೋಗ್ರಾಸಕ್ಕೆ ಜೋಳ ಬಿತ್ತನೆ
Team Udayavani, Mar 15, 2018, 7:35 AM IST
ಕಟಪಾಡಿ: ಕುಂಜಾರು ಗಿರಿಯ ಗಿರಿಬಳಗದವರು ನಿರಂತರ 12 ವರ್ಷಗಳಿಂದ ಸುಮಾರು ಒಂದು ಎಕರೆ ಜಾಗದಲ್ಲಿ ಜೋಳದಹುಲ್ಲನ್ನು ಬೆಳೆಸಿ ನೀಲಾವರ ಗೋಶಾಲೆಗೆ ಗೋಗ್ರಾಸವಾಗಿ ನೀಡುತ್ತಿದ್ದಾರೆ.
ಈ ವರ್ಷದ ಬೆಳೆಯನ್ನು ಬೆಳೆಯಲು ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ಜೋಳದ ಬಿತ್ತನೆಗೆ ಚಾಲನೆ ನೀಡಿದರು.
ಕುಂಜಾರುಗಿರಿಯ ಅಂಬಡೆ ಪಾಡಿಯ ಗೋವಿಂದ ಭಟ್ ಅವರ ಗದ್ದೆಯಲ್ಲಿ ಈ ಬೆಳೆ ಬೆಳೆಯ ಲಾಗುತ್ತಿದೆ. ಇಲ್ಲಿ ಸ್ವತಃ ಗದ್ದೆಯನ್ನು ಹದಮಾಡಿ, ಬಿತ್ತನೆ ನಡೆಸಿ, ಜೋಳದ ಮೇವನ್ನು ಪೋಷಿಸಲಾಗುತ್ತದೆ.
ಈ ಸಂದರ್ಭ ಗಿರಿ ಬಳಗದ ಗೌರವಾಧ್ಯಕ್ಷ ಗೋವಿಂದ ಭಟ್, ಅಧ್ಯಕ್ಷ ಲಕ್ಷ್ಮೀ ನಾರಾಯಣ ಉಪಾಧ್ಯ, ಕಾರ್ಯದರ್ಶಿ ಗಿರಿಧರ ಐತಾಳ್, ದೇವಸ್ಥಾನದ ಪ್ರಬಂಧಕ ರಾಜೇಂದ್ರ ರಾವ್, ಕುರ್ಕಾಲು ಗ್ರಾ.ಪಂ.ಸದಸ್ಯ ಸುದರ್ಶನ್ ರಾವ್, ನಾರಾವಿ ಗುರುರಾಜ್ ಭಟ್, ರಾಜಮೂರ್ತಿ ಭಟ್, ಗಿರಿ ಬಳಗದ ಪದಾಧಿಕಾರಿಗಳು ಸದಸ್ಯರು, ಗಿರಿಭಗಿನಿಯರ ಸದಸ್ಯರು ಉಪಸ್ಥಿತರಿದ್ದು ಬಿತ್ತನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು