ಕುರ್ಕಾಲು : ಕೃಷಿ ಗದ್ದೆಗೆ ನುಗ್ಗಿದ್ದ ಹೊಳೆಯ ಉಪ್ಪು ನೀರು
ಕಿಂಡಿ ಅಣೆಕಟ್ಟು ಹಲಗೆ ತೆಗೆಯುವ ವೇಳೆ ಎಡವಟ್ಟು: ಸ್ಥಳೀಯರ ಆರೋಪ
Team Udayavani, Jun 28, 2019, 5:10 AM IST
ಕಟಪಾಡಿ: ಕುರ್ಕಾಲು ಗ್ರಾ.ಪಂ. ವ್ಯಾಪ್ತಿಯ ಅಂಬಡೆಪಾಡಿ, ಪಾಜೈ ಬಳಿ ಉಪ್ಪು ನೀರು ಗದ್ದೆಗೆ ನುಗ್ಗಿ ಕೃಷಿ ಬೆಳೆ ಹಾನಿಗೊಂಡಿದೆ. ಬಾವಿಯ ನೀರು ಕೂಡ ಉಪ್ಪಾಗಿದ್ದು, ಈ ಭಾಗದ ಕೃಷಿಕರು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಸಣ್ಣ ನೀರಾವರಿ ಇಲಾಖೆ ಎಡವಟ್ಟು?
ಕುರ್ಕಾಲು ಕಿಂಡಿ ಅಣೆಕಟ್ಟೆಗೆ ಹಲಗೆ ಅಳವಡಿಸಲಾಗಿದೆ. ಆದರೆ ಸ್ಥಳೀಯ ಕೃಷಿಕರನ್ನು, ಸ್ಥಳೀಯಾಡಳಿತವನ್ನು ಅಥವಾ ಮಳೆಯ ಬಗ್ಗೆ ಸಮರ್ಪಕವಾಗಿ ತಿಳಿಯದೇ ಅಣೆಕಟ್ಟಿನ ಹಲಗೆಯನ್ನು ಸಣ್ಣ ನೀರಾವರಿ ಇಲಾಖೆ ತೆಗೆಸಿದ್ದರಿಂದ ಈ ಸಮಸ್ಯೆ ತಲೆದೋರಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕುಡಿಯುವ ನೀರಿಗೆ ಪರದಾಟ
ಈ ಭಾಗದ ನೂರಾರು ಎಕರೆ ಗದ್ದೆಪ್ರದೇಶ ಸಹಿತ ಸ್ಥಳೀಯ ಬಾವಿಗಳಲ್ಲಿ ಉಪ್ಪು ನೀರಿನಂಶ ಸಂಗ್ರಹವಾಗಿದ್ದು, ಇನ್ನು ಕನಿಷ್ಠ ಮೂರರಿಂದ ನಾಲ್ಕು ವರ್ಷ ನದಿ ದಂಡೆಯ ನಿವಾಸಿಗಳ ಮನೆ ಬಾವಿ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ ಎಂಬುದು ಈ ಭಾಗದ ಜನರ ಕೊರಗು.
ಈ ಬಾರಿ ಮಳೆ ತಡವಾಗಿದೆ. ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳದೆ ಕಿಂಡಿ ಅಣೆಕಟ್ಟನ್ನು ತೆರೆಯಲಾಗಿದೆ. ಸುಮಾರು 50 ಎಕರೆ ಗದ್ದೆಯಲ್ಲಿ ಬಿತ್ತಲಾಗಿರುವ ಭತ್ತದ ಸಸಿ(ನೇಜಿ) ಯ ಬುಡವು ಕೆಂಪು ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದ್ದು, ಪುನಃ ಬೀಜ ಬಿತ್ತನೆ ಮಾಡಬೇಕಿದೆ ಎಂದು ಕೃಷಿಕರು ಹೇಳಿದ್ದಾರೆ.
ಉಪ್ಪು ನೀರು ನುಗ್ಗಿದ್ದ ಸಂದರ್ಭ ಮೀನುಗಳು ಸಾವಿಗೀಡಾಗಿದ್ದವು. ಈಗ ಕೃಷಿಗೂ ತೊಂದರೆಯಾಗಿದೆ. ಹೊಳೆಯ ನೀರಿನಿಂದಾಗಿ ಕಾರ್ತಿ ಬೆಳೆ ಆಗುತ್ತಿತ್ತು. ಆದರೆ ಈ ಬಾರಿ ಕೃಷಿ ಗದ್ದೆಯ ಚಟುವಟಿಕೆ ಇನ್ನೂ ಮುಗಿದಿಲ್ಲ.
ಎಲ್ಲದಕ್ಕೂ ಸಮಸ್ಯೆ
ಕಿಂಡಿ ಅಣೆಕಟ್ಟಿನ ಹಲಗೆ ತೆಗೆಯುವಾಗ ಸ್ಥಳೀಯಾಡಳಿತ, ಸ್ಥಳೀಯ ರೈತರ ಗಮನಕ್ಕೆ ತರಬೇಕಿದೆ. ಕಿರು ನೀರಾವರಿ ಇಲಾಖೆ ಯಾವುದೇ ಸಮಾಲೋಚನೆ ನಡೆಸದೆ ಹಲಗೆಯನ್ನು ತೆಗೆದುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಮಳೆಗಾಲದಲ್ಲೂ ಕುಡಿಯುವ ನೀರನ್ನು ಮನೆಗಳಿಗೆ ಒದಗಿಸಬೇಕಾದ ಅನಿವಾರ್ಯ ಕಂಡು ಬರುತ್ತಿದೆ.
-ಕೆ. ಸುದರ್ಶನ್ ರಾವ್ ಮತ್ತು ಎಂ.ಜಿ. ನಾಗೇಂದ್ರ, , ಸದಸ್ಯರು, ಕುರ್ಕಾಲು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ