ಇರುವ ಕೆರೆ,ಬಾವಿ ಸುಸ್ಥಿತಿಗೆ ತಂದರೆ ಯಥೇತ್ಛ ನೀರು!


Team Udayavani, May 13, 2019, 6:15 AM IST

kere-bavi

ಉಡುಪಿ: ಅಂಬಲಪಾಡಿಯ ಅರ್ಧದಷ್ಟು ಭಾಗ ಗ್ರಾ.ಪಂ ವ್ಯಾಪ್ತಿಯಲ್ಲಿದ್ದರೆ ಇನ್ನುಳಿದ ಭಾಗ ನಗರಸಭೆ ವ್ಯಾಪ್ತಿಯಲ್ಲಿದೆ. ನೀರು ಪೂರೈಕೆ ಕೂಡ ನಗರಸಭೆ ಮತ್ತು ಗ್ರಾ.ಪಂ.ನಿಂದ ನಡೆಯುತ್ತದೆ. ಆದರೆ ಎಪ್ರಿಲ್‌ ಬಂತೆಂದರೆ ನೀರಿಗೆ ಪರದಾಡಬೇಕು ಎಂಬ ಸ್ಥಿತಿ! ಈ ಬಾರಿಯಂತೂ ಸಮಸ್ಯೆ ಹೆಚ್ಚು. ಕೆಲವು ಬಾವಿಗಳಲ್ಲಿ ನೀರಿದೆ. ಸಾರ್ವಜನಿಕ ಬಾವಿಗಳು ಇಲ್ಲಿ ಕಡಿಮೆ. ಇರುವ ಬಾವಿಗಳು ದುಸ್ಥಿತಿಯಲ್ಲಿವೆ. ಹಾಗಾಗಿ ಟ್ಯಾಂಕರ್‌ ನೀರಿಗೆ ಕಾಯಬೇಕು. ಎತ್ತರದ ಕೆಲವು ಪ್ರದೇಶಗಳಿಗೆ ನಗರಸಭೆಯ ನೀರು ಬರದೆ 10-12 ದಿನಗಳು ಕೂಡ ಆಗಿವೆ.

ಫ್ಲ್ಯಾಟ್‌ಗಳಿಗೆ ಹೆಚ್ಚುವರಿ ಕನೆಕ್ಷನ್‌?
ಅಂಬಲಪಾಡಿಯಲ್ಲಿ ಹಲವು ವಸತಿ ಸಂಕೀರ್ಣಗಳಿವೆ. ಕೆಲವು ಸಂಕೀರ್ಣಗಳಿಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ಸಂಪರ್ಕ ನೀಡಲಾಗಿದೆ ಎಂಬ ದೂರು ಸ್ಥಳೀಯರದ್ದು. ಫ್ಲ್ಯಾಟ್‌ಗಳಿಗೆ ನಗರಸಭೆಯಿಂದ ಬೇಕಾಬಿಟ್ಟಿ ನೀರಿನ ಸಂಪರ್ಕ ನೀಡಿರುವುದರಿಂದ ಇದರ ಸುತ್ತಮುತ್ತಲಿನ ಮನೆಗಳಿಗೆ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂಬ ದೂರು ಅವರದ್ದು.

ಅಂಬಲಪಾಡಿ ಜಂಕ್ಷನ್‌, ಪರಿಶಿಷ್ಟ ಜಾತಿಯವರ ಕಾಲನಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷವೂ ಇದೆ. ಇಲ್ಲಿನ ಕೆಲವು ಮನೆಯವರು ಸಮಸ್ಯೆಗೆ ಹೊಂದಿ ಕೊಂಡಿದ್ದಾರೆ! “ಟ್ಯಾಂಕರ್‌ ನೀರುಬಂದರೆ ತುಂಬಿಸಿಡುತ್ತೇವೆ. ಡ್ಯಾಂನಲ್ಲಿ ನೀರೇ ಇಲ್ಲದಿದ್ದರೆ ಕೊಡುವುದು ಎಲ್ಲಿಂದ? ವರ್ಷದಿಂದ ವರ್ಷಕ್ಕೆ ಸಮಸ್ಯೆ ಉಲ್ಬಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿಯೆಂದು ಸ್ಥಳೀಯರು ಹೇಳುತ್ತಾರೆ.

ಕೆರೆಗಳನ್ನು ಸುಸ್ಥಿತಿಗೆ ತನ್ನಿ
ಅಂಬಲಪಾಡಿ ವಾರ್ಡ್‌ನಲ್ಲಿ ನಾಯರ್‌ಕೆರೆ ಮತ್ತು ಬೀಡುರಸ್ತೆಯಲ್ಲಿ ಕೆರೆಗಳಿವೆ. ಈ ಕೆರೆಗಳ ಹೂಳು ತೆಗೆದು ಸ್ವತ್ಛಗೊಳಿಸಿದರೆ ನೀರು ದೊರೆಯಬಹುದು. ಪಕ್ಕದ ಮನೆಗಳ ಬಾವಿಗಳ ಅಂತರ್ಜಲ ಹೆಚ್ಚಾಗಬಹುದು. ಈ ಬಗ್ಗೆ ನಗರಸಭೆ ತುರ್ತಾಗಿ ಗಮನ ಹರಿಸಬೇಕು ಎಂಬ ಬೇಡಿಕೆ ಇದೆ.

ಕುಡಿಯಲಾಗದು
ಗ್ರಾ.ಪಂ.ನವರು ಪಂಪ್‌ ಮೂಲಕ ಟ್ಯಾಂಕರ್‌ಗೆ ನೀರು ಹರಿಸಿ ಅದನ್ನು ಮರುದಿನ ಪೂರೈಸುತ್ತಾರೆ. ಇಲ್ಲವಾದರೆ ಅದರಲ್ಲಿ ಕೆಸರು ಮಡ್ಡಿ ಇರುತ್ತದೆ. ಈ ನೀರು ಕುಡಿಯುವುದಕ್ಕೆ ಯೋಗ್ಯವಿಲ್ಲ. ಕುಡಿಯಲು ನಗರಸಭೆಯ ನೀರೇ ಬೇಕು. ಗ್ರಾ.ಪಂ.ನವರು ಗದ್ದೆ ಸಾಲಿನಲ್ಲಿರುವ ಬಾವಿಯನ್ನು ದುರಸ್ತಿಗೊಳಿಸಿದರೆಬೇಕಾದಷ್ಟು ನೀರು ಸಿಗಬಹುದು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

ಮಳೆ ಬಂದರೆ ಉಸಿರು!
ಕಳೆದ ಒಂದು ತಿಂಗಳಿನಿಂದ ದಿನಕ್ಕೆ ಎರಡು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡುತ್ತಿದ್ದೇನೆ. ನಗರಸಭೆಯಿಂದ ಬರುವ ಲೈನ್‌ನಿಂದ ಎತ್ತರದ ಪ್ರದೇಶಗಳಿಗೆ ನೀರು ಹೋಗುತ್ತಿಲ್ಲ. ಜನರಿಗೆ ನೀರು ಒದಗಿಸುವುದು ನಮ್ಮ ಮೊದಲ ಕರ್ತವ್ಯ. ಸದ್ಯಕ್ಕೆ ಮಳೆಯೊಂದೇ ಪರಿಹಾರ. ವಾರಾಹಿಯಿಂದ ನೀರು ತಂದರೆ ಮಾತ್ರ ಶಾಶ್ವತ ಪರಿಹಾರ ದೊರೆಯಬಹುದು.
-ಹರೀಶ್‌ ಶೆಟ್ಟಿ, ನಗರಸಭಾ ಸದಸ್ಯರು, ಅಂಬಲಪಾಡಿ ವಾರ್ಡ್‌

ಕೆರೆಯಲ್ಲಿ ಯಥೇತ್ಛ ನೀರು
ಅಂಬಲಪಾಡಿ ಬೀಡು ರಸ್ತೆಯಲ್ಲಿರುವ ದೊಡ್ಡ ಪುರಾತನ ಕೆರೆಯಲ್ಲಿ ಹೂಳು ತುಂಬಿದೆ. ಕೆಲವು ವರ್ಷಗಳ ಹಿಂದೆ ಇದರ ಹೂಳು ತೆಗೆಯಲಾಗಿತ್ತು. ಆಗ 2 ಪಂಪ್‌ಗ್ಳನ್ನಿಟ್ಟು ನೀರು ತೆಗೆದರೂ ಅದು ಬತ್ತಿರಲಿಲ್ಲ. ಈಗ ಮತ್ತೆ ಇದರಲ್ಲಿ ಕಳೆಗಿಡ ಬೆಳೆದಿದೆ. ಹೂಳು ಕೂಡ ಇರಬಹುದು. ಸ್ವತ್ಛಗೊಳಿಸಿದರೆ ಇದರ ನೀರನ್ನು ಇಡೀ ವಾರ್ಡ್‌ಗೆ ಬಳಸಬಹುದು. ಪರಿಸರದ ಬಾವಿಗಳ ಅಂತರ್ಜಲ ಮಟ್ಟ ಕೂಡ ಹೆಚ್ಚಾಗಬಹುದು.
-ಅಶೋಕ್‌, ಸ್ಥಳೀಯ ನಿವಾಸಿ

ವಾರ್ಡ್‌ ಜನರ ಬೇಡಿಕೆ
– ಶಾಶ್ವತ ಪರಿಹಾರ ಕಲ್ಪಿಸಬೇಕು.
– ಟ್ಯಾಂಕರ್‌ ನೀರಿಗೆ ವ್ಯವಸ್ಥೆ ಮಾಡಬೇಕು.
– ಬಾವಿಗಳನ್ನು ದುರಸ್ತಿ ಮಾಡಬೇಕು.

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.