ಉಡುಪಿ: ಲಕ್ಷದೀಪದ ತೆಪ್ಪೋತ್ಸವಕ್ಕೆ ಯಕ್ಷ ವೈಭವದ ಮೆರುಗು
Team Udayavani, Dec 1, 2020, 10:19 AM IST
ಉಡುಪಿ : ಶ್ರೀಕೃಷ್ಣ ಮಠದಲ್ಲಿ ನಾಲ್ಕು ದಿನಗಳ ಲಕ್ಷದೀಪೋತ್ಸವ ಸೋಮವಾರ ಸಮಾಪನಗೊಂಡಿತು. ನಾಲ್ಕನೆಯ ದಿನದ ದೀಪೋತ್ಸವದ ತೆಪ್ಪೋತ್ಸವವು ಯಕ್ಷಗಾನ ಶೈಲಿಯಲ್ಲಿ ವಿರಾಜಿಸಿತು. ಸ್ಥಳೀಯ ನೇಕಾರರಿಂದ ಮಾಡಿಸಿದ ಯಕ್ಷಗಾನದ ಕಸೆ ಸೀರೆಯನ್ನು (ಉಡುಪಿ ಸೀರೆ) ಉತ್ಸವಮೂರ್ತಿಗೆ ಸಮರ್ಪಿಸಿ ಬಳಿಕ ಇದರಿಂದ ತೆಪ್ಪವನ್ನು ಅಲಂಕರಿಸಲಾಯಿತು. ಯಕ್ಷಗಾನದ
ಕೇದಗೆ ಮಂದಲೆ, ವೀರಗಸೆಯಿಂದ ತೆಪ್ಪ ಮಿಂಚಿತು. ಸೋಮವಾರವೂ ದೊಂದಿ ಬೆಳಕಿನಿಂದ ತೆಪ್ಪೋತ್ಸವವು ಕಂಗೊಳಿಸಿತು.
ನಿತ್ಯದ ವಾದ್ಯೋಪ ಕರಣಗಳಲ್ಲದೆ ಪಂಚವಾದ್ಯಗಳನ್ನು ಕಲಾವಿದರು ನುಡಿಸಿದರು. ತೆಪ್ಪೋತ್ಸವದಲ್ಲಿ ಪರ್ಯಾಯ
ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು, ಕೃಷ್ಣಾಪುರ, ಪಲಿಮಾರು ಮಠದ ಹಿರಿಯ ಮತ್ತು ಕಿರಿಯ ಶ್ರೀಪಾದರು
ಹಾಗೂ ಕಾಣಿಯೂರು ಮಠದ ಮಠಾಧೀಶರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ