ಇಂದಿನಿಂದ ಲಕ್ಷದೀಪೋತ್ಸವ ಸಡಗರ
ಶ್ರೀಕೃಷ್ಣಮಠದಲ್ಲಿ ತಪ್ತಮುದ್ರಾಧಾರಣೆ
Team Udayavani, Nov 16, 2021, 5:15 AM IST
ಉಡುಪಿ: ಶ್ರೀಕೃಷ್ಣಮಠದಲ್ಲಿ ಸೋಮವಾರ ಚಾತುರ್ಮಾಸ್ಯವ್ರತದ ಕೊನೆಯ ಏಕಾದಶಿಯಾದ ದೇವಪ್ರಬೋಧಿನಿ ಏಕಾದಶಿಯಂದು ಭಕ್ತರಿಗೆ ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ತಪ್ತಮುದ್ರಾಧಾರಣೆ ನಡೆಸಿದರು.
ಇದಕ್ಕೂ ಮುನ್ನ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ಸಲ್ಲಿಸಿದರು ಮತ್ತು ಪುರೋಹಿತರಾದ ವೇ| ಮೂ| ಮುದರಂಗಡಿ ಲಕ್ಷ್ಮೀಶ ಆಚಾರ್ಯರು ಸುದರ್ಶನ ಹೋಮ ನಡೆಸಿದರು. ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಸ್ವತಃ ಮುದ್ರಾಧಾರಣೆ ಮಾಡಿಕೊಂಡು ಪರ್ಯಾಯ ಶ್ರೀಪಾದರಿಗೆ ಮುದ್ರಾಧಾರಣೆ ನಡೆಸಿದರು. ಅ ಬಳಿಕ ಭಕ್ತರಿಗೆ ಮುದ್ರಾಧಾರಣೆ ನಡೆಸಲಾಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬೆಳಗ್ಗೆ 11ರಿಂದ ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀತೀರ್ಥ ಶ್ರೀಪಾದರಿಂದ ತಪ್ತ ಮುದ್ರಾಧಾರಣೆ ನಡೆಯಿತು.ನಾಲ್ಕು ದಿನ ದೀಪೋತ್ಸವ ಮಂಗಳವಾರ ಉತ್ಥಾನದ್ವಾದಶಿಯಂದು ಮೊದಲ ದಿನದ ಲಕ್ಷದೀಪೋತ್ಸವ ಜರಗಲಿದೆ.
ನ. 19ರ ವರೆಗೆ ನಾಲ್ಕು ದಿನಗಳ ಕಾಲ ದೀಪೋತ್ಸವ ನಡೆಯಲಿದ್ದು ಭಕ್ತರೂ ಈ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಂದರ್ಭ ಸುಮಾರು 35,000 ಮಣ್ಣಿನ ಹಣತೆ ದೀಪಗಳನ್ನು ರಥಬೀದಿ ಸುತ್ತಲೂ ಬೆಳಗಿಸಲಾಗುವುದು. ಇದಲ್ಲದೆ ಮಧ್ವಸರೋವರ, ಶ್ರೀಕೃಷ್ಣಮಠದೊಳಗೆ ದೀಪಗಳನ್ನು ಬೆಳಗಿಸಲಾಗುತ್ತದೆ.
ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾಯ್ದೆ: ವಿಚಾರಣೆ ಮುಂದಕ್ಕೆ
ರಥಬೀದಿ ಸುತ್ತ ಸುಮಾರು 400 ಗೂಡುದೀಪಗಳನ್ನು ಅಳವಡಿಸಲಾಗುತ್ತಿದೆ. ನಾಲ್ಕೂ ದಿನಗಳಲ್ಲದೆ ವರ್ಷಪೂರ್ತಿ ಶುದ್ಧ ಎಳ್ಳೆಣ್ಣೆಯಿಂದ ದೀಪಗಳನ್ನು ಉರಿಸಲಾಗುತ್ತಿದೆ. ಲಕ್ಷದೀಪೋತ್ಸವಕ್ಕಾಗಿ ಸುಮಾರು 600 ಲೀಟರ್ ಶುದ್ಧ ಎಳ್ಳೆಣ್ಣೆಯನ್ನು ಸಂಗ್ರಹಿಸಲಾಗಿದೆ.
ಮಂಗಳವಾರ ಅಪರಾಹ್ನ 2.50ಕ್ಕೆ ರಥಬೀದಿಯಲ್ಲಿ ಸ್ವಾಮೀಜಿಯವರು ಹಣತೆಗಳನ್ನಿಟ್ಟು ಮುಹೂರ್ತ ನಡೆಸಲಿದ್ದು ಭಕ್ತರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಪರಾಹ್ನ 4ಕ್ಕೆ ತುಳಸೀಪೂಜೆ ಮುಕ್ತಾಯಗೊಳ್ಳಲಿದ್ದು ಕ್ಷೀರಾಬ್ದಿ ಪೂಜೆ ಮಧ್ವಸರೋವರದಲ್ಲಿ ನಡೆಯಲಿದೆ. ಚಾತುರ್ಮಾಸ್ಯವ್ರತದ ಕಾಲ ಮುಗಿದು ಉತ್ಸವ ಆರಂಭವಾಗುವುದು ಇದೇ ದಿನ. ಕ್ಷೀರಾಬ್ದಿ ಪೂಜೆ ಬಳಿಕ ಶ್ರೀಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರನ ಉತ್ಸವ ಮೂರ್ತಿಗಳು ಎರಡು ರಥಗಳಲ್ಲಿ ಪಾಲ್ಗೊಳ್ಳುತ್ತವೆ.
ರಥೋತ್ಸವವು ಸಂಜೆ 6.45ಕ್ಕೆ ಆರಂಭವಾಗಲಿದ್ದು ಆ ಬಳಿಕವೇ ರಥಬೀದಿಯಲ್ಲಿ ಭಕ್ತರು ದೀಪವನ್ನು ಬೆಳಗಿಸಬೇಕು ಎಂದು ಮಠದ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ