“ಉತ್ತಮ ನಾಯಕತ್ವದ ಸೂಕ್ಷ್ಮತೆ ತಿಳಿಯಿರಿ’
ಕುಂದಾಪುರ: ನಾಯಕತ್ವ ತರಬೇತಿ ಶಿಬಿರ
Team Udayavani, Sep 15, 2019, 5:41 AM IST
ಕುಂದಾಪುರ: ಯುವಕರು ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿಪುಲ ಅವಕಾಶಗಳಿವೆ. ಆ ನಿಟ್ಟಿನಲ್ಲಿ ಉತ್ತಮ ನಾಯಕತ್ವದ ಗುಣ ತಮ್ಮಲ್ಲಿ ಮೈಗೂಡಿಸಿ ಕೊಳ್ಳುವುದರ ಜತೆಗೆ ಕಾಲೇಜಿನಲ್ಲಿ ಲಭ್ಯವಿರುವ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು. ವೃತ್ತಿ ಕೌಶಲ, ಉತ್ತಮ ನಾಯಕತ್ವದ ಸೂಕ್ಷ್ಮತೆಯನ್ನು ವಿದ್ಯಾರ್ಥಿಗಳು ಅರಿತಿರಬೇಕು ಎಂದು ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ಹೇಳಿದರು.
ಅವರು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ಘಟಕ ಹಾಗೂ ಜೇಸಿಐ ಕುಂದಾಪುರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ನಾಯಕತ್ವ ತರಬೇತಿ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲ ಪ್ರೊ| ಉಮೇಶ್ ಶೆಟ್ಟಿ ಕೊತ್ತಾಡಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಜೇಸಿಐ ಸಪ್ತಾಹ ಸಭಾಪತಿ ಶ್ರೀಧರ್ ಸುವರ್ಣ, ಕುಂದಾಪುರದ ವಕೀಲ ಜಯಚಂದ್ರ ಶೆಟ್ಟಿ, ಜೇಸಿಐ ಕಾರ್ಯದರ್ಶಿ ಮಹೇಶ್ ಶೇಟ್, ಜೇಸಿಐ ಸದಸ್ಯ ಕಾರ್ತಿಕೇಯ ಮಧ್ಯಸ್ಥ, ವೃತ್ತಿ ಮಾರ್ಗದರ್ಶನ ಅಧಿಕಾರಿ ಮಹೇಶ್ ಬಾಬು ಉಪಸ್ಥಿತರಿದ್ದರು.
ಜೇಸಿಐ ಸ್ಥಾಪಕ ಅಧ್ಯಕ್ಷ ಹುಸೆ„ನ್ ಹೆ„ಕಾಡಿ ಪ್ರಸ್ತಾವಿಸಿದರು. ಜೇಸಿಐ ಅಧ್ಯಕ್ಷ ಪ್ರಶಾಂತ ಹವಲ್ದಾರ್ ಸ್ವಾಗತಿಸಿ ದರು. ನವ್ಯಾ ಅತಿಥಿಗಳನ್ನು ಪರಿಚಯಿಸಿ, ಮಹೇಶ್ ಕೊಠಾರಿ ವಂದಿಸಿ, ಹನೀನಾ ಫಾತಿಮಾ ನಿರೂಪಿಸಿದರು.