ಆಜ್ರಿ: ಚಿರತೆಗೆ 8 ಹಸುಗಳು ಬಲಿ
Team Udayavani, Jan 24, 2019, 12:45 AM IST
ಕೊಲ್ಲೂರು: ಆಜ್ರಿ ಗ್ರಾಮದ ಚೋನಮನೆಯ ಪರಿಸರದಲ್ಲಿ ಕಳೆದ ಹತ್ತು ದಿನಗಳಿಂದ 8 ಹಸುಗಳು ನಾಪತ್ತೆಯಾಗಿದ್ದು, ಚಿರತೆಗೆ ಆಹಾರವಾಗಿರುವ ಶಂಕೆ ವ್ಯಕ್ತವಾಗಿದೆ. ಕೊಡ್ಲಾಡಿ ಗಂಡುಮಕ್ಕಿ, ಚೋನಮನೆ ನಿವಾಸಿ ರಘುರಾಮ ಶೆಟ್ಟಿ ಹಾಗೂ ಕಿರಣ ಶೆಟ್ಟಿ ಆಜ್ರಿ ಅವರು ಉದಯವಾಣಿಗೆ ಮಾಹಿತಿ ನೀಡಿದ್ದು ತಮ್ಮ ಹಾಗೂ ಆಸುಪಾಸಿನ ಮನೆಗಳ ಹಸುಗಳು ನಾಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ‘ಸನಿಹದ ಅಭಯಾರಣ್ಯದಿಂದ ಪ್ರತಿ ರಾತ್ರಿ ಗರ್ಜನೆ ಕೇಳಿಬರುತ್ತಿದ್ದು, ಅದು ಚಿರತೆಯ ಗರ್ಜನೆಯಂತಿಲ್ಲ; ಹುಲಿಯ ಗರ್ಜನೆಯಂತಿದೆ. ಅದುವೇ ನಮ್ಮ ಹಸುಗಳನ್ನು ಕೊಂದು ತಿಂದಿರಬೇಕು’ ಎಂದೂ ಶಂಕೆ ವ್ಯಕ್ತಪಡಿಸಿದ್ದಾರೆ.
ಅರಣ್ಯದಂಚಿನ ಹಸುಗಳು ಕಾಣೆಯಾಗುತ್ತಿರುವುದರಿಂದ ಅರಣ್ಯ ಇಲಾಖೆ ಜಾಗೃತವಾಗಬೇಕು ಮತ್ತು ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಪರಿಸರದ ನಿವಾಸಿಗಳು ಆಗ್ರಹಿಸಿದ್ದು, ಮುಂದೆ ಸ್ಥಳೀಯ ಜನರಿಗೂ ಅಪಾಯ ಒದಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್