ಜೆರಾಕ್ಸ್ ಪ್ರತಿಯಲ್ಲಿ ಪಾಠ: ವಿದ್ಯಾರ್ಥಿಗಳಿಗೆ ಸಂಕಷ್ಟ
Team Udayavani, Jul 15, 2017, 2:55 AM IST
ಕುಂದಾಪುರ: ತಾಲೂಕಿನಲ್ಲಿ ಶಾಲೆಗಳು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಇನ್ನೂ ಕೂಡಾ ಕೆಲವು ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಕೆಯಾಗಿಲ್ಲ.ಕೆಲವು ಶಾಲೆಗಳಲ್ಲಿ ಸುಮಾರು ನಾಲ್ಕೈದು ಪಾಠಗಳು ಮುಗಿದಿದ್ದರೂ ಮಕ್ಕಳ ಕೈಯಲ್ಲಿ ಪುಸ್ತಕ ಬಂದಿಲ್ಲ.ಈ ಬಗ್ಗೆ ಪೋಷಕರು ಶಿಕ್ಷಣ ಸಂಸ್ಥೆಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಝೆರಾಕ್ಸ್ ಪ್ರತಿಗಳಿಂದ ಪಾಠ
ಒಂದರಿಂದ ಹತ್ತನೇ ತರಗತಿಯ ತನಕ ಪಠ್ಯಪುಸ್ತಕದ ಅಭಾವ ಕಮಡು ಬಂದಿದ್ದು ಎಸೆಸೆಲ್ಸಿ ವಿದ್ಯಾರ್ಥಿಗಳ ಕನ್ನಡ ಪಠ್ಯ ಪುಸ್ತಕ ಇನ್ನೂ ವಿದ್ಯಾರ್ಥಿಗಳ ಕೈಗೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಪಬ್ಲಿಕ್ ಪರೀಕ್ಷೆಯನ್ನು ಮನಗಂಡು ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದ ಝೆರಾಕ್ಸ್ ಪ್ರತಿಗಳನ್ನು ಕೊಟ್ಟು ಪಾಠ ಮಾಡುವುದು ಕೆಲವು ಶಾಲೆಗಳಲ್ಲಿ ಕಂಡು ಬಂದಿದೆ. ಝೆರಾಕ್ಸ್ ಪ್ರತಿಯಲ್ಲೇ ಈಗಾಗಲೇ ಕನ್ನಡದ ಆರು ಪಾಠಗಳನ್ನು ಮುಗಿಸಿದ್ದರೂ ಇಲಾಖೆ ಮಾತ್ರ ಕೆಲವೇ ದಿನಗಳಲ್ಲಿ ಪುಸ್ತಕ ದೊರೆಯುವುದು ಎನ್ನುವ ಭರವಸೆಯನ್ನು ನೀಡುತ್ತಿದ್ದಾರೆ.
ಫಲಿತಾಂಶಕ್ಕೆ ತೊಂದರೆಯಾಗದಿರಲಿ
ಸರಕಾರ ಈ ಹಿಂದೆ ಅಂಗಡಿಗಳಲ್ಲಿ ಪಠ್ಯಪುಸ್ತಕ ಮಾರಾಟ ಮಾಡುವುದನ್ನು ನಿಯಂತ್ರಣಕ್ಕೆ ತಂದಿದ್ದರಿಂದ ಅಂಗಡಿಗಳಲ್ಲೂ ಪಠ್ಯಪುಸ್ತಕ ಲಭ್ಯವಾಗುತ್ತಿಲ್ಲ. ಈ ಬಾರಿ ಉಡುಪಿ ಜಿಲ್ಲೆಯ ಶೈಕ್ಷಣಿಕ ಫಲಿತಾಂಶಕ್ಕೆ ತೊಂದರೆಯಾಗದಂತೆ ಹೆಚ್ಚಿನ ಜವಾಬ್ದಾರಿ ನಿರ್ವಹಿಸಬೇಕಿದೆ ಎನ್ನುವುದು ಕೆಲವು ಅಧ್ಯಾಪಕರ ಅಭಿಪ್ರಾಯವಾಗಿದೆ.
ಮುದ್ರಣ ಕಾಗದದ ಕೊರತೆ
ಬರಗಾಲದ ಹಿನ್ನೆಲೆಯಲ್ಲಿ ತಮಿಳುನಾಡಿನಿಂದ ಪೂರೈಕೆಯಾಗುತ್ತಿದ್ದ ಮುದ್ರಣ ಕಾಗದಗಳ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಸಕಾಲದಲ್ಲಿ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಸುವಲ್ಲಿ ವಿಳಂಬವಾಗಿದೆ ಎನ್ನಲಾಗಿದೆ. 1ರಿಂದ 10ನೇ ತರಗತಿಯ ತನಕ ಸುಮಾರು ಆರು ಕೋಟಿ ಪುಸ್ತಕವನ್ನು ಮುದ್ರಿಸಬೇಕಾಗಿದೆ. ಮುದ್ರಣ ಕಾಗದ ಪೂರೈಕೆಯ ವಿಳಂಬದಿಂದಾಗಿ ದರ ವ್ಯತ್ಯಾಸವಾಗಿದ್ದರಿಂದ ಪುಸ್ತಕ ಮುದ್ರಣದಲ್ಲಿ ತಡವಾಗಿ ಆರಂಭವಾಗಿದೆ.
ಶೇ. 80ರಷ್ಟು ವಿದ್ಯಾರ್ಥಿಗಳಿಗೆ ಈಗಾಗಲೇ ಪಠ್ಯಪುಸ್ತಕ ಲಭ್ಯವಾಗಿದ್ದು ಶೇ. 20ರಷ್ಟು ವಿದ್ಯಾರ್ಥಿಗಳಿಗೆ ಲಭ್ಯವಾಗಿಲ್ಲ. ಪಠ್ಯಕ್ರಮದ ಬದಲಾವಣೆಯಿಂದಾಗಿ ಪಠ್ಯಪುಸ್ತಕ ಮುದ್ರಣ ತಡವಾಗಿ ಆಗಿದ್ದರಿಂದ ವಿಳಂಬವಾಗಿದೆ. ಪ್ರಸ್ತುತ ಪಠ್ಯಪುಸ್ತಕಗಳು ಬಂದಿದ್ದು, ಈ ವಾರದೊಳಗೆ ಎಲ್ಲ ಶಾಲೆಗಳಿಗೂ ಹಸ್ತಾಂತರಿಸಲಾಗುವುದು
– ಸೀತಾರಾಮ್ ಶೆಟ್ಟಿ,
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ