ಸಮಸ್ಯೆ ನೂರೆಂಟಿದ್ದರೂ ಓಟು ಬಿಡೆವು


Team Udayavani, May 7, 2018, 2:39 PM IST

7-May-11.jpg

ಉಡುಪಿ: ‘ಹಿಂದಿನ ಓಟ್ನಾಗ ನನ್‌ ಹೆಣ್ತೇ ನ್ನ ಕೊಂದಾಕವ್ರೆ …ವೋಟರ್‌ ಐಡಿ ಆದ್ಮ್ಯಾಕೆ ಆಕಿ ಓಟ್‌ ಮಾಡಿಲ್ಲ. ಯಾಕಂದ್ರೆ ಅವ್ರ್ ಚುನಾವಣಾ ದಾಖಲೆಯಾಗ ನನ್‌ ಹೆಣ್ತೆ  ಸತ್ತಾವ್ಳೆ ಅಂತ ತೆಗೆದ್‌ ಹಾಕ್ಯಾರೆ… ನಾನ್‌ ಬಿಟ್ಟಿಲ್ಲ ನೋಡ್ರಿ. ಆಮ್ಯಾಕೆ ವಕೀಲರ ಮೂಲಕ ಆಕಿ ಬದುಕಿರೋ ದಾಖಲೆ ಕೊಟ್ಟು ಮತ್ತೆ ವೋಟರ್‌ ಐಡಿ ಮಾಡ್ಸೀನಿ. ಹಾಗಾಗಿ ಈ ಬಾರಿ ಆಕಿ ಓಟ್‌ ಹಾಕೇ ಹಾಕ್ತಾಳ.’

ಪಡುಬಿದ್ರಿ, ಹೆಜಮಾಡಿ, ಉಚ್ಚಿಲ, ಶಿರ್ವ, ಮುದರಂಗಡಿ, ನಂದಿಕೂರು ಭಾಗದಲ್ಲಿ ‘ಉದಯವಾಣಿ’ ಸಂಚಾರ ನಡೆಸಿದಾಗ ಶಿರ್ವದಲ್ಲಿ ದೊಡ್ಲಗಿರಿ ಭಾಗದ ನಿವಾಸಿ ಗಂಗಾವತಿಯ ಮಾಣಿಕ್ಯ ಅವರು ಚುನಾವಣೆಗಾಗಿ ತಾನು ಅನುಭವಿಸಿದ ಪಾಡನ್ನು ವಿವರಿಸಿದರು.

ಪೇಟೆ ಭಾಗದ ಜನರಲ್ಲಿ ಕೇಳಿದಾಗ ಹಿಂದಿನ ಟ್ರೆಂಡ್‌ ಬೇರೆ ಇತ್ತು. ಈಗ ಬದಲಾಗುತ್ತಾ ಬರುತ್ತಿದೆ. ಪಕ್ಷಗಳ ನಾಯಕರು, ಕಾರ್ಯಕರ್ತರ ತಿರುಗಾಟ ಹೆಚ್ಚಿದೆ ಎನ್ನುತ್ತಾರೆ. ‘ನನ್ನ ವ್ಯವಹಾರದ್ದೇ ಟೆನ್ಶನ್‌ ಮುಗಿಯೋದಿಲ್ಲ. ಇನ್ನು ಓಟಿನ ಚಿಂತೆ ನಾನೇಕೆ ಮಾಡೋದು. ಆದ್ರೆ ಓಟ್‌ ಮಾತ್ರ ಮಾಡ್ತೇನೆ’ ಎಂದು ಶಿರ್ವದ ಪಾನ್‌ಬೀಡಾ ಅಂಗಡಿಯ ಸೀನಣ್ಣ ಹೇಳಿದರು.

ಹೆದ್ದಾರಿ ನಿಧಾನ, ಆಗದ ಕೊಳಚೆ ನಿರ್ವಹಣೆ
ಪಡುಬಿದ್ರಿ ಭಾಗದ ಬಹುತೇಕ ಜನರು ಅಲ್ಲಿನ ರಾ.ಹೆ. 66ರ ಕಳೆದೆಂಟು ವರ್ಷದ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ. ಇನ್ನೂ ಮುಗಿಯದ ಪಡುಬಿದ್ರಿ ಹೆದ್ದಾರಿ ಕಾಮಗಾರಿ, ಹೊಟೇಲುಗಳ ತ್ಯಾಜ್ಯ ಹರಿದು ಹೋಗಲು ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಆಗಿಲ್ಲ. ಇಲ್ಲಿನ ಜನಪ್ರತಿನಿಧಿಗಳಿಗೆ ಏನೇನೂ ಕಾಳಜಿಯೇ ಇಲ್ಲವೇ ಎಂದೆನಿಸುತ್ತದೆ ಎಂದರು.

ಒಗ್ಗಿಕೊಂಡರೇ ಜನರು…
ನಂದಿಕೂರಿನಲ್ಲಿ ಕೈಗಾರಿಕೆಗಳಿಂದ ಬಹಳಷ್ಟು ತೊಂದರೆ ಅನುಭವಿಸಿದ ಜನರು ಈ ಬಾರಿ ಅಷ್ಟಾಗಿ ವಿರೋಧವನ್ನು ವ್ಯಕ್ತಪಡಿಸದೆ ವ್ಯವಸ್ಥೆಗೆ ಒಗ್ಗಿ ಹೋಗಿದ್ದಾರೆ ಎಂದೆನಿಸುತ್ತದೆ. ಆದರೂ ಕೆಲವು ಜನರು ಈಗಲೂ ಕೈಗಾರಿಕೆಗಳಿಗೆ ವಿರೋಧವಾಗಿ ಮಾತನಾಡಿದ್ದಾರೆ. ಸಮಸ್ಯೆಗಳು ಬಗೆಹರಿದಿಲ್ಲ. ಸ್ಥಳೀಯರಿಗೆ ಸೂಕ್ತವಾಗಿ ಉದ್ಯೋಗ ಸೃಷ್ಟಿಯಾಗಿಲ್ಲ ಎಂದಿದ್ದಾರೆ. 

ಯೋಜನಾ ಪ್ರಾಧಿಕಾರದಿಂದ ಮುಳುವು
ಕಾಪು ತಾಲೂಕಾದ ಬಳಿಕ ಕಾಪು ಯೋಜನಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಇದರಡಿ ಉಚ್ಚಿಲ ಗ್ರಾಮವನ್ನೂ ಸೇರಿಸಲಾಗಿದೆ. ಇದರಿಂದ ಬಡಜನರಿಗೆ ಮುಳುವಾಗಿದೆ. ಒಂದು ಸೂರು ಕಟ್ಟಿಕೊಳ್ಳಲೂ ಅಡ್ಡಿಯಾಗುತ್ತಿದೆ. ಇಂತಹ ಅಭಿವೃದ್ಧಿ ನಮಗೆ ಬೇಡ. 
– ವಸಂತ್‌ ಉಚ್ಚಿಲ 

ಓಟು ಹಾಕದೆ ಯಾವ ಚುನಾವಣೆಯೂ ಬಿಟ್ಟಿಲ್ಲ
 ‘ಸರಕಾರಿ ಭೂಮಿಯಲ್ಲಿ ಕುಳಿತು 30 ವರ್ಷದಿಂದ ಹಕ್ಕುಪತ್ರಕ್ಕಾಗಿ ಒದ್ದಾಡಿ ನನಗೀಗ 85 ವರ್ಷವಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಈ ವ್ಯವಸ್ಥೆಯಿಂದ ಬಸವಳಿದೆ. ಇನ್ನು ನಾನು ಹೋಗೋ ಕಾಲವಾಯ್ತು. ಆದ್ರೆ ಓಟ್‌ ಹಾಕದೆ ಮಾತ್ರ ಯಾವ ಚುನಾವಣೆಯನ್ನೂ ಬಿಟ್ಟಿಲ್ಲ. ಬದುಕಿದ್ರೆ ಈ ಬಾರಿಯೂ ಓಟ್‌ ಮಾಡ್ತೇನೆ’.
ಮಹಾಬಲ ಕೋಟ್ಯಾನ್‌,
ಮುದರಂಗಡಿ ಕುತ್ಯಾರು

„ಚೇತನ್‌ ಪಡುಬಿದ್ರಿ

ಟಾಪ್ ನ್ಯೂಸ್

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

Former Prime Minister ಇಂದಿರಾ ಗಾಂಧಿಗೆ ಪುನರ್‌ಜನ್ಮ ನೀಡಿ, ಪ್ರಧಾನಿಯಾಗಿಸಿದ ಕ್ಷೇತ್ರ

Former Prime Minister ಇಂದಿರಾ ಗಾಂಧಿಗೆ ಪುನರ್‌ಜನ್ಮ ನೀಡಿ, ಪ್ರಧಾನಿಯಾಗಿಸಿದ ಕ್ಷೇತ್ರ

ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ: ಪುತ್ತಿಗೆ ಶ್ರೀ ಸಂಕಲ್ಪ

Udupi; ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ: ಪುತ್ತಿಗೆ ಶ್ರೀ ಸಂಕಲ್ಪ

Manipal ಮಾಹೆ ವಿ.ವಿ.ಗೆ ಕ್ವಾಕ್ವರೆಲಿ ಸಿಮಾಂಡ್ಸ್‌ ಶ್ರೇಯಾಂಕ ಗರಿ

Manipal ಮಾಹೆ ವಿ.ವಿ.ಗೆ ಕ್ವಾಕ್ವರೆಲಿ ಸಿಮಾಂಡ್ಸ್‌ ಶ್ರೇಯಾಂಕ ಗರಿ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.