ವಾಯು ಶಕ್ತಿಯ ಮಹತ್ವ ಅರಿತು ಬಳಸೋಣ

35 ದೇಶಗಳಲ್ಲಿ 300ಕ್ಕೂ ಅಧಿಕ ಕಾರ್ಯಕ್ರಮ

Team Udayavani, Jun 15, 2019, 6:00 AM IST

WORLD-WIND-DAY1

ವಾಯು ಅಪರಿಮಿತ ಸಂಪನ್ಮೂಲ. ಅದನ್ನು ಶಕ್ತಿಯನ್ನಾಗಿ ಪರಿವರ್ತಿಸಿ ಬಳಕೆ ಮಾಡಿದರೆ ಇಂಧನಗಳ ಅಭಾವ ಉಂಟಾಗುವುದೇ ಇಲ್ಲ. ವಾಯು ಶಕ್ತಿಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ವಿಶ್ವ ಮಟ್ಟದಲ್ಲಿ 2007ರಿಂದ ಪ್ರತಿ ವರ್ಷ ಜೂನ್‌ 15ರಂದು ವಿಶ್ವ ವಾಯು ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಾಯು ಶಕ್ತಿಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವುದೇ ಈ ದಿನದ ಪ್ರಮುಖ ಉದ್ದೇಶ.

ಗಾಳಿಯ ಶಕ್ತಿ, ಅದರ ಪ್ರಯೋಜನಗಳನ್ನು ತಿಳಿಸುವ ಸಲು ವಾಗಿ ವಿಶ್ವ ವಾಯು ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಂಡ್‌ ಯುರೋಪ್‌ ಮತ್ತು ಗ್ಲೋಬಲ್‌ ವಿಂಡ್‌ ಎನರ್ಜಿ ಕೌನ್ಸಿಲ್‌ ವತಿಯಿಂದ ಪ್ರತಿ ವರ್ಷ ಜೂನ್‌ 15ರಂದು ಆಚರಿಸಲಾ ಗುತ್ತಿದೆ.

ಗಾಳಿಯು ಒಂದು ಶಕ್ತಿಯಾಗಿದ್ದು ಅದನ್ನು ಬಳಸಿ ವಿದ್ಯುತ್‌ ಉತ್ಪಾದನೆ ಮಾಡಲಾಗು ತ್ತದೆ. ಈ ಕುರಿತ ಮಾಹಿತಿಯನ್ನು ತಿಳಿಸುವ ಉದ್ದೇಶದಿಂದ ವಿಶ್ವ ವಾಯುದಿನವನ್ನು ಆಚರಿಸಲಾಗುತ್ತಿದೆ.

ಈ ವರ್ಷದ ಥೀಮ್‌ ಫ್ಯೂಚರ್‌ ವಿಂಡ್‌. ವಿಶ್ವ ಮಟ್ಟದಲ್ಲಿ ಈ ಥೀಮ್‌ಗೆ ಸಂಬಂಧಿಸಿದಂತೆ ಫೋಟೋ ಸ್ಪರ್ಧೆ ಏರ್ಪಡಿಸಲಾಗಿದೆ. ವಾಯು ಶಕ್ತಿಯು ಇಂದಿಗೆ ಮತ್ತು ಭವಿಷ್ಯಕ್ಕೂ ಒಂದು ಶಕ್ತಿ ಎನ್ನುವುದನ್ನು ಸಾರುವುದಕ್ಕಾಗಿ ಈ ಥೀಮ್‌ ಅನ್ನು ಈ ವರ್ಷ ಆಯ್ಕೆ ಮಾಡಲಾಗಿದೆ. ಈ ದಿನ ತಜ್ಞರನ್ನು ಸೇರಿಸಿ ಕಾರ್ಯಕ್ರಮ ಆಯೋಜಿಸಿ ವಾಯು ಶಕ್ತಿಗೆ ಬೆಂಬಲ ನೀಡುವಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅಲ್ಲದೇ ಸಾರ್ವಜ ನಿಕರಿಗೆ ಈ ದಿನ ವಿಂಡ್‌ ಫಾಮ್ಸ್‌ìಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯ ವೈಖರಿಗಳ ಪರಿಶೀಲನೆ ನಡೆಸಲು ಅವಕಾಶ ನೀಡಲಾಗುತ್ತದೆ.

ಹಲವಾರು ಕಡೆ ಕಲ್ಲಿದ್ದಲು ಇತರ ಇಂಧನಗಳ ಬದಲಾಗಿ ವಾಯು ಶಕ್ತಿಯನ್ನು ಬಳಕೆ ಮಾಡುತ್ತಾರೆ. ಇಂದು ಸುಮಾರು 90ಕ್ಕೂ ಅಧಿಕ ದೇಶಗಳು ವಾಯುಶಕ್ತಿಯ ಬಳಕೆ ಮಾಡುತ್ತಿದ್ದು, ಇದು ಕಡಿಮೆ ಖರ್ಚಿನ ಮೂಲಕ ಉತ್ಪಾದಿಸುವ ಶಕ್ತಿಯಾಗಿದೆ. ವಿಶ್ವದ 70ಕ್ಕೂ ಅಧಿಕ ದೇಶಗಳು ವಿಂಡ್‌ ಪಾಮ್ಸ್‌ìಗೆ ಸೇರಿಕೊಂಡು ಶುದ್ಧ ಗಾಳಿಯ ಮೂಲಕ ಶಕ್ತಿಯನ್ನು ಉತ್ಪಾದಿಸುತ್ತಿವೆ.

2007ರಲ್ಲಿ ಮೊದಲಿಗೆ ಯುರೋಪಿಯನ್‌ ವಿಂಡ್‌ ಎನರ್ಜಿ ಕೌನ್ಸಿಲ್‌ ಯುರೋಪ್‌ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆಗ ಇದರ ಪ್ರಮುಖ ಉದ್ದೇಶವೆಂದರೆ ರಾಷ್ಟ್ರೀಯ ವಾಯು ಶಕ್ತಿ ಉತ್ಪಾದನ ಸಂಘಗಳು ಮತ್ತು ಕಂಪೆನಿಗಳು ವಾಯು ಶಕ್ತಿ ಕ್ಷೇತ್ರದಲ್ಲಿ ಚಟುವಟಿಕೆಯಿಂದಿರುವುದು ಮತ್ತು ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿತ್ತು. ಮೊದಲ ವಾಯು ದಿನಾಚರಣೆ ಯುರೋಪಿನ 18 ದೇಶಗಳನ್ನು ತಲುಪಿತು. ಇದ ರಲ್ಲಿ 35,000ಕ್ಕೂ ಅಧಿಕ ಜನರು ಭಾಗವಹಿಸಿ ದ್ದರು. 2008ರಲ್ಲಿ ವಾಯು ದಿನಾಚರಣೆಯು ಯುರೋಪಿನ 20 ದೇಶಗಳನ್ನು ಮತ್ತು 1 ಲಕ್ಷಕ್ಕೂ ಅಧಿಕ ಜನರನ್ನು ತಲುಪಿತು.

ಯುರೋಪಿಯನ್‌ ವಿಂಡ್‌ ಎನರ್ಜಿ ಕೌನ್ಸಿಲ್‌ 2009ರಲ್ಲಿ ಗ್ಲೋಬಲ್‌ ವಿಂಡ್‌ ಎನರ್ಜಿ ಕೌನ್ಸಿಲ್‌ನೊಂದಿಗೆ ಸೇರಿಕೊಂಡು ತನ್ನ ವ್ಯಾಪ್ತಿಯನ್ನು ವಿಶ್ವಮಟ್ಟಕ್ಕೆ ವಿಸ್ತರಿಸಿತು.
2009ರ ಅನಂತರ ವಿಶ್ವ ಮಟ್ಟದಲ್ಲಿ ವಾಯು ದಿನಾಚರಣೆ ಆರಂಭವಾಗಿದ್ದು, ಇದೇ ವರ್ಷದಲ್ಲಿ ಪೋರ್ಚ್‌ಗಲ್‌ನಲ್ಲಿ ವಿಂಡ್‌ ಪೆರೇಡ್‌ ಎಂಬ ಕಾರ್ಯಕ್ರಮ ಮಾಡುವುದರ ಮೂಲಕ ವಿಶ್ವ ವಾಯು ದಿನವನ್ನು ಆಚರಣೆ ಮಾಡಿದರು. ಮಕ್ಕಳನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಲು ನಕಲಿ ವಾಯು ಟರ್ಬೈನ್‌ ಚಿತ್ರ ಸ್ಪರ್ಧೆ ಏರ್ಪಡಿಸಲಾ ಗಿ ತ್ತು. 2012ರಲ್ಲಿ ವಿಶೇಷವಾಗಿ ವಿಶ್ವಮಟ್ಟದಲ್ಲಿ ವಿಂಡ್‌ ಇನ್‌ ಮೈಂಡ್‌ ಎಂಬ ಛಾಯಾಚಿತ್ರಗ್ರಹಣ ಸ್ಪರ್ಧೆಯನ್ನು ಏರ್ಪಡಿಸಿದ್ದರು. 40ಕ್ಕೂ ಹೆಚ್ಚು ದೇಶಗಳು ಇದರಲ್ಲಿ ಭಾಗವಹಿಸಿ 2,300 ಫೋಟೋಗಳು ಸ್ಪರ್ಧೆಯಲ್ಲಿ ಸಿಕ್ಕಿವೆ. ಈ ವರ್ಷ 300ಕ್ಕೂ ಅಧಿಕ ಕಾರ್ಯಕ್ರಮಗಳ ಮೂಲಕ 35 ದೇಶಕ್ಕೆ ವಿಸ್ತರಿಸಿದ್ದು 1 ಮಿಲಿಯನ್‌ ಜನರನ್ನು ಇದರಲ್ಲಿ ಭಾಗವಹಿಸುವಂತೆ ಮಾಡಲಾ ಗಿದೆ. 2018ರ ಸಮೀಕ್ಷೆ ಪ್ರಕಾರ ಚೀನವು ವಾಯು ಶಕ್ತಿಯ ಉತ್ಪಾದನೆಯಲ್ಲಿ ಮೊದಲನೇ ಸ್ಥಾನ ದ ಲ್ಲಿದಲ್ಲಿದ್ದ ರೆ ಭಾರತ ನಾಲ್ಕನೇ ಸ್ಥಾನದಲ್ಲಿದೆ.

2019ರ ಗುರಿ
-ವಿಶ್ವ ವಾಯು ದಿನದ ಅಭಿಯಾನಕ್ಕೆ ಸೇರುವುದು
-ಗಾಳಿ ಶಕ್ತಿಯ ಕುರಿತು ತಿಳಿದುಕೊಳ್ಳುವುದು.
-ವಿವಿಧ ನಗರಗಳಲ್ಲಿ ಪ್ರದರ್ಶನ ಟರ್ಬೈನ್‌ ಏರ್ಪಡಿಸಿ ಅವುಗಳಿಗೆ ಹೆಚ್ಚು ಪ್ರಚಾರ ನೀಡುವುದು.
– ಕಾರ್ಯಾಗಾರಗಳನ್ನು ಆಯೋಜಿಸಿ ಅವುಗಳಲ್ಲಿ ಜನರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸು ವಂತೆ ಮಾಡು ವುದು
-ವಾಯು ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸುವುದು.
-ವಿಂಡ್‌ ಪೆರೇಡ್‌ಗಳನ್ನು ಸ್ಥಾಪಿಸುವುದು.

-ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.