ಸಾರ್ವಜನಿಕ ಶೌಚಾಲಯದಲ್ಲೇ ಬದುಕು


Team Udayavani, Aug 5, 2018, 9:09 AM IST

toilet.png

ಶಿರ್ವ: ಇಲ್ಲೊಂದು ಶೌಚಾಲಯ. ಅದರೊಳಗೆ ಹೋಗುತ್ತಿದ್ದಂತೆ ಅಕ್ಕಪಕ್ಕದಲ್ಲಿ ದಿನಸಿ ಸಾಮಾನು, ಪಾತ್ರೆಪಗಡಿ, ಗೋಡೆಯಲ್ಲಿ ದೇವರ ಫೊಟೋ, ಉರಿಯುತ್ತಿರುವ ಅಗರಬತ್ತಿ! ಆಕಡೆ ಚಾಪೆ, ತಲೆದಿಂಬು, ತಿರುಗುವ ಟೇಬಲ್‌
ಫ್ಯಾನು. ಆದರೆ ಇದು ವಾಸದ ಮನೆಯಲ್ಲ, ನಿಜಕ್ಕೂ ಶೌಚಾಲಯ. 

ಬಹಿರ್ದೆಸೆಗೆ ಹೋಗಬೇಕಾದ ಜಾಗದಲ್ಲೇ ವ್ಯಕ್ತಿ ಅಡುಗೆ, ಊಟ, ನಿದ್ದೆ ಮಾಡುತ್ತ ವಾಸಿಸುತ್ತಿದ್ದರೆ ಹೇಗಿರಬೇಡ? ಇಂತಹ ವಿದ್ಯಮಾನ ಶಿರ್ವ ಗ್ರಾಪಂ ಕಚೇರಿ ಮತ್ತು ಬಸ್ಸು ನಿಲ್ದಾಣದ ಸನಿಹದ ಸಾರ್ವಜನಿಕ ಶೌಚಾಲಯದಲ್ಲಿ ಬೆಳಕಿಗೆ ಬಂದಿದೆ.   

ಬಿಹಾರಿ ವ್ಯಕ್ತಿಯ ಕಷ್ಟ
ಹೀಗೆ ಶೌಚಾಲಯದಲ್ಲೇ ಬದುಕು ಸಾಗಿಸುತ್ತಿರುವ ವ್ಯಕ್ತಿ ಬಿಹಾರ ಮೂಲದ ರಜಪೂತ ಕುಟುಂಬದ ದಿವಾಕರ್‌ ಸಿಂಗ್‌ (24). ಉದ್ಯೋಗ ಅರಸಿ ಇಲ್ಲಿಗೆ ಬಂದಿದ್ದ. ಆತನಿಗೆ 3 ವರ್ಷಗಳ ಹಿಂದೆ ಶೌಚಾಲಯ ಹೊರಗುತ್ತಿಗೆ ಪಡೆದುಕೊಂಡಿದ್ದ ವ್ಯಕ್ತಿಯೊಬ್ಬರು ನಿರ್ವಹಣೆಯ ಕೆಲಸ ನೀಡಿದ್ದರು. ಆತ ಆ ವ್ಯಕ್ತಿಯೊಂದಿಗೆ ನ್ಯಾರ್ಮದ ಬಳಿಯ ಮನೆಯೊಂದರಲ್ಲಿ ವಾಸವಾಗಿದ್ದರು. ಆದರೆ ನಷ್ಟ ಹೊಂದಿದ್ದರಿಂದ ದಿವಾಕರ್‌ಗೆ ಜವಾಬ್ದಾರಿ ವಹಿಸಿ ತೆರಳಿದ್ದರು. ಬಳಿಕ ಮನೆ ಬಾಡಿಗೆ 3 ಸಾವಿರ ರೂ. ಕಟ್ಟಲಾಗದೇ ಮನೆ ಖಾಲಿ ಮಾಡಬೇಕಾಯಿತು. ಎಲ್ಲಿಯೂ ಕಡಿಮೆ ಬಾಡಿಗೆ ಮನೆ ದೊರೆಯದೆ,  ಅಪರಿಚಿತ ವ್ಯಕ್ತಿಗೆ ಮನೆ ಕೊಡಲು ಯಾರೂ ಒಪ್ಪದ್ದರಿಂದ ಕಳೆದ 5 ತಿಂಗಳಿಂದ ಶೌಚಾಲಯದಲ್ಲೇ ವಾಸಿಸುವಂತಾಗಿದೆ.  

ಥೇಟ್‌ ಮನೆಯ ಲುಕ್‌! 
ದಿವಾಕರ್‌ ಶೌಚಾಲಯದಲ್ಲಿ ವಾಸಿಸುತ್ತಿರುವುದರಿಂದ ಒಳಗೆಲ್ಲ ಥೇಟ್‌ ಮನೆಯಂತೆ ವ್ಯವಸ್ಥೆ ಇದೆ. ದಿನಸಿ
ಸಾಮಾನು, ಪಾತ್ರೆಗಳು, ಅಡುಗೆಗೆ ಬೇಕಾದ ವಸ್ತುಗಳನ್ನು ಪೇರಿಸಿಟ್ಟಿದ್ದಾರೆ. 

ಮಲಗಲೂ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸಾಮಾನ್ಯರಿಗೆ ಇದು ಮನೆಯೋ? ಶೌಚಾಲಯವೋ ಎಂಬಂತೆ ಇದೆ. ಬೆಳಗ್ಗೆದ್ದು ಶೌಚಾಲಯ ಶುಚಿಗೊಳಿಸಿ, ತಿಂಡಿ ಮುಗಿಸಿ ಕುಳಿತರೆ, ರಾತ್ರಿಯಾಗುತ್ತಲೇ ಶೌಚಾಲಯ ತೊಳೆವ ದಿವಾಕರ್‌ ಅಡುಗೆ ತಯಾರಿ ಶುರು ಮಾಡುತ್ತಾರೆ. ಬಳಿಕ ಅಲ್ಲೇ ಮಲಗುವುದು ಆತರಿಗೆ ಅಭ್ಯಾಸವಾಗಿದ್ದು ಅದೇ ಮೆಚ್ಚುಗೆಯಾಗಿದೆ ಕೂಡ! 

ಅಡುಗೆ-ಊಟ-ನಿದ್ದೆ ಅಲ್ಲೇ!
ರಾತ್ರಿ ಶೌಚಾಲಯ ತೊಳೆದ ಬಳಿಕ ಅಲ್ಲಿಯೇ ಅಡುಗೆ ತಯಾರಿಸಿ, ಊಟ ಮಾಡಿ ಮಲಗುತ್ತಿರುವ ದಿವಾಕರ್‌ ಬದುಕು ತೀರ ದಯನೀಯವಾಗಿದೆ. ಹಗಲಿಡೀ ವಾಸನೆ ನಡುವೆ ಇದ್ದು, ರಾತ್ರಿ ಶುಚಿಗೊಳಿಸಲು ಹಾಕಿದ ರಾಸಾ ಯನಿಕದ ಘಾಟಿನಲ್ಲೇ ಮಲಗಬೇಕಾದ ಕಷ್ಟ ಆತನದ್ದು. 

ಮನವಿ ನೀಡಿದ್ದರೂ ಪ್ರಯೋಜನವಿಲ್ಲ
ವಾಸಕ್ಕೊಂದು ವ್ಯವಸ್ಥೆ ಮಾಡಿಕೊಡಿ ಎಂದು ಈಗಾಗಲೇ ದಿವಾಕರ್‌ ಶಿರ್ವ ಗ್ರಾ.ಪಂ.ಗೆ 2-3 ಬಾರಿ ಮೌಖೀಕವಾಗಿ ಮನವಿ ಮಾಡಿದ್ದಾರೆ. ಆದರೆ ಈತನ ಮನವಿಗೆ ಸ್ಪಂದನೆಯೇ ಇರಲಿಲ್ಲ. ಹೀಗಾಗಿ ಶೌಚಾಲಯದಲ್ಲೇ ಉಳಿಯುವಂತಾಗಿದೆ. ಜತೆಗೆ ವ್ಯಕ್ತಿಯೋರ್ವ ಮಾನವ ಹಕ್ಕುಗಳಿಂದ ವಂಚಿತವಾಗಿ ಹೀನಾಯ ಸ್ಥಿತಿಯಲ್ಲಿ ಬದುಕುವಂತಾಗಿದೆ.  

ಊಟಕ್ಕೂ ತತ್ವಾರ
ಶೌಚಾಲಯಕ್ಕೆ ಬಂದವರಿಂದ ವಸೂಲು ಮಾಡುವ ಶುಲ್ಕದಲ್ಲಿ ದಿನಕ್ಕೆ 250-300 ರೂ. ಸಂಗ್ರಹವಾಗುತ್ತಿದೆ. ಇದರಲ್ಲಿ ಬಹಳಷ್ಟು ನೀರು, ವಿದ್ಯುತ್‌ ಮತ್ತು ಸ್ವತ್ಛತೆಗೆ ಖರ್ಚಾಗುತ್ತಿದೆ. ಉಳಿದ ಚಿಲ್ಲರೆ ಹಣದಲ್ಲಿ ಆತ ಜೀವನ ನಿರ್ವಹಣೆ ಮಾಡಬೇಕಿದೆ. ಕೆಲವೊಮ್ಮೆ ಊಟಕ್ಕೂ ಇಲ್ಲದ ಪರಿಸ್ಥಿತಿ ಇದೆ. ಹೀಗಿರುವಾಗ ಬಾಡಿಗೆ ಮನೆ ಮಾಡುವುದು ಸಾಧ್ಯವೆ? ನಮ್ಮಂಥವರಿಗೆ ಯಾರು ಬಾಡಿಗೆ ಮನೆ ಕೊಡುತ್ತಾರೆ? ಎನ್ನುವುದು ಸಿಂಗ್‌ ಅವರ ಪ್ರಶ್ನೆ.

ಕಿತ್ತು ತಿನ್ನುವ ಬಡತನ 
ದಿವಾಕರ್‌ ಅವರ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮನೆಯಲ್ಲಿ ತಂದೆ-ತಾಯಿ, ಮೂವರು ಸಹೋದರರು ಹಾಗೂ ಓರ್ವ ಸಹೋದರಿ ಇದ್ದಾರೆ. ಸ್ವಲ್ಪ ಭೂಮಿ ಇದ್ದರೂ ತಕರಾರು ಇರುವುದರಿಂದ ಬಳಕೆ ಸಾಧ್ಯವಿಲ್ಲ. ಹಿರಿಯ ಮಗನಾಗಿ ದುಡಿಯಲು ಬಂದಿದ್ದೇನೆ. ಇಲ್ಲಿ ನನ್ನ ಜೀವನ ನಿರ್ವಹಣೆಯೇ ಕಷ್ಟವಾಗಿದೆ.  ಮನೆಗೆ ಎಲ್ಲಿಂದ ಹಣ ಕಳುಹಿಸಲಿ ಎಂಬುದು ದಿವಾಕರ್‌ ಅಳಲು. ಉಳಿಯಲು ಬೇರೆ ಅವಕಾಶವೂ ಇಲ್ಲದಿರುವುದರಿಂದ ಆತ ಬೇರೆ ಕೆಲಸದ ಆಲೋಚನೆ ಮಾಡುವುದೂ ಕಷ್ಟವಾಗಿದೆ.  

ಟಾಪ್ ನ್ಯೂಸ್

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.